<p><strong>ಸಿರುಗುಪ್ಪ</strong>: ಬಳ್ಳಾರಿಯ ಅಧಿದೇವತೆ ದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವಕ್ಕೆ ಸಿರುಗುಪ್ಪದ ಗಾಣಿಗರ ಸಮಾಜದಿಂದ ಕಳುಹಿಸಲಾಗುವ ಒಂದು ಜೊತೆ ಎತ್ತುಗಳ ಮೆರವಣಿಗೆಯನ್ನು ಸೋಮವಾರ ಪಟ್ಟಣದಲ್ಲಿ ನಡೆಸಲಾಯಿತು. </p>.<p>ಸಿಡಿಬಂಡಿ ರಥೋತ್ಸವ ಇಂದು ನಡೆಯಲಿದೆ. ಸಿಡಿಬಂಡಿಗೆ ಮೂರು ಜೋಡಿ ಎತ್ತುಗಳನ್ನು ಹೂಡಲಾಗುತ್ತದೆ. ಇದರಲ್ಲಿ ಎರಡು ಜೊತೆ ಬಳ್ಳಾರಿಯ ಗಾಣಿಗರ ಸಮುದಾಯದ್ದಾದರೆ, ಒಂದು ಜೊತೆ ಸಿರುಗುಪ್ಪ ಗಾಣಿಗರ ಸಮಾಜದ್ದಾಗಿರುತ್ತದೆ. ಇದು ಹಿಂದಿನಿಂದಲೂ ನಡೆದು ಬಂದಿರುವ ಪರಂಪರೆ. </p>.<p>ಸಿಡಿಬಂಡಿಗೆ ಒಂದು ತಿಂಗಳಿಗೆ ಮೊದಲೇ ಸಿರುಗುಪ್ಪದ ಗಾಣಿಗ ಸುಮುದಾಯದವರು ಬಾಗಲಕೋಟೆಯಿಂದ ಉತ್ತಮ, ಆರೋಗ್ಯಂಥ ಕಿಲಾರಿ ಎತ್ತುಗಳನ್ನು ತರುತ್ತಾರೆ. ಸಿಡಿಬಂಡಿ ಎಳೆಯಲು ಬೇಕಾದ ಎತ್ತರದ ನಿಲುವಿನೊಂದಿಗೆ ಆಕರ್ಷಕವಾಗಿ ಕಾಣುವ ಜೋಡಿ ಎತ್ತುಗಳನ್ನು ಈಗಾಗಲೇ ₹1.50 ಲಕ್ಷ ನೀಡಿ ಖರೀದಿಸಲಾಗಿದೆ. ಅವುಗಳಿಗೆ ತಾಲೀಮು ನೀಡಲಾಗಿದೆ. </p>.<p>ಸಿಡಿಬಂಡಿ ಒಂದು ದಿನ ಮುಂಚಿತವಾಗಿ ಜೋಡಿ ಎತ್ತುಗಳನ್ನು ಸಿಂಗರಿಸಿ, ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆರಾಧ್ಯಕರ ಮನೆಗಳಲ್ಲಿ ಪೂಜೆ ಮಾಡಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಂತರ ಬಳ್ಳಾರಿಗೆ ಲಾರಿ ಮೂಲಕ ಕಳುಹಿಸಲಾಗಿದೆ. </p>.<p>ಜೊಡಿ ಎತ್ತುಗಳು ಬಳ್ಳಾರಿಯ ಕೌಲ್ ಬಜಾರನ ದಿಗ್ಗಿ ಮಾಧವಯ್ಯ ರಸ್ತೆಯಿಂದ ಮೆರವಣಿಗೆ ಮೂಲಕ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಹೊರಡುತ್ತವೆ. 24ರಂದು ಸಿಡಿಬಂಡಿ ಎಳೆಯಲಿವೆ ಎಂದು ಗಾಣಿಗ ಸಮಾಜದ ರಮೇಶ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ</strong>: ಬಳ್ಳಾರಿಯ ಅಧಿದೇವತೆ ದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವಕ್ಕೆ ಸಿರುಗುಪ್ಪದ ಗಾಣಿಗರ ಸಮಾಜದಿಂದ ಕಳುಹಿಸಲಾಗುವ ಒಂದು ಜೊತೆ ಎತ್ತುಗಳ ಮೆರವಣಿಗೆಯನ್ನು ಸೋಮವಾರ ಪಟ್ಟಣದಲ್ಲಿ ನಡೆಸಲಾಯಿತು. </p>.<p>ಸಿಡಿಬಂಡಿ ರಥೋತ್ಸವ ಇಂದು ನಡೆಯಲಿದೆ. ಸಿಡಿಬಂಡಿಗೆ ಮೂರು ಜೋಡಿ ಎತ್ತುಗಳನ್ನು ಹೂಡಲಾಗುತ್ತದೆ. ಇದರಲ್ಲಿ ಎರಡು ಜೊತೆ ಬಳ್ಳಾರಿಯ ಗಾಣಿಗರ ಸಮುದಾಯದ್ದಾದರೆ, ಒಂದು ಜೊತೆ ಸಿರುಗುಪ್ಪ ಗಾಣಿಗರ ಸಮಾಜದ್ದಾಗಿರುತ್ತದೆ. ಇದು ಹಿಂದಿನಿಂದಲೂ ನಡೆದು ಬಂದಿರುವ ಪರಂಪರೆ. </p>.<p>ಸಿಡಿಬಂಡಿಗೆ ಒಂದು ತಿಂಗಳಿಗೆ ಮೊದಲೇ ಸಿರುಗುಪ್ಪದ ಗಾಣಿಗ ಸುಮುದಾಯದವರು ಬಾಗಲಕೋಟೆಯಿಂದ ಉತ್ತಮ, ಆರೋಗ್ಯಂಥ ಕಿಲಾರಿ ಎತ್ತುಗಳನ್ನು ತರುತ್ತಾರೆ. ಸಿಡಿಬಂಡಿ ಎಳೆಯಲು ಬೇಕಾದ ಎತ್ತರದ ನಿಲುವಿನೊಂದಿಗೆ ಆಕರ್ಷಕವಾಗಿ ಕಾಣುವ ಜೋಡಿ ಎತ್ತುಗಳನ್ನು ಈಗಾಗಲೇ ₹1.50 ಲಕ್ಷ ನೀಡಿ ಖರೀದಿಸಲಾಗಿದೆ. ಅವುಗಳಿಗೆ ತಾಲೀಮು ನೀಡಲಾಗಿದೆ. </p>.<p>ಸಿಡಿಬಂಡಿ ಒಂದು ದಿನ ಮುಂಚಿತವಾಗಿ ಜೋಡಿ ಎತ್ತುಗಳನ್ನು ಸಿಂಗರಿಸಿ, ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆರಾಧ್ಯಕರ ಮನೆಗಳಲ್ಲಿ ಪೂಜೆ ಮಾಡಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಂತರ ಬಳ್ಳಾರಿಗೆ ಲಾರಿ ಮೂಲಕ ಕಳುಹಿಸಲಾಗಿದೆ. </p>.<p>ಜೊಡಿ ಎತ್ತುಗಳು ಬಳ್ಳಾರಿಯ ಕೌಲ್ ಬಜಾರನ ದಿಗ್ಗಿ ಮಾಧವಯ್ಯ ರಸ್ತೆಯಿಂದ ಮೆರವಣಿಗೆ ಮೂಲಕ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಹೊರಡುತ್ತವೆ. 24ರಂದು ಸಿಡಿಬಂಡಿ ಎಳೆಯಲಿವೆ ಎಂದು ಗಾಣಿಗ ಸಮಾಜದ ರಮೇಶ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>