ಗ್ರಾಮಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ರಾಜ್ಯ ಸಂಯೋಜಕ ಲಿಂಗಣ್ಣ ಅವರು ಮಾತನಾಡಿ, ಗ್ರಾಮೀಣ ನಿರುದ್ಯೋಗ ಯುವಕರಿಗೆ ರಾಜ್ಯದಲ್ಲಿರುವ ರುಡ್ಸೆಟ್ ಮತ್ತು ಗ್ರಾಮಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆಗಳಲ್ಲಿ ವಿವಿಧ ಉದ್ಯೋಗ ಕೈಗೊಳ್ಳಲು ಉಚಿತ ತರಬೇತಿ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಯುವ ಸಮುದಾಯ ಪಡೆದುಕೊಳ್ಳಬೇಕು ಎಂದು ಹೇಳಿದರು.
ಐಎನ್ಜಿ ವೈಶ್ಯ ಬ್ಯಾಂಕ್ನ ನಿರ್ದೇಶಕ ಕಪ್ಪತ್ತನವರ, ನಿವೃತ್ತ ಬ್ಯಾಂಕ್ ಅಧಿಕಾರಿ ನ್ಯಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಜಿ.ಮೊಹರೆ, ಸಿ.ಎಸ್.ಬಿರಾದಾರ, ಲಕ್ಷ್ಮಣ ತಾಳಿಕೋಟಿ, ಬಸಮ್ಮ ಹಿರೇಮಠ ಇದ್ದರು. ಕೆಎಫ್ಆರ್ಸಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎಸ್.ಹಾಲಳ್ಳಿ ಸ್ವಾಗತಿಸಿದರು.