ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಹೀರೆಹಡಗಲಿ ಗ್ರಾಮದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಬಯಲಾಟ ಕಾರ್ಯ್ರಮದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಭರ್ಜರಿಯಾಗಿ ಕುಣಿದು ಪ್ರೇಕ್ಷಕರನ್ನು ರಂಜಿಸಿದರು. ಬಯಲಾಟದ ಪಾತ್ರಧಾರಿಗಳ ಜೊತೆ ಖಡ್ಗ ಹಿಡಿದ ರಾಮುಲು ಹೆಜ್ಜೆ ಹಾಕಿದರು. ಅಭಿಮಾನಿಗಳು ಶಿಳ್ಳೆ, ತಪ್ಪಾಳೆ ತಟ್ಟಿ ಸಂಭ್ರಮಿಸಿದರು. ಶ್ರೀರಾಮುಲು ಕುಣಿತದ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.