ಬಳ್ಳಾರಿ ಜಿಲ್ಲೆ ವಿಭಜನೆಯಾಗಿದೆ. ಐದು ತಾಲೂಕು ಉಳಿದಿದ್ದು, ಇವುಗಳಲ್ಲಿ ಮೂರು ಕಾಂಗ್ರೆಸ್, ಉಳಿದ ಎರಡು ಮಾತ್ರ ಬಿಜೆಪಿ ಅಧಿಕಾರಕ್ಕಿದೆ. ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಮುಂದಿನ ಚುನಾವಣೆಯಲ್ಲಿ ಐದು ಸ್ಥಾನಗಳು ಬಿಜೆಪಿ ತೆಕ್ಕೆಗೆ ಬರಲಿವೆ. ಬಿಜೆಪಿಯನ್ನು ಬಲಪಡಿಸಲು ಶಕ್ತಿ ಬಂದಂತೆ ಆಗುತ್ತದೆ. ಅಲ್ಲದೇ, ಚಿಕ್ಕ ಜಿಲ್ಲೆ ಆಗಿರೋದರಿಂದ ಅಭಿವೃದ್ಧಿಗೆ ಪೂರಕವಾಗಲಿದೆ. ಹೀಗಾಗಿ ಶಾಸಕರಾದ ಶ್ರೀರಾಮುಲು, ಜಿ.ಸೋಮಶೇಖರರೆಡ್ಡಿಗೆ ಸಚಿವಸ್ಥಾನ ನೀಡಬೇಕೆಂದು ಸದಸ್ಯರಾದ ಹನುಮಂತ, ಶ್ರೀನಿವಾಸ ಮೋತ್ಕರ ಮಾಧ್ಯಮಗೋಷ್ಠಿಯಲ್ಲಿಂದು ಒತ್ತಾಯಿಸಿದ್ದಾರೆ.