<p><strong>ಹೂವಿನಹಡಗಲಿ</strong>: ಪಟ್ಟಣದ 9ನೇ ವಾರ್ಡಿನ ವಸತಿ ಬಡಾವಣೆಯೊಂದರ ಬಯಲಲ್ಲಿ ಆಯೋಜನೆಗೊಂಡಿದ್ದ ಟಗರಿನ ಕಾಳಗ ಜೂಜು ಅಡ್ಡೆಯ ಮೇಲೆ ಪೊಲೀಸರು ಶನಿವಾರ ದಾಳಿ ನಡೆಸಿ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.</p>.<p>ಕಾಯಕ ನಗರ ಕೂಡು ರಸ್ತೆ ಸಮೀಪದ ಬಯಲಲ್ಲಿ ಅನಧಿಕೃತವಾಗಿ ಟಗರು ಕಾಳಗ ಆಯೋಜನೆಗೊಂಡಿತ್ತು. ಗದಗ, ದಾವಣಗೆರೆಯಿಂದ ಆಹ್ವಾನಿಸಿದ್ದ ಬಲಶಾಲಿ ಟಗರುಗಳ ಮೇಲೆ ಭಾರೀ ಪ್ರಮಾಣದ ಬೆಟ್ಟಿಂಗ್ ನಡೆದಿತ್ತು.</p>.<p>ಪಟ್ಟಣ ಸೇರಿದಂತೆ ಗದಗ, ದಾವಣಗೆರೆ, ಹರಪನಹಳ್ಳಿಯಿಂದ ಬಂದಿದ್ದ ಕೆಲವರು ತಮ್ಮ ನೆಚ್ಚಿನ ಟಗರುಗಳ ಮೇಲೆ ₹10 ಸಾವಿರದಿಂದ ಆರಂಭಿಸಿ ₹50 ಸಾವಿರವರೆಗೆ ಬಾಜಿ ಕಟ್ಟಿ ಸ್ಪರ್ಧೆ ನಡೆಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.</p>.<p>ಸಿಪಿಐ ಸುಧೀರ್ ಬೆಂಕಿ ಮಾರ್ಗದರ್ಶನದಲ್ಲಿ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಜೂಜುಕೋರರು, ಕಾಳಗ ವೀಕ್ಷಣೆಗೆ ಬಂದಿದ್ದವರು ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಎರಡು ಟಗರು, ₹250 ನಗದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟಗರುಗಳನ್ನು ಕರೆ ತಂದಿದ್ದ ಗದಗ ನಗರದ ಬಸವರಾಜ ದಾನಿ, ಅಶೋಕ ಚಿಮ್ಮಳಗಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ಪಟ್ಟಣದ 9ನೇ ವಾರ್ಡಿನ ವಸತಿ ಬಡಾವಣೆಯೊಂದರ ಬಯಲಲ್ಲಿ ಆಯೋಜನೆಗೊಂಡಿದ್ದ ಟಗರಿನ ಕಾಳಗ ಜೂಜು ಅಡ್ಡೆಯ ಮೇಲೆ ಪೊಲೀಸರು ಶನಿವಾರ ದಾಳಿ ನಡೆಸಿ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.</p>.<p>ಕಾಯಕ ನಗರ ಕೂಡು ರಸ್ತೆ ಸಮೀಪದ ಬಯಲಲ್ಲಿ ಅನಧಿಕೃತವಾಗಿ ಟಗರು ಕಾಳಗ ಆಯೋಜನೆಗೊಂಡಿತ್ತು. ಗದಗ, ದಾವಣಗೆರೆಯಿಂದ ಆಹ್ವಾನಿಸಿದ್ದ ಬಲಶಾಲಿ ಟಗರುಗಳ ಮೇಲೆ ಭಾರೀ ಪ್ರಮಾಣದ ಬೆಟ್ಟಿಂಗ್ ನಡೆದಿತ್ತು.</p>.<p>ಪಟ್ಟಣ ಸೇರಿದಂತೆ ಗದಗ, ದಾವಣಗೆರೆ, ಹರಪನಹಳ್ಳಿಯಿಂದ ಬಂದಿದ್ದ ಕೆಲವರು ತಮ್ಮ ನೆಚ್ಚಿನ ಟಗರುಗಳ ಮೇಲೆ ₹10 ಸಾವಿರದಿಂದ ಆರಂಭಿಸಿ ₹50 ಸಾವಿರವರೆಗೆ ಬಾಜಿ ಕಟ್ಟಿ ಸ್ಪರ್ಧೆ ನಡೆಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.</p>.<p>ಸಿಪಿಐ ಸುಧೀರ್ ಬೆಂಕಿ ಮಾರ್ಗದರ್ಶನದಲ್ಲಿ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಜೂಜುಕೋರರು, ಕಾಳಗ ವೀಕ್ಷಣೆಗೆ ಬಂದಿದ್ದವರು ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಎರಡು ಟಗರು, ₹250 ನಗದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟಗರುಗಳನ್ನು ಕರೆ ತಂದಿದ್ದ ಗದಗ ನಗರದ ಬಸವರಾಜ ದಾನಿ, ಅಶೋಕ ಚಿಮ್ಮಳಗಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>