ನೀರಾವರಿ ಸಲಹಾ ಸಮಿತಿ ಸಭೆ ನಡೆದಾಗ ಜಲಾಶಯದಲ್ಲಿ 97 ಟಿಎಂಸಿ ಅಡಿ ನೀರಿತ್ತು. ಕೆಲವೇ ದಿನಗಳಲ್ಲಿ 64 ಟಿಎಂಸಿಗೆ ಬಂದಿದೆ. ಕಾಲುವೆ, ನದಿ ಮೂಲಕ ಹೆಚ್ಚುವರಿ ನೀರು ಹರಿಸಲಾಗುತ್ತಿದೆ. ರೈತರು ನಾಟಿ ಮಾಡಿದ ಭತ್ತ, ಇತರೆ ಬೆಳೆಗಳು ತಡವಾಗಿ ಬರುತ್ತವೆ. ಏಪ್ರಿಲ್ ಕೊನೆಯವರೆಗೂ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ರೈತರಿಗೆ ನೀರು ಬೇಕಾಗುತ್ತದೆ. ನೀರಿನ ಉಳಿತಾಯ ಮಾಡಬೇಕು ಎಂದು ಒತ್ತಾಯಿಸಿದರು.