ಡಿಸೆಂಬರ್ ಎರಡನೇ ವಾರ ನಗರದ ರಾಣಿಪೇಟೆಯಲ್ಲಿ ರಣಹದ್ದು ಅಸ್ವಸ್ಥಗೊಂಡು ಬಿದ್ದಿತ್ತು. ಬಳಿಕ ಶಿವಶಂಕರ ಬಣಗಾರ ಹಾಗೂ ಅಲ್ಲಿನ ಮಕ್ಕಳು ಸೇರಿಕೊಂಡು ಉಪಚರಿಸಿ, ಬಳಿಕ ವಾಜಪೇಯಿ ಉದ್ಯಾನಕ್ಕೆ ತಲುಪಿಸಿದರು. ಮೃಗಾಲಯದ ಪಶುವೈದ್ಯೆ ಡಾ.ವಾಣಿ ರಣಹದ್ದನ್ನು ಪರೀಕ್ಷಿಸಿ, ಅತಿಯಾದ ನಿರ್ಜಲೀಕರಣದಿಂದ ಬಳಲಿದೆ ಎಂದು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಹಾಗೂ ಆಹಾರೋಪಚಾರ ಮಾಡಿದ್ದರಿಂದ ಗುಣಮುಖವಾಯಿತು.