<p><strong>ಬಳ್ಳಾರಿ</strong>: ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ಅಂತರರಾಜ್ಯ ಗಡಿಗೆ ಹೊಂದಿಕೊಂಡಿರುವ ಏಳು ಬಿ–1 ವರ್ಗದ ಗಣಿ ಗುತ್ತಿಗೆಗಳ ಗುರುತು ಮಾಡುವ ಮತ್ತು ಅವುಗಳನ್ನು ವರ್ಗೀಕರಿಸುವ ಸಲುವಾಗಿ ಕೇಂದ್ರದ ಉನ್ನತಾಧಿಕಾರಿ ಸಮಿತಿ(ಸಿಇಸಿ)ಯು ಗುರುವಾರ ಸ್ಥಳ ಪರಿಶೀಲನೆ ನಡೆಸಿತು. </p>.<p>ಈ ವೇಳೆ ಗಣಿ ಗುತ್ತಿಗೆದಾರಿಂದ ದಾಖಲೆ, ಮಾಹಿತಿಯನ್ನು ಸಂಗ್ರಹಿಸಿತು. </p>.<p>ಅಂತರರಾಜ್ಯ ಗಡಿಗೆ ಹೊಂದಿಕೊಂಡಿರುವ ತುಮಟಿ, ವಿಠಲಾಪುರದಲ್ಲಿನ ಒಟ್ಟು 4, ಹಲಕುಂದಿ, ಬೆಳಗಲ್ಲು ಮತ್ತು ಹೊನ್ನಳ್ಳಿಯಲ್ಲಿನ ತಲಾ ಒಂದೊಂದು ಗಣಿಗಳನ್ನು ಸಿಇಸಿ ಪರಿಶೀಲನೆ ನಡೆಸಿತು. </p>.<p>ಈ ವೇಳೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಉಪವಿಭಾಗಾಧಿಕಾರಿ, ಸಂಡೂರು ತಹಶೀಲ್ದಾರ್, ಕಂದಾಯ, ಅರಣ್ಯ, ಭೂದಾಖಲೆಗಳ ಇಲಾಖೆ ಅಧಿಕಾರಿಗಳು ಇದ್ದರು. </p>.<p>ಗ್ರಾಮ ನಕ್ಷೆ, ಗ್ರಾಮ ಗಡಿ ಆಧಾರದಲ್ಲಿ ನಾವು ಗಣಿ ಗುತ್ತಿಗೆಗಳನ್ನು ಪಡೆದುಕೊಂಡಿದ್ದು, ಅದರ ಆಧಾರದಲ್ಲೇ ಗಣಿಗಳ ನಕ್ಷೆ ಸಿದ್ಧಪಡಿಸಿ, ವರ್ಗೀಕರಣ ಮಾಡಬೇಕು ಎಂದು ಗಣಿ ಮಾಲೀಕರು ಸಿಇಸಿ ಸದಸ್ಯರಿಗೆ ಮನವಿ ಮಾಡಿದರು ಎನ್ನಲಾಗಿದೆ. </p>.<p>ಇಂದು ಸಂಡೂರಿನ ಡೋಣಿಮೈಲೈನಲ್ಲಿರುವ ಎನ್ಎಂಡಿಸಿ ಅತಿಥಿ ಗೃಹದಲ್ಲಿ ಸಿಇಸಿ ಸಭೆ ನಡೆಸಲಿದ್ದು ಅದಕ್ಕೆ ಎಲ್ಲ ಗಣಿ ಮಾಲೀಕರು ಹಾಜರಾಗಲಿದ್ದಾರೆ. ಸಭೆಯಲ್ಲಿ ಗಣಿ ಮಾಲೀಕರು ತಮ್ಮ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಲಿರುವ ಸಿಇಸಿ, ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ಅಂತರರಾಜ್ಯ ಗಡಿಗೆ ಹೊಂದಿಕೊಂಡಿರುವ ಏಳು ಬಿ–1 ವರ್ಗದ ಗಣಿ ಗುತ್ತಿಗೆಗಳ ಗುರುತು ಮಾಡುವ ಮತ್ತು ಅವುಗಳನ್ನು ವರ್ಗೀಕರಿಸುವ ಸಲುವಾಗಿ ಕೇಂದ್ರದ ಉನ್ನತಾಧಿಕಾರಿ ಸಮಿತಿ(ಸಿಇಸಿ)ಯು ಗುರುವಾರ ಸ್ಥಳ ಪರಿಶೀಲನೆ ನಡೆಸಿತು. </p>.<p>ಈ ವೇಳೆ ಗಣಿ ಗುತ್ತಿಗೆದಾರಿಂದ ದಾಖಲೆ, ಮಾಹಿತಿಯನ್ನು ಸಂಗ್ರಹಿಸಿತು. </p>.<p>ಅಂತರರಾಜ್ಯ ಗಡಿಗೆ ಹೊಂದಿಕೊಂಡಿರುವ ತುಮಟಿ, ವಿಠಲಾಪುರದಲ್ಲಿನ ಒಟ್ಟು 4, ಹಲಕುಂದಿ, ಬೆಳಗಲ್ಲು ಮತ್ತು ಹೊನ್ನಳ್ಳಿಯಲ್ಲಿನ ತಲಾ ಒಂದೊಂದು ಗಣಿಗಳನ್ನು ಸಿಇಸಿ ಪರಿಶೀಲನೆ ನಡೆಸಿತು. </p>.<p>ಈ ವೇಳೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಉಪವಿಭಾಗಾಧಿಕಾರಿ, ಸಂಡೂರು ತಹಶೀಲ್ದಾರ್, ಕಂದಾಯ, ಅರಣ್ಯ, ಭೂದಾಖಲೆಗಳ ಇಲಾಖೆ ಅಧಿಕಾರಿಗಳು ಇದ್ದರು. </p>.<p>ಗ್ರಾಮ ನಕ್ಷೆ, ಗ್ರಾಮ ಗಡಿ ಆಧಾರದಲ್ಲಿ ನಾವು ಗಣಿ ಗುತ್ತಿಗೆಗಳನ್ನು ಪಡೆದುಕೊಂಡಿದ್ದು, ಅದರ ಆಧಾರದಲ್ಲೇ ಗಣಿಗಳ ನಕ್ಷೆ ಸಿದ್ಧಪಡಿಸಿ, ವರ್ಗೀಕರಣ ಮಾಡಬೇಕು ಎಂದು ಗಣಿ ಮಾಲೀಕರು ಸಿಇಸಿ ಸದಸ್ಯರಿಗೆ ಮನವಿ ಮಾಡಿದರು ಎನ್ನಲಾಗಿದೆ. </p>.<p>ಇಂದು ಸಂಡೂರಿನ ಡೋಣಿಮೈಲೈನಲ್ಲಿರುವ ಎನ್ಎಂಡಿಸಿ ಅತಿಥಿ ಗೃಹದಲ್ಲಿ ಸಿಇಸಿ ಸಭೆ ನಡೆಸಲಿದ್ದು ಅದಕ್ಕೆ ಎಲ್ಲ ಗಣಿ ಮಾಲೀಕರು ಹಾಜರಾಗಲಿದ್ದಾರೆ. ಸಭೆಯಲ್ಲಿ ಗಣಿ ಮಾಲೀಕರು ತಮ್ಮ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಲಿರುವ ಸಿಇಸಿ, ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>