ಕುವೆಂಪು ರಚಿತ ‘ಓ ನನ್ನ ಚೇತನ’ ಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ‘ಸರ್ವ ಜನಾಂಗದ ಶಾಂತಿಯ ತೋಟ’ ಘೋಷಣೆಗಳನ್ನು ಕೂಗಿದರು. ಸಾಂಪ್ರದಾಯಿಕ ಲಂಬಾಣಿ ದಿರಿಸಿ ಹಾಕಿಕೊಂಡು ಬಂಜಾರ ಸಮುದಾಯದ ಮಹಿಳೆಯರು, ಮುಸ್ಲಿಂ, ದಲಿತ ಸಮುದಾಯದ ಹೆಣ್ಣು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ಪರಸ್ಪರ ಕೈತುತ್ತು ತಿಂದು, ಸೌಹಾರ್ದತೆ ಮೆರೆದರು.