‘ಈ ಬಾರಿ ಮಳೆಯ ಕೊರತೆಯಿಂದ ಜಾನುವಾರುಗಳಿಗೆ ಮೇವಿನ ಕೊರತೆಯಿದ್ದು, ಮೇಯಿಸಲು ಗ್ರಾಮದ ಹೊರವಲಯದ ಕಾಲುವೆಯ ಬಳಿಯ ಗುಡ್ಡಕ್ಕೆ ತೆರಳಲಾಗಿತ್ತು. ಗುಡ್ಡದ ಪಕ್ಕದಲ್ಲಿನ ಜಮೀನಿನಲ್ಲಿನ ಹಸರಿನ ಮೇವು ಕಂಡ ತಕ್ಷಣ ಕುರಿಗಳು ಓಡಿಹೋಗಿ ಜೋಳದ ಫಸಲಿನ ಚಿಗುರು ತಿಂದು ಹೊಟ್ಟೆ ಉಬ್ಬರದಿಂದ ಮೃತಪಟ್ಟಿವೆ. ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಅನುಕೂಲವಾಗುತ್ತದೆ’ ಎಂದು ಕುರಿಗಾಯಿ ಪ್ರಕಾಶ್ ಹೇಳಿದರು.