<p><strong>ಬಳ್ಳಾರಿ:</strong> ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಹಾದು ಹೋಗಿರುವ ಅಂತರರಾಜ್ಯ ಗಡಿಗೆ ಹೊಂದಿಕೊಂಡಿದ್ದ ಏಳು ಬಿ–1 ವರ್ಗದ ಗಣಿ ಗುತ್ತಿಗೆಗಳನ್ನು ವರ್ಗೀಕರಿಸಿ ಕೇಂದ್ರದ ಉನ್ನತಾಧಿಕಾರ ಸಮಿತಿಯು ಮೇ 16ರಂದು ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಿದೆ. </p>.<p>ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಬಳ್ಳಾರಿ, ಚಿತ್ರದುರ್ಗ, ತುಮಕೂರಿನ ಒಟ್ಟು 166 ಗಣಿಗಳ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ 2011ರಲ್ಲಿ ನಿಷೇಧ ಹೇರಿತ್ತು. ಈ ಎಲ್ಲ ಗಣಿಗಳನ್ನು ವರ್ಗೀಕರಿಸುವಂತೆ ಸುಪ್ರೀಂ ಕೋರ್ಟ್ ಜಂಟಿ ಸಮಿತಿಯನ್ನು ರಚಿಸಿತ್ತಾದರೂ, ಅಂತರರಾಜ್ಯ ಗಡಿಗೆ ಹೊಂದಿಕೊಂಡಿದ್ದ ಈ ಏಳು ಗಣಿಗಳನ್ನು ವರ್ಗೀಕರಣ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು. ‘ಬಿ–1’ ಎಂಬ ವಿಶೇಷ ವರ್ಗದಲ್ಲಿ ಇವುಗಳನ್ನು ಇರಿಸಿ, ಅಂತರರಾಜ್ಯ ಗಡಿ ಗುರುತು ಮುಗಿದ ಬಳಿಕ ವರ್ಗೀಕರಿಸಲು ನಿರ್ಧರಿಸಲಾಗಿತ್ತು. </p>.<p>ಸದ್ಯ, ಸರ್ವೇ ಆಫ್ ಇಂಡಿಯಾ ಗುರುತಿಸಿದ ಅಂತರರಾಜ್ಯ ಗಡಿಯನ್ನು ಆಧಾರವಾಗಿಟ್ಟುಕೊಂಡು, ಎರಡೂ ರಾಜ್ಯಗಳ ಜಂಟಿ ಸರ್ವೆ ಸಮಿತಿ ಮತ್ತು ಸುರತ್ಕಲ್ನ ಎನ್ಐಟಿಕೆ ತಜ್ಞರ ತಂಡ ಏಳು ಗಣಿಗಳ ಎಲ್ಲೆಗಳನ್ನು ಗುರುತಿಸಿವೆ. ಇಲ್ಲಿ ಲಭ್ಯವಾದ ಅಂಶಗಳನ್ನು ಇಟ್ಟುಕೊಂಡು ಸಿಇಸಿ ಏಳು ಗಣಿಗಳ ವರ್ಗೀಕರಣ ಮಾಡಿದೆ. </p>.<p><strong>ಗಣಿ ಗುತ್ತಿಗೆ ವರ್ಗೀಕರಣ</strong></p>.<p>‘ಸಿ’ ವರ್ಗ: ‘ಸುಗ್ಗುಲಮ್ಮ ಗುಡ್ಡ ಮೈನಿಂಗ್ ಅ್ಯಂಡ್ ಕಂಪನಿ’ ಮತ್ತು ‘ಬಳ್ಳಾರಿ ಮೈನಿಂಗ್ ಕಾರ್ಪೊರೇಷನ್’ನ ಗಣಿ ಗುತ್ತಿಗೆಗಳನ್ನು ‘ಸಿ’ ವರ್ಗಕ್ಕೆ ಸೇರಿಸಲಾಗಿದೆ.</p>.<p>ಮಿತಿ ಮೀರಿದ ಒತ್ತುವರಿ, ಅಕ್ರಮ, ಗುತ್ತಿಗೆ ಪ್ರದೇಶದ ಶೇ 15ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಅಥವಾ ಓವರ್ಬರ್ಡನ್ ಡಂಪಿಂಗ್ ಮಾಡಿರುವುದನ್ನು ಗಮನಿಸಿ ಈ ಎರಡು ಗಣಿಗಳನ್ನು ‘ಸಿ’ ವರ್ಗಕ್ಕೆ ಸೇರಿಸಲಾಗಿದೆ. ಸುಪ್ರೀಂ ಕೋರ್ಟ್ನ ಈ ಹಿಂದಿನ ಆದೇಶಗಳ ಪ್ರಕಾರ ‘ಸಿ’ ವರ್ಗದ ಗುತ್ತಿಗೆಗಳು ರದ್ದಾಗಲಿವೆ. ಹಿಂದೆ ಗಣಿಗಾರಿಕೆ ಮಾಡಿದ ಖನಿಜದ ಸಂಪೂರ್ಣ ದಾಸ್ತಾನು, ಮಾರಾಟದ ಆದಾಯ ಮತ್ತು ದಾಸ್ತಾನು ಮಾಡಿದ ಖನಿಜವನ್ನು ಕರ್ನಾಟಕ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ಶಿಫಾರಸು ಮಾಡಲಾಗಿದೆ. </p>.<p>‘ಬಿ’ ವರ್ಗ: ‘ಟಿ. ನಾರಾಯಣ ರೆಡ್ಡಿ’, ‘ಎನ್.ರತ್ನಯ್ಯ’, ‘ಹಿಂದ್ ಟ್ರೇಡರ್ಸ್’, ‘ಮೆಹಬೂಬ್ ಟ್ರಾನ್ಸ್ಪೋರ್ಟ್ ಕಂಪನಿ’ಗಳ ಗಣಿ ಗುತ್ತಿಗೆಗಳನ್ನು ‘ಬಿ’ ವರ್ಗಕ್ಕೆ ಸೇರಿಸಲಾಗಿದೆ. </p>.<p>ಸೂಚಿತ ನಿಬಂಧನೆಗಳನ್ನು ಪೂರೈಸಿದ ಬಳಿಕ 'ಬಿ' ವರ್ಗದ ಗಣಿಗಳು ಗಣಿಗಾರಿಕೆ ಕೈಗೊಳ್ಳಲು ಅವಕಾಶವಿರಲಿದೆ. ಹಿಂದೆ ಗಣಿಗಾರಿಕೆ ಮಾಡಿದ ವಸ್ತುಗಳ ಮಾರಾಟದಿಂದ ಬಂದ ಆದಾಯದ ಶೇ 15ರಷ್ಟನ್ನು ಈ ಗಣಿಗಳು ಹಿಂದಿರುಗಿಸಬೇಕು. ‘ಪುನಶ್ಚೇತನ ಮತ್ತು ಪುನರ್ವಸತಿ’ ಯೋಜನೆ ( ಆರ್ ಆ್ಯಂಡ್ ಆರ್) ಯಶಸ್ವಿ ಅನುಷ್ಠಾನ, ನಿರ್ದಿಷ್ಟ ಅನುಮೋದನೆ ಬಳಿಕ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗುತ್ತದೆ. </p>.<p>‘ಎ’ ವರ್ಗ: ‘ವಿಭೂತಿಗುಡ್ಡ ಮೈನ್ಸ್ ಪ್ರೈ.ಲಿ.’ಯ ಗಣಿಯನ್ನು ‘ಎ’ ವರ್ಗಕ್ಕೆ ಸೇರಿಸಿ ಸಿಇಸಿ ಸುಪ್ರೀಂ ಕೋರ್ಟ್ಗೆ ಶಿಫಾರಸು ಮಾಡಿದೆ. ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ಪಡೆದು ಗಣಿ ಕಾರ್ಯಾರಂಭ ಮಾಡಲು ಅನುವು ಮಾಡಿಕೊಡಬಹುದು ಎಂದು ವರದಿಯಲ್ಲಿ ಸಿಇಸಿ ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಹಾದು ಹೋಗಿರುವ ಅಂತರರಾಜ್ಯ ಗಡಿಗೆ ಹೊಂದಿಕೊಂಡಿದ್ದ ಏಳು ಬಿ–1 ವರ್ಗದ ಗಣಿ ಗುತ್ತಿಗೆಗಳನ್ನು ವರ್ಗೀಕರಿಸಿ ಕೇಂದ್ರದ ಉನ್ನತಾಧಿಕಾರ ಸಮಿತಿಯು ಮೇ 16ರಂದು ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಿದೆ. </p>.<p>ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಬಳ್ಳಾರಿ, ಚಿತ್ರದುರ್ಗ, ತುಮಕೂರಿನ ಒಟ್ಟು 166 ಗಣಿಗಳ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ 2011ರಲ್ಲಿ ನಿಷೇಧ ಹೇರಿತ್ತು. ಈ ಎಲ್ಲ ಗಣಿಗಳನ್ನು ವರ್ಗೀಕರಿಸುವಂತೆ ಸುಪ್ರೀಂ ಕೋರ್ಟ್ ಜಂಟಿ ಸಮಿತಿಯನ್ನು ರಚಿಸಿತ್ತಾದರೂ, ಅಂತರರಾಜ್ಯ ಗಡಿಗೆ ಹೊಂದಿಕೊಂಡಿದ್ದ ಈ ಏಳು ಗಣಿಗಳನ್ನು ವರ್ಗೀಕರಣ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು. ‘ಬಿ–1’ ಎಂಬ ವಿಶೇಷ ವರ್ಗದಲ್ಲಿ ಇವುಗಳನ್ನು ಇರಿಸಿ, ಅಂತರರಾಜ್ಯ ಗಡಿ ಗುರುತು ಮುಗಿದ ಬಳಿಕ ವರ್ಗೀಕರಿಸಲು ನಿರ್ಧರಿಸಲಾಗಿತ್ತು. </p>.<p>ಸದ್ಯ, ಸರ್ವೇ ಆಫ್ ಇಂಡಿಯಾ ಗುರುತಿಸಿದ ಅಂತರರಾಜ್ಯ ಗಡಿಯನ್ನು ಆಧಾರವಾಗಿಟ್ಟುಕೊಂಡು, ಎರಡೂ ರಾಜ್ಯಗಳ ಜಂಟಿ ಸರ್ವೆ ಸಮಿತಿ ಮತ್ತು ಸುರತ್ಕಲ್ನ ಎನ್ಐಟಿಕೆ ತಜ್ಞರ ತಂಡ ಏಳು ಗಣಿಗಳ ಎಲ್ಲೆಗಳನ್ನು ಗುರುತಿಸಿವೆ. ಇಲ್ಲಿ ಲಭ್ಯವಾದ ಅಂಶಗಳನ್ನು ಇಟ್ಟುಕೊಂಡು ಸಿಇಸಿ ಏಳು ಗಣಿಗಳ ವರ್ಗೀಕರಣ ಮಾಡಿದೆ. </p>.<p><strong>ಗಣಿ ಗುತ್ತಿಗೆ ವರ್ಗೀಕರಣ</strong></p>.<p>‘ಸಿ’ ವರ್ಗ: ‘ಸುಗ್ಗುಲಮ್ಮ ಗುಡ್ಡ ಮೈನಿಂಗ್ ಅ್ಯಂಡ್ ಕಂಪನಿ’ ಮತ್ತು ‘ಬಳ್ಳಾರಿ ಮೈನಿಂಗ್ ಕಾರ್ಪೊರೇಷನ್’ನ ಗಣಿ ಗುತ್ತಿಗೆಗಳನ್ನು ‘ಸಿ’ ವರ್ಗಕ್ಕೆ ಸೇರಿಸಲಾಗಿದೆ.</p>.<p>ಮಿತಿ ಮೀರಿದ ಒತ್ತುವರಿ, ಅಕ್ರಮ, ಗುತ್ತಿಗೆ ಪ್ರದೇಶದ ಶೇ 15ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಅಥವಾ ಓವರ್ಬರ್ಡನ್ ಡಂಪಿಂಗ್ ಮಾಡಿರುವುದನ್ನು ಗಮನಿಸಿ ಈ ಎರಡು ಗಣಿಗಳನ್ನು ‘ಸಿ’ ವರ್ಗಕ್ಕೆ ಸೇರಿಸಲಾಗಿದೆ. ಸುಪ್ರೀಂ ಕೋರ್ಟ್ನ ಈ ಹಿಂದಿನ ಆದೇಶಗಳ ಪ್ರಕಾರ ‘ಸಿ’ ವರ್ಗದ ಗುತ್ತಿಗೆಗಳು ರದ್ದಾಗಲಿವೆ. ಹಿಂದೆ ಗಣಿಗಾರಿಕೆ ಮಾಡಿದ ಖನಿಜದ ಸಂಪೂರ್ಣ ದಾಸ್ತಾನು, ಮಾರಾಟದ ಆದಾಯ ಮತ್ತು ದಾಸ್ತಾನು ಮಾಡಿದ ಖನಿಜವನ್ನು ಕರ್ನಾಟಕ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ಶಿಫಾರಸು ಮಾಡಲಾಗಿದೆ. </p>.<p>‘ಬಿ’ ವರ್ಗ: ‘ಟಿ. ನಾರಾಯಣ ರೆಡ್ಡಿ’, ‘ಎನ್.ರತ್ನಯ್ಯ’, ‘ಹಿಂದ್ ಟ್ರೇಡರ್ಸ್’, ‘ಮೆಹಬೂಬ್ ಟ್ರಾನ್ಸ್ಪೋರ್ಟ್ ಕಂಪನಿ’ಗಳ ಗಣಿ ಗುತ್ತಿಗೆಗಳನ್ನು ‘ಬಿ’ ವರ್ಗಕ್ಕೆ ಸೇರಿಸಲಾಗಿದೆ. </p>.<p>ಸೂಚಿತ ನಿಬಂಧನೆಗಳನ್ನು ಪೂರೈಸಿದ ಬಳಿಕ 'ಬಿ' ವರ್ಗದ ಗಣಿಗಳು ಗಣಿಗಾರಿಕೆ ಕೈಗೊಳ್ಳಲು ಅವಕಾಶವಿರಲಿದೆ. ಹಿಂದೆ ಗಣಿಗಾರಿಕೆ ಮಾಡಿದ ವಸ್ತುಗಳ ಮಾರಾಟದಿಂದ ಬಂದ ಆದಾಯದ ಶೇ 15ರಷ್ಟನ್ನು ಈ ಗಣಿಗಳು ಹಿಂದಿರುಗಿಸಬೇಕು. ‘ಪುನಶ್ಚೇತನ ಮತ್ತು ಪುನರ್ವಸತಿ’ ಯೋಜನೆ ( ಆರ್ ಆ್ಯಂಡ್ ಆರ್) ಯಶಸ್ವಿ ಅನುಷ್ಠಾನ, ನಿರ್ದಿಷ್ಟ ಅನುಮೋದನೆ ಬಳಿಕ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗುತ್ತದೆ. </p>.<p>‘ಎ’ ವರ್ಗ: ‘ವಿಭೂತಿಗುಡ್ಡ ಮೈನ್ಸ್ ಪ್ರೈ.ಲಿ.’ಯ ಗಣಿಯನ್ನು ‘ಎ’ ವರ್ಗಕ್ಕೆ ಸೇರಿಸಿ ಸಿಇಸಿ ಸುಪ್ರೀಂ ಕೋರ್ಟ್ಗೆ ಶಿಫಾರಸು ಮಾಡಿದೆ. ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ಪಡೆದು ಗಣಿ ಕಾರ್ಯಾರಂಭ ಮಾಡಲು ಅನುವು ಮಾಡಿಕೊಡಬಹುದು ಎಂದು ವರದಿಯಲ್ಲಿ ಸಿಇಸಿ ಹೇಳಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>