<p><strong>ಬಳ್ಳಾರಿ</strong>: ಅಂಗಾಂಗ ದಾನಕ್ಕೆ 5,000 ಜನರಿಂದ ಪ್ರತಿಜ್ಞೆ (ನೋಂದಣಿ) ಮಾಡಿಸಿದ ರಾಷ್ಟ್ರದ ಮೊದಲ ಜಿಲ್ಲೆ ಎಂಬುದಕ್ಕೆ ಬಳ್ಳಾರಿ ಪಾತ್ರವಾಗಿದೆ. ಇದು ಹೊಸ ಮೈಲುಗಲ್ಲು ಆಗಿದ್ದು, ದೇಶದ ಬೇರೆ ಯಾವ ಜಿಲ್ಲೆಯಲ್ಲೂ ಇಂತಹ ಸಾಧನೆ ಆಗಿಲ್ಲ.</p>.<p>ಬಳ್ಳಾರಿ ನಂತರದ ಸ್ಥಾನದಲ್ಲಿ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆ ಇದ್ದು, ಅಲ್ಲಿ ಈ ವರ್ಷ ಈವರೆಗೆ 4,382 ಮಂದಿ ಅಂಗಾಂಗ ದಾನದ ವಾಗ್ದಾನ ಮಾಡಿದ್ದಾರೆ. 3,745 ನೋಂದಣಿಯೊಂದಿಗೆ ಧಾರವಾಡ ಮೂರನೇ ಸ್ಥಾನದಲ್ಲಿದೆ. </p>.<p>‘ಅಂಗಾಂಗ ದಾನಕ್ಕೆ ಜನರನ್ನು ಉತ್ತೇಜಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ರಕ್ತದಾನ ಶಿಬಿರ, ತಾಯಂದಿರ ಸಭೆಗಳಲ್ಲಿ ನಿರಂತರ ಜಾಗೃತಿ ಮೂಡಿಸಲಾಗಿತ್ತು. ತಿಂಗಳಿಗೆ 500ರಂತೆ ಮುಂದಿನ ವರ್ಷ ಮಾರ್ಚ್ ವೇಳೆಗೆ ನೋಂದಣಿಯನ್ನು 7 ಸಾವಿರಕ್ಕೆ ಏರಿಸುವ ಗುರಿಯಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಮೇಶ್ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>ಮಿದುಳು ನಿಷ್ಕ್ರಿಯಗೊಂಡ ಒಬ್ಬ ವ್ಯಕ್ತಿಯು ಹೃದಯ, ಕಣ್ಣು, ಯಕೃತ್, ಶ್ವಾಸಕೋಶ, ಮೂತ್ರಪಿಂಡ ಸೇರಿ ಹಲವು ಅಂಗ ಮತ್ತು ಅಂಗಾಂಶಗಳನ್ನು ದಾನ ಮಾಡಬಹುದು. ಸ್ವಾಭಾವಿಕವಾಗಿ ಮೃತಪಟ್ಟ ವ್ಯಕ್ತಿಯಿಂದ ಪ್ರಧಾನವಾಗಿ ಕಣ್ಣನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ.</p>.<p>ಅಂಗಾಂಗ ದಾನಕ್ಕೆ ನೋಂದಣಿಯಾದರೆ ‘ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ’ಯು ವ್ಯಕ್ತಿಯ ಮೊಬೈಲ್, ಆಧಾರ್ ಸಂಖ್ಯೆಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ನೋಂದಣಿ ಬಗ್ಗೆ ಕಾರ್ಡ್ವೊಂದನ್ನು ನೀಡಿರುತ್ತದೆ. ಸಂದರ್ಭ ಬಂದಾಗ ಈ ಬಗ್ಗೆ ಸಂಬಂಧಿಸಿದವರ ಕುಟುಂಬಸ್ಥರಿಗೆ ತಿಳಿಸುವ ಸಂಸ್ಥೆ ಅಂಗಾಂಗ ಪಡೆಯುವ ಕಾರ್ಯ ಆರಂಭಿಸುತ್ತದೆ. </p>.<p><strong>ದೇಶದಲ್ಲಿ 2 ಲಕ್ಷ ದಾಟಿದ ನೋಂದಣಿ</strong></p>.<p>ದೇಶದಲ್ಲಿ ಡಿಸೆಂಬರ್ 6ರ ವರೆಗೆ ಒಟ್ಟು 2 ಲಕ್ಷ ಜನ ಅಂಗಾಂಗ ದಾನಕ್ಕೆ ಹೆಸರು ಕೊಟ್ಟಿದ್ದಾರೆ. ಇದರಲ್ಲಿ ರಾಜಸ್ಥಾನ (40,400) ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ(31,214), ಮೂರನೇ ಸ್ಥಾನದಲ್ಲಿ ಕರ್ನಾಟಕ (25,658), ನಾಲ್ಕನೇ ಸ್ಥಾನದಲ್ಲಿ ಮಧ್ಯಪ್ರದೇಶ (21492) ಮತ್ತು ಐದನೇ ಸ್ಥಾನದಲ್ಲಿ ತೆಲಂಗಾಣ (13,620) ಇದೆ. </p>.<p>ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಲು ಸಂಪರ್ಕಿಸಬೇಕಾದ ವೆಬ್ಸೈಟ್: https://notto.abdm.gov.in/register</p>.<div><blockquote>ಅಂಗಾಂಗ ದಾನದ ಬಗ್ಗೆ ಸಮಾಜ ಇನ್ನೂ ಜಾಗೃತವಾಗಿಲ್ಲ. ಸುಶಿಕ್ಷಿತರೇ ಇದಕ್ಕೆ ಹಿಂದೇಟು ಹಾಕುತ್ತಾರೆ. ಜತೆಗೆ ಮೌಢ್ಯವೂ ಕೆಲವರಲ್ಲಿದೆ. ಇದೆಲ್ಲದರ ನಡುವೆಯೂ ಬಳ್ಳಾರಿ ದೇಶಕ್ಕೇ ಮಾದರಿಯಾಗಿದೆ.</blockquote><span class="attribution">– ರಮೇಶ್ ಬಾಬು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ಅಂಗಾಂಗ ದಾನಕ್ಕೆ 5,000 ಜನರಿಂದ ಪ್ರತಿಜ್ಞೆ (ನೋಂದಣಿ) ಮಾಡಿಸಿದ ರಾಷ್ಟ್ರದ ಮೊದಲ ಜಿಲ್ಲೆ ಎಂಬುದಕ್ಕೆ ಬಳ್ಳಾರಿ ಪಾತ್ರವಾಗಿದೆ. ಇದು ಹೊಸ ಮೈಲುಗಲ್ಲು ಆಗಿದ್ದು, ದೇಶದ ಬೇರೆ ಯಾವ ಜಿಲ್ಲೆಯಲ್ಲೂ ಇಂತಹ ಸಾಧನೆ ಆಗಿಲ್ಲ.</p>.<p>ಬಳ್ಳಾರಿ ನಂತರದ ಸ್ಥಾನದಲ್ಲಿ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆ ಇದ್ದು, ಅಲ್ಲಿ ಈ ವರ್ಷ ಈವರೆಗೆ 4,382 ಮಂದಿ ಅಂಗಾಂಗ ದಾನದ ವಾಗ್ದಾನ ಮಾಡಿದ್ದಾರೆ. 3,745 ನೋಂದಣಿಯೊಂದಿಗೆ ಧಾರವಾಡ ಮೂರನೇ ಸ್ಥಾನದಲ್ಲಿದೆ. </p>.<p>‘ಅಂಗಾಂಗ ದಾನಕ್ಕೆ ಜನರನ್ನು ಉತ್ತೇಜಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ರಕ್ತದಾನ ಶಿಬಿರ, ತಾಯಂದಿರ ಸಭೆಗಳಲ್ಲಿ ನಿರಂತರ ಜಾಗೃತಿ ಮೂಡಿಸಲಾಗಿತ್ತು. ತಿಂಗಳಿಗೆ 500ರಂತೆ ಮುಂದಿನ ವರ್ಷ ಮಾರ್ಚ್ ವೇಳೆಗೆ ನೋಂದಣಿಯನ್ನು 7 ಸಾವಿರಕ್ಕೆ ಏರಿಸುವ ಗುರಿಯಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಮೇಶ್ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>ಮಿದುಳು ನಿಷ್ಕ್ರಿಯಗೊಂಡ ಒಬ್ಬ ವ್ಯಕ್ತಿಯು ಹೃದಯ, ಕಣ್ಣು, ಯಕೃತ್, ಶ್ವಾಸಕೋಶ, ಮೂತ್ರಪಿಂಡ ಸೇರಿ ಹಲವು ಅಂಗ ಮತ್ತು ಅಂಗಾಂಶಗಳನ್ನು ದಾನ ಮಾಡಬಹುದು. ಸ್ವಾಭಾವಿಕವಾಗಿ ಮೃತಪಟ್ಟ ವ್ಯಕ್ತಿಯಿಂದ ಪ್ರಧಾನವಾಗಿ ಕಣ್ಣನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ.</p>.<p>ಅಂಗಾಂಗ ದಾನಕ್ಕೆ ನೋಂದಣಿಯಾದರೆ ‘ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ’ಯು ವ್ಯಕ್ತಿಯ ಮೊಬೈಲ್, ಆಧಾರ್ ಸಂಖ್ಯೆಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ನೋಂದಣಿ ಬಗ್ಗೆ ಕಾರ್ಡ್ವೊಂದನ್ನು ನೀಡಿರುತ್ತದೆ. ಸಂದರ್ಭ ಬಂದಾಗ ಈ ಬಗ್ಗೆ ಸಂಬಂಧಿಸಿದವರ ಕುಟುಂಬಸ್ಥರಿಗೆ ತಿಳಿಸುವ ಸಂಸ್ಥೆ ಅಂಗಾಂಗ ಪಡೆಯುವ ಕಾರ್ಯ ಆರಂಭಿಸುತ್ತದೆ. </p>.<p><strong>ದೇಶದಲ್ಲಿ 2 ಲಕ್ಷ ದಾಟಿದ ನೋಂದಣಿ</strong></p>.<p>ದೇಶದಲ್ಲಿ ಡಿಸೆಂಬರ್ 6ರ ವರೆಗೆ ಒಟ್ಟು 2 ಲಕ್ಷ ಜನ ಅಂಗಾಂಗ ದಾನಕ್ಕೆ ಹೆಸರು ಕೊಟ್ಟಿದ್ದಾರೆ. ಇದರಲ್ಲಿ ರಾಜಸ್ಥಾನ (40,400) ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ(31,214), ಮೂರನೇ ಸ್ಥಾನದಲ್ಲಿ ಕರ್ನಾಟಕ (25,658), ನಾಲ್ಕನೇ ಸ್ಥಾನದಲ್ಲಿ ಮಧ್ಯಪ್ರದೇಶ (21492) ಮತ್ತು ಐದನೇ ಸ್ಥಾನದಲ್ಲಿ ತೆಲಂಗಾಣ (13,620) ಇದೆ. </p>.<p>ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಲು ಸಂಪರ್ಕಿಸಬೇಕಾದ ವೆಬ್ಸೈಟ್: https://notto.abdm.gov.in/register</p>.<div><blockquote>ಅಂಗಾಂಗ ದಾನದ ಬಗ್ಗೆ ಸಮಾಜ ಇನ್ನೂ ಜಾಗೃತವಾಗಿಲ್ಲ. ಸುಶಿಕ್ಷಿತರೇ ಇದಕ್ಕೆ ಹಿಂದೇಟು ಹಾಕುತ್ತಾರೆ. ಜತೆಗೆ ಮೌಢ್ಯವೂ ಕೆಲವರಲ್ಲಿದೆ. ಇದೆಲ್ಲದರ ನಡುವೆಯೂ ಬಳ್ಳಾರಿ ದೇಶಕ್ಕೇ ಮಾದರಿಯಾಗಿದೆ.</blockquote><span class="attribution">– ರಮೇಶ್ ಬಾಬು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>