<p><strong>ಬಳ್ಳಾರಿ:</strong> ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಶನಿವಾರ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಲಾಗಿದೆಯಾದರೂ, ನಟ ದರ್ಶನ್ ಅವರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿಲ್ಲ. </p>.<p>ಜೈಲಿನ ಹೊರ ಭದ್ರತಾ ಕೊಠಡಿಯಲ್ಲಿ ದರ್ಶನ್ ಅವರನ್ನು ಇರಿಸಲಾಗಿದೆ. ಗಣೇಶ ಹಬ್ಬವನ್ನು ಜೈಲಿನ ಒಳಾಂಗಣದಲ್ಲಿ ಆಚರಿಸಲಾಗಿತ್ತು. ಜೈಲಿನ ಎಲ್ಲ ಕೈದಿಗಳೂ ಹಬ್ಬದ ಆಚರಣೆಗೆ ಒಂದೆಡೆ ಸೇರುತ್ತಾರೆ. ಈ ಸ್ಥಳಕ್ಕೆ ದರ್ಶನ್ ಬಂದರೆ ಭದ್ರತಾ ಸಮಸ್ಯೆ ಎದುರಾಗಬಹುದು ಎಂಬ ಕಾರಣ ಅವರನ್ನು ಕರೆಸಿಲ್ಲ ಎನ್ನಲಾಗಿದೆ. </p>.<p>ಇನ್ನೊಂದೆಡೆ, ಹಬ್ಬದ ನಿಮಿತ್ತ ಜೈಲಿನಲ್ಲಿ ಶನಿವಾರ ಪಾಯಸ, ಅನ್ನ–ಸಾಂಬಾರ್ ನೀಡಲಾಗಿತ್ತು. </p>.<p>‘ದರ್ಶನ್ಗೆ ಟಿ.ವಿ ಇನ್ನೂ ಒದಗಿಸಿಲ್ಲ’ ಎಂದು ಜೈಲು ಅಧೀಕ್ಷಕಿ ಲತಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಬಹುತೇಕ ಸೋಮವಾರ ಅವರ ಕೊಠಡಿಗೆ ಟಿ.ವಿ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. </p>.<p>ಇನ್ನೊಂದೆಡೆ, ದರ್ಶನ್ ಅವರ ನ್ಯಾಯಾಂಗ ಬಂಧನ ಅವಧಿ ಸೋಮವಾರ ಅಂತ್ಯವಾಗುತ್ತಿದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕವೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ನಿರ್ಧರಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಶನಿವಾರ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಲಾಗಿದೆಯಾದರೂ, ನಟ ದರ್ಶನ್ ಅವರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿಲ್ಲ. </p>.<p>ಜೈಲಿನ ಹೊರ ಭದ್ರತಾ ಕೊಠಡಿಯಲ್ಲಿ ದರ್ಶನ್ ಅವರನ್ನು ಇರಿಸಲಾಗಿದೆ. ಗಣೇಶ ಹಬ್ಬವನ್ನು ಜೈಲಿನ ಒಳಾಂಗಣದಲ್ಲಿ ಆಚರಿಸಲಾಗಿತ್ತು. ಜೈಲಿನ ಎಲ್ಲ ಕೈದಿಗಳೂ ಹಬ್ಬದ ಆಚರಣೆಗೆ ಒಂದೆಡೆ ಸೇರುತ್ತಾರೆ. ಈ ಸ್ಥಳಕ್ಕೆ ದರ್ಶನ್ ಬಂದರೆ ಭದ್ರತಾ ಸಮಸ್ಯೆ ಎದುರಾಗಬಹುದು ಎಂಬ ಕಾರಣ ಅವರನ್ನು ಕರೆಸಿಲ್ಲ ಎನ್ನಲಾಗಿದೆ. </p>.<p>ಇನ್ನೊಂದೆಡೆ, ಹಬ್ಬದ ನಿಮಿತ್ತ ಜೈಲಿನಲ್ಲಿ ಶನಿವಾರ ಪಾಯಸ, ಅನ್ನ–ಸಾಂಬಾರ್ ನೀಡಲಾಗಿತ್ತು. </p>.<p>‘ದರ್ಶನ್ಗೆ ಟಿ.ವಿ ಇನ್ನೂ ಒದಗಿಸಿಲ್ಲ’ ಎಂದು ಜೈಲು ಅಧೀಕ್ಷಕಿ ಲತಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಬಹುತೇಕ ಸೋಮವಾರ ಅವರ ಕೊಠಡಿಗೆ ಟಿ.ವಿ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ. </p>.<p>ಇನ್ನೊಂದೆಡೆ, ದರ್ಶನ್ ಅವರ ನ್ಯಾಯಾಂಗ ಬಂಧನ ಅವಧಿ ಸೋಮವಾರ ಅಂತ್ಯವಾಗುತ್ತಿದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕವೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ನಿರ್ಧರಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>