<p> <strong>ಬಳ್ಳಾರಿ:</strong> ಬಳ್ಳಾರಿ ನಗರದ ಹುಸೇನ್ ನಗರದ ಮಹಿಳೆಯೊಬ್ಬರು ಪರಪುರುಷನೊಬ್ಬನಿಂದ ತನಾಗದ ಅನ್ಯಾಯವನ್ನು ವಿಡಿಯೊದಲ್ಲಿ ಹೇಳಿಕೊಳ್ಳುತ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p><p>ಮುನ್ನಿ (23) ಮೃತರು. ವಿಚ್ಛೇದಿತೆ ಮುನ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ಅವಧಿಯಲ್ಲಿ ಸಂಬಂಧಿ ಮೊಹಮ್ಮದ್ ಶೇಖ್ ಎಂಬಾತನೊಂದಿಗೆ ಸಲುಗೆ ಹೊಂದಿದ್ದರು. ಇತ್ತೀಚೆಗೆ ಮೊಹಮ್ಮದ್ ಶೇಖ್ ಹಾಗೂ ಮುನ್ನಿ ನಡುವೆ ವೈಮನಸ್ಸು ಉಂಟಾಗಿತ್ತು. ಇದರಿಂದ ಮಾನಸಿಕವಾಗಿ ನೊಂದ ಮುನ್ನಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p><p>ಮುನ್ನಿ ಸಾವಿಗೆ ಮೊಹಮ್ಮದ್ ಶೇಖನೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ನಗರ ಶಾಸಕ ನಾರಾ ಭರತ್ ರೆಡ್ಡಿ, ಪ್ರಕರಣದ ಸ್ಥಿತಿಗತಿ ಮಾಹಿತಿಪಡೆದರು.</p><p>ಏನಿದೆ ವಿಡಿಯೊದಲ್ಲಿ: ಎಲ್ಲಾ ಅವನಿಂದಲೇ ಆಗುತ್ತಿರುವುದು. ಅವನು ನನ್ನನ್ನು ಬದುಕಲು ಬಿಡುತ್ತಿಲ್ಲ. ನಾನು ಸತ್ತರೆ ಆತ ಖುಷಿಯಾಗಿರುತ್ತಾನೆ. ಅವನನ್ನು, ಆವನ ಹೆಂಡತಿ, ತಾಯಿಯನ್ನು ಬಿಡಬಾರದು. ಮೂರು ಜನ ಸೇರಿ ನನಗೆ ಕಿರುಕುಳ ನೀಡಿದ್ದಾರೆ. ಮನೆಗೆ ಬಂದು ಹೊಡೆದಿದ್ದಾರೆ ಎಂದು ಮುನ್ನಿ ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> <strong>ಬಳ್ಳಾರಿ:</strong> ಬಳ್ಳಾರಿ ನಗರದ ಹುಸೇನ್ ನಗರದ ಮಹಿಳೆಯೊಬ್ಬರು ಪರಪುರುಷನೊಬ್ಬನಿಂದ ತನಾಗದ ಅನ್ಯಾಯವನ್ನು ವಿಡಿಯೊದಲ್ಲಿ ಹೇಳಿಕೊಳ್ಳುತ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p><p>ಮುನ್ನಿ (23) ಮೃತರು. ವಿಚ್ಛೇದಿತೆ ಮುನ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ಅವಧಿಯಲ್ಲಿ ಸಂಬಂಧಿ ಮೊಹಮ್ಮದ್ ಶೇಖ್ ಎಂಬಾತನೊಂದಿಗೆ ಸಲುಗೆ ಹೊಂದಿದ್ದರು. ಇತ್ತೀಚೆಗೆ ಮೊಹಮ್ಮದ್ ಶೇಖ್ ಹಾಗೂ ಮುನ್ನಿ ನಡುವೆ ವೈಮನಸ್ಸು ಉಂಟಾಗಿತ್ತು. ಇದರಿಂದ ಮಾನಸಿಕವಾಗಿ ನೊಂದ ಮುನ್ನಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p><p>ಮುನ್ನಿ ಸಾವಿಗೆ ಮೊಹಮ್ಮದ್ ಶೇಖನೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ನಗರ ಶಾಸಕ ನಾರಾ ಭರತ್ ರೆಡ್ಡಿ, ಪ್ರಕರಣದ ಸ್ಥಿತಿಗತಿ ಮಾಹಿತಿಪಡೆದರು.</p><p>ಏನಿದೆ ವಿಡಿಯೊದಲ್ಲಿ: ಎಲ್ಲಾ ಅವನಿಂದಲೇ ಆಗುತ್ತಿರುವುದು. ಅವನು ನನ್ನನ್ನು ಬದುಕಲು ಬಿಡುತ್ತಿಲ್ಲ. ನಾನು ಸತ್ತರೆ ಆತ ಖುಷಿಯಾಗಿರುತ್ತಾನೆ. ಅವನನ್ನು, ಆವನ ಹೆಂಡತಿ, ತಾಯಿಯನ್ನು ಬಿಡಬಾರದು. ಮೂರು ಜನ ಸೇರಿ ನನಗೆ ಕಿರುಕುಳ ನೀಡಿದ್ದಾರೆ. ಮನೆಗೆ ಬಂದು ಹೊಡೆದಿದ್ದಾರೆ ಎಂದು ಮುನ್ನಿ ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>