<p><strong>ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ):</strong> ಸಿರುಗುಪ್ಪ ತಾಲ್ಲೂಕಿನಲ್ಲಿ ಮಳೆಯಾಗಿಲ್ಲ. ಕಾಲುವೆ ನೀರು ಮರೀಚಿಕೆ ಆಗಿದೆ. ಮೆಣಸಿನಕಾಯಿ ಬೆಳೆದ ರೈತರು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.</p>.<p>ತಾಲ್ಲೂಕಿನ ರಾರಾವಿ, ಚಾಣಕನೂರು, ಬಗ್ಗೂರು, ಕರ್ಚಿಗನೂರು, ಕುಡುದರ ಹಾಳು, ಬಿಜಿದಿನ್ನಿ, ಕೊತ್ತಲಚಿಂತ ಸೇರಿ ವಿವಿಧ ಗ್ರಾಮಗಳ ರೈತರು ಟ್ಯಾಂಕರ್ ನೀರು ಅವಲಂಬಿಸಿದ್ದಾರೆ. ನಾಡಂಗ, ಅಗಸನೂರು, ಬೊಮ್ಮಲಾಪುರ, ಬಿ.ಎಂ. ಸೂಗೂರು, ಇಟಗಿಹಾಳ್ ಗ್ರಾಮಗಳಲ್ಲಿ ರೈತರು ಕೃಷಿಹೊಂಡದ ನೀರನ್ನು ಒದಗಿಸುತ್ತಿದ್ದಾರೆ.</p>.<p>ಬ್ಯಾಡಗಿ ಮತ್ತು ಗುಂಟೂರು ತಳಿಯ ಮೆಣಸಿನಕಾಯಿ ಬೆಳೆಗೆ ಕಳೆದ ವರ್ಷ ದೊರೆತ ಉತ್ತಮ ಬೆಲೆ ಇದ್ದ ಕಾರಣ ತಾಲ್ಲೂಕಿನ ರೈತರು ಈ ಬಾರಿ 12,600 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ. 1 ಎಕರೆಗೆ ಕನಿಷ್ಠ 6 ಕ್ವಿಂಟಲ್ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅವರಿಗೆ ನೀರಿನದ್ದೇ ಸಮಸ್ಯೆಯಾಗಿದೆ.</p>.<p>‘ಟ್ರ್ಯಾಕ್ಟರ್ ಬಾಡಿಗೆ ₹ 2,500, ಟ್ಯಾಂಕರ್ ಬಾಡಿಗೆ ₹800 ಮತ್ತು ಡೀಸೆಲ್ ಮೋಟರ್ ಬಾಡಿಗೆ ₹3,500 ಸೇರಿ ಒಂದು ದಿನಕ್ಕೆ ₹ 6,800 ವ್ಯಯಿಸಿ ಬೆಳೆಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಒಂದು ಎಕರೆಗೆ ಕನಿಷ್ಠ 40ರಿಂದ 60 ಟ್ಯಾಂಕರ್ ನೀರು ಬೇಕು’ ಎಂದು ರೈತರು ತಿಳಿಸಿದರು.</p>.<h2>ಕಳ್ಳರ ಕಾಟ–ಬೆಳೆಗೆ ರೋಗ:</h2>.<p>‘ಮೆಣಸಿನಕಾಯಿ ಬೆಳೆಗೆ ರೋಗ ತಗುಲಿ, ಗಿಡಗಳು ಮುದುರಿಕೊಂಡಿದ್ದು, ಹೂ ಬಿಡುತ್ತಿಲ್ಲ. ಗಿಡಗಳ ಬೆಳವಣಿಗೆ ಆಗುತ್ತಿಲ್ಲ. ಇದರಿಂದ ಬೆಳೆ ಕೈಗೆ ಬಾರದೆ ನಷ್ಟ ಅನುಭವಿಸಂತಾಗಿದೆ’ ಎಂದು ಬೊಮ್ಮಲಾಪುರದ ರೈತ ಶ್ರೀನಿವಾಸ ಅಲವತ್ತುಕೊಂಡರು. ಈ ಮಧ್ಯೆ</p>.<p>ಗುಬ್ಬಿಹಾಳ, ಬೊಮ್ಮಲಾಪುರ, ಮಿಟ್ಟೆಸೂಗೂರು ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆಗೆ ಕಳ್ಳರ ಕಾಟ ಹೆಚ್ಚಿದೆ. ಜೊತೆಗೆ ಆಯಾ ಗ್ರಾಮಗಳಲ್ಲಿ ರೋಗ ಕಾಣಿಸಿಕೊಂಡು ಬೆಳೆಗಳು ಮುದುರುತ್ತಿವೆ’ ಎಂದು ಬೊಮ್ಮಲಾಪುರದ ರೈತ ಶ್ರೀನಿವಾಸ ತಿಳಿಸಿದರು.</p>.<div><blockquote>ಈ ಬಾರಿ ಮೆಣಸಿನಕಾಯಿ ಬೆಳೆ ಬೆಳೆಯದಂತೆ ತೋಟಗಾರಿಕೆ ಇಲಾಖೆ ಸೂಚಿಸಿತ್ತು. ಆದರೂ ಸೂಚನೆ ಮೀರಿ ರೈತರು ಈ ಬೆಳೆ ಬೆಳೆದಿದ್ದು ನೀರಿನ ಕೊರತೆ ಎದುರಿಸುವಂತಾಗಿದೆ</blockquote><span class="attribution">ಖಾದರ್ ಭಾಷ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಸಿರುಗುಪ್ಪ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ):</strong> ಸಿರುಗುಪ್ಪ ತಾಲ್ಲೂಕಿನಲ್ಲಿ ಮಳೆಯಾಗಿಲ್ಲ. ಕಾಲುವೆ ನೀರು ಮರೀಚಿಕೆ ಆಗಿದೆ. ಮೆಣಸಿನಕಾಯಿ ಬೆಳೆದ ರೈತರು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.</p>.<p>ತಾಲ್ಲೂಕಿನ ರಾರಾವಿ, ಚಾಣಕನೂರು, ಬಗ್ಗೂರು, ಕರ್ಚಿಗನೂರು, ಕುಡುದರ ಹಾಳು, ಬಿಜಿದಿನ್ನಿ, ಕೊತ್ತಲಚಿಂತ ಸೇರಿ ವಿವಿಧ ಗ್ರಾಮಗಳ ರೈತರು ಟ್ಯಾಂಕರ್ ನೀರು ಅವಲಂಬಿಸಿದ್ದಾರೆ. ನಾಡಂಗ, ಅಗಸನೂರು, ಬೊಮ್ಮಲಾಪುರ, ಬಿ.ಎಂ. ಸೂಗೂರು, ಇಟಗಿಹಾಳ್ ಗ್ರಾಮಗಳಲ್ಲಿ ರೈತರು ಕೃಷಿಹೊಂಡದ ನೀರನ್ನು ಒದಗಿಸುತ್ತಿದ್ದಾರೆ.</p>.<p>ಬ್ಯಾಡಗಿ ಮತ್ತು ಗುಂಟೂರು ತಳಿಯ ಮೆಣಸಿನಕಾಯಿ ಬೆಳೆಗೆ ಕಳೆದ ವರ್ಷ ದೊರೆತ ಉತ್ತಮ ಬೆಲೆ ಇದ್ದ ಕಾರಣ ತಾಲ್ಲೂಕಿನ ರೈತರು ಈ ಬಾರಿ 12,600 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ. 1 ಎಕರೆಗೆ ಕನಿಷ್ಠ 6 ಕ್ವಿಂಟಲ್ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅವರಿಗೆ ನೀರಿನದ್ದೇ ಸಮಸ್ಯೆಯಾಗಿದೆ.</p>.<p>‘ಟ್ರ್ಯಾಕ್ಟರ್ ಬಾಡಿಗೆ ₹ 2,500, ಟ್ಯಾಂಕರ್ ಬಾಡಿಗೆ ₹800 ಮತ್ತು ಡೀಸೆಲ್ ಮೋಟರ್ ಬಾಡಿಗೆ ₹3,500 ಸೇರಿ ಒಂದು ದಿನಕ್ಕೆ ₹ 6,800 ವ್ಯಯಿಸಿ ಬೆಳೆಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಒಂದು ಎಕರೆಗೆ ಕನಿಷ್ಠ 40ರಿಂದ 60 ಟ್ಯಾಂಕರ್ ನೀರು ಬೇಕು’ ಎಂದು ರೈತರು ತಿಳಿಸಿದರು.</p>.<h2>ಕಳ್ಳರ ಕಾಟ–ಬೆಳೆಗೆ ರೋಗ:</h2>.<p>‘ಮೆಣಸಿನಕಾಯಿ ಬೆಳೆಗೆ ರೋಗ ತಗುಲಿ, ಗಿಡಗಳು ಮುದುರಿಕೊಂಡಿದ್ದು, ಹೂ ಬಿಡುತ್ತಿಲ್ಲ. ಗಿಡಗಳ ಬೆಳವಣಿಗೆ ಆಗುತ್ತಿಲ್ಲ. ಇದರಿಂದ ಬೆಳೆ ಕೈಗೆ ಬಾರದೆ ನಷ್ಟ ಅನುಭವಿಸಂತಾಗಿದೆ’ ಎಂದು ಬೊಮ್ಮಲಾಪುರದ ರೈತ ಶ್ರೀನಿವಾಸ ಅಲವತ್ತುಕೊಂಡರು. ಈ ಮಧ್ಯೆ</p>.<p>ಗುಬ್ಬಿಹಾಳ, ಬೊಮ್ಮಲಾಪುರ, ಮಿಟ್ಟೆಸೂಗೂರು ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆಗೆ ಕಳ್ಳರ ಕಾಟ ಹೆಚ್ಚಿದೆ. ಜೊತೆಗೆ ಆಯಾ ಗ್ರಾಮಗಳಲ್ಲಿ ರೋಗ ಕಾಣಿಸಿಕೊಂಡು ಬೆಳೆಗಳು ಮುದುರುತ್ತಿವೆ’ ಎಂದು ಬೊಮ್ಮಲಾಪುರದ ರೈತ ಶ್ರೀನಿವಾಸ ತಿಳಿಸಿದರು.</p>.<div><blockquote>ಈ ಬಾರಿ ಮೆಣಸಿನಕಾಯಿ ಬೆಳೆ ಬೆಳೆಯದಂತೆ ತೋಟಗಾರಿಕೆ ಇಲಾಖೆ ಸೂಚಿಸಿತ್ತು. ಆದರೂ ಸೂಚನೆ ಮೀರಿ ರೈತರು ಈ ಬೆಳೆ ಬೆಳೆದಿದ್ದು ನೀರಿನ ಕೊರತೆ ಎದುರಿಸುವಂತಾಗಿದೆ</blockquote><span class="attribution">ಖಾದರ್ ಭಾಷ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಸಿರುಗುಪ್ಪ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>