ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ ಮಹಾನಗರ ಪಾಲಿಕೆ: ಮೇಯರ್‌, ಉಪ ಮೇಯರ್‌ ಆಯ್ಕೆ ಇಂದು

ಕಾಂಗ್ರೆಸ್‌ನಲ್ಲಿ ನಾಲ್ವರು ಆಕಾಂಕ್ಷಿಗಳು | ಬಹುಮತವಿಲ್ಲದ ಬಿಜೆಪಿಯಿಂದ ಸಾಂಕೇತಿಕ ಸ್ಪರ್ಧೆ
Published : 21 ಜೂನ್ 2024, 5:21 IST
Last Updated : 21 ಜೂನ್ 2024, 5:21 IST
ಫಾಲೋ ಮಾಡಿ
Comments
ಯಾವ ಗೊಂದಲವೂ ಇಲ್ಲ ಪಕ್ಷದ ಎಲ್ಲಾ ಕಾರ್ಪೊರೇಟರ್‌ಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಒಬ್ಬೊಬ್ಬರನ್ನೇ ಕರೆದು ಮಾತನಾಡಿಸಿದ್ದೇವೆ. ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಎಲ್ಲರೂ ಹೇಳಿದ್ದಾರೆ. ಹಿಂದಿನ ಚುನಾವಣೆಗಳಂತೆ ಈ ಬಾರಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷ ಸೂಚಿಸುವವರು ಮೇಯರ್‌ ಆಗಿ ಆಯ್ಕೆಯಾಗಲಿದ್ದಾರೆ. ಚುನಾವಣೆ ಸುಸೂತ್ರವಾಗಿ ನೆರವೇರಲಿದೆ.
  – ನಾರಾಯಣಸ್ವಾಮಿ ಕಾಂಗ್ರೆಸ್‌ ವೀಕ್ಷಕ  
ಬೆಂಬಲ ಕೋರಿಲ್ಲ ಕೋನಂಕಿ ತಿಲಕ್‌ ಅವರನ್ನು ಮೇಯರ್‌ ಸ್ಥಾನಕ್ಕೆ ಮತ್ತು ಸುರೇಖಾ ಮಲ್ಲನಗೌಡ ಅವರನ್ನು ಉಪ ಮೇಯರ್‌ ಸ್ಥಾನದ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದ್ದೇವೆ. ಪಕ್ಷೇತರರೊಬ್ಬರು ಮೇಯರ್‌ ಚುನಾವಣೆಗೆ ಆಕಾಂಕ್ಷಿಯಾಗಿದ್ದಾರೆ. ಅವರು ನಮ್ಮ ಬೆಂಬಲ ಕೇಳಿಲ್ಲ. ಬಿಜೆಪಿ ಬೆಂಬಲ ಕೋರಿದ್ದರೆ ಪರಿಶೀಲಿಸಬಹುದಿತ್ತು. ಆದರೆ ಅವರು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಮ್ಮ ಬೆಂಬಲ ಇಲ್ಲ. 
ಅನಿಲ್‌ ಕುಮಾರ್‌ ಮೋಕಾ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ 
‘ಯಾವ ಗೊಂದಲವೂ ಇಲ್ಲ’
ಪಕ್ಷದ ಎಲ್ಲಾ ಕಾರ್ಪೊರೇಟರ್‌ಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಒಬ್ಬೊಬ್ಬರನ್ನೇ ಕರೆದು ಮಾತನಾಡಿಸಿದ್ದೇವೆ. ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಎಲ್ಲರೂ ಹೇಳಿದ್ದಾರೆ. ಹಿಂದಿನ ಚುನಾವಣೆಗಳಂತೆ ಈ ಬಾರಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷ ಸೂಚಿಸುವವರು ಮೇಯರ್‌ ಆಗಿ ಆಯ್ಕೆಯಾಗಲಿದ್ದಾರೆ. ಚುನಾವಣೆ ಸುಸೂತ್ರವಾಗಿ ನೆರವೇರಲಿದೆ. – ನಾರಾಯಣಸ್ವಾಮಿ ಕಾಂಗ್ರೆಸ್‌ ವೀಕ್ಷಕ ‘ಬೆಂಬಲ ಕೋರಿಲ್ಲ’ ಕೋನಂಕಿ ತಿಲಕ್‌ ಅವರನ್ನು ಮೇಯರ್‌ ಸ್ಥಾನಕ್ಕೆ ಮತ್ತು ಸುರೇಖಾ ಮಲ್ಲನಗೌಡ ಅವರನ್ನು ಉಪ ಮೇಯರ್‌ ಸ್ಥಾನದ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದ್ದೇವೆ. ಪಕ್ಷೇತರರೊಬ್ಬರು ಮೇಯರ್‌ ಚುನಾವಣೆಗೆ ಆಕಾಂಕ್ಷಿಯಾಗಿದ್ದಾರೆ. ಅವರು ನಮ್ಮ ಬೆಂಬಲ ಕೇಳಿಲ್ಲ. ಬಿಜೆಪಿ ಬೆಂಬಲ ಕೋರಿದ್ದರೆ ಪರಿಶೀಲಿಸಬಹುದಿತ್ತು. ಆದರೆ ಅವರು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಮ್ಮ ಬೆಂಬಲ ಇಲ್ಲ. ಅನಿಲ್‌ ಕುಮಾರ್‌ ಮೋಕಾ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ  ಆಂಜನೇಯಲು–ನಾಸಿರ್‌ ವಾಗ್ವಾದ  ಪಾಲಿಕೆ ಮೇಯರ್‌ ಮತ್ತು ಉಪಮೇಯರ್‌ ಅಭ್ಯರ್ಥಿಗಳ ಆಯ್ಕೆಗಾಗಿ ನಗರದ ಪ್ರತಿಷ್ಠಿತ ಹೊಟೇಲ್‌ವೊಂದರಲ್ಲಿ ಕಾಂಗ್ರೆಸ್‌ ಶಾಸಕರು ಸಂಸದರು ಮುಖಂಡರು ಗುರುವಾರ ಸಭೆ ಸೇರಿದ್ದರು. ಈ ಸಭೆಯಲ್ಲಿ ಶಾಸಕರು ಮತ್ತು ಸಂಸದರು ಮಾತ್ರವೇ ಪಾಲ್ಗೊಳ್ಳಬೇಕು ಎಂದು ನಿರ್ಧರಿಸಲಾಗಿತ್ತಾದರೂ ಬುಡಾ ಅಧ್ಯಕ್ಷ ಆಂಜನೇಯಲು ಸಭೆಯಲ್ಲಿ ಪಾಲ್ಗೊಳ್ಳಲು ಮುಂದಾದರು ಎನ್ನಲಾಗಿದೆ. ಆಗ ಆಂಜನೇಯಲು ಅವರನ್ನು ತಡೆದ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಈ ಸಭೆಯಲ್ಲಿ ನೀವು ಪಾಲ್ಗೊಳ್ಳುವಂತಿಲ್ಲ ಎಂದು ಹೇಳಿದ್ದಾರೆ. ಇದರಿಂದ ಆಂಜನೇಯಲು ಅಸಮಾಧಾನಗೊಂಡರು ಎನ್ನಲಾಗಿದ್ದು ಹೊಟೇಲ್‌ನಲ್ಲಿ ಇಬ್ಬರೂ ವಾಗ್ವಾದ ನಡೆಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.  ಪಾಲಿಕೆ ಬಲಾಬಲಒಟ್ಟು ಸ್ಥಾನ;39 ಕಾಂಗ್ರೆಸ್‌;26 (21+5)ಬಿಜೆಪಿ;13 ಮತ ಲೆಕ್ಕಾಚಾರ  44 ಚುನಾವಣೆಯಲ್ಲಿ ಚಲಾವಣೆಯಾಗಲಿರುವ ಮತಗಳು  30 ಕಾಂಗ್ರೆಸ್‌ ಬಳಿ ಇರುವ ಮತಗಳು (ಪಾಲಿಕೆ ಸದಸ್ಯರು ಶಾಸಕರು ಸಂಸದರು) 14 ಬಿಜೆಪಿ ಬಳಿ ಇರುವ ಮತಗಳು (ಪಾಲಿಕೆ ಸದಸ್ಯರು ವಿಧಾನಪರಿಷತ್‌ ಸದಸ್ಯರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT