<p><strong>ಬಳ್ಳಾರಿ</strong>: ನಗರದಲ್ಲಿ ಡಿಜಿಟಲ್ ಅರೆಸ್ಟ್ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ₹88 ಲಕ್ಷ ಪಡೆದು ವಂಚಿಸಲಾಗಿದೆ. ಈ ಕುರಿತು ವ್ಯಕ್ತಿಯು ನಗರದ ‘ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ಪೊಲೀಸ್ ಠಾಣೆ’ಗೆ ದೂರು ನೀಡಿದ್ದು, ಜುಲೈ 24ರಂದು ಎಫ್ಐಆರ್ ದಾಖಲಾಗಿದೆ. </p>.<p>ನಿವೃತ್ತ ಸಿವಿಲ್ ಗುತ್ತಿಗೆದಾರರಾಗಿರುವ ಸಂತ್ರಸ್ತ ವ್ಯಕ್ತಿಗೆ ಜುಲೈ 5ರಂದು ಹಲವು ನಂಬರ್ಗಳಿಂದ ಕರೆ, ವಿಡಿಯೊ ಕರೆಗಳು ಬಂದಿವೆ. ಆ ಕಡೆಯಿಂದ ಮಾತನಾಡಿದವರು, ತಾವು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ. </p>.<p>ಜೆಟ್ ಏರ್ವೇಸ್ನ ನರೇಶ್ ಗೊಯೇಲ್ ₹200 ಕೋಟಿ ಅವ್ಯವಹಾರ ಮಾಡಿದ್ದಾರೆ. ಅವರ ನಿವಾಸದಲ್ಲಿ ನಿಮ್ಮ ಎಟಿಎಂ ಕಾರ್ಡ್ ಸಿಕ್ಕಿದೆ. ಆ ಕಾರ್ಡ್ನಿಂದ ₹2 ಕೋಟಿ ವರ್ಗಾವಣೆ ಆಗಿದೆ. ಅದಕ್ಕೆ ನೀವು ₹25 ಲಕ್ಷ ಕಮಿಷನ್ ಪಡೆದಿದ್ದೀರಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡಿಕೊಂಡಿದ್ದೀರಿ. ನಿಮ್ಮನ್ನು ಬಂಧಿಸುತ್ತೇವೆ ಎಂದು ನಕಲಿ ಬಂಧನ ವಾರೆಂಟ್ ಅನ್ನು ವಾಟ್ಸಾಪ್ಗೆ ರವಾನಿಸಿದ್ದಾರೆ. </p>.<p>ಜುಲೈ 7ರಂದು ಮತ್ತೆ ಕರೆ ಮಾಡಿದ್ದ ವಂಚಕರು ನಿಮ್ಮನ್ನು ಮುಂಬೈನ ಸಿಬಿಐ ನ್ಯಾಯಾಧೀಶರ ಎದುರು ಹಾಜರುಪಡಿಸುತ್ತಿದ್ದೇವೆ. ವಿಚಾರಣೆ ನಡೆಯುವವರೆಗೆ ನಾವು ಹೇಳಿದ ಬ್ಯಾಂಕ್ಗಳಲ್ಲಿ ಹಣ ಠೇವಣಿ ಇಡಬೇಕು ಎಂದು ತಿಳಿಸಿದ್ದಾರೆ. ಜುಲೈ 19ರ ವರೆಗೆ ಹಂತ ಹಂತವಾಗಿ ₹88,20,098 ಹಾಕಿಸಿಕೊಂಡಿದ್ದಾರೆ. </p>.<p>ಇದು ವಂಚನೆ ಎಂದು ತಿಳಿದ ವ್ಯಕ್ತಿ ಪೊಲೀಸರಿಗೆ ದೂರಿದ್ದಾರೆ. ಪ್ರಕರಣ ಕೈಗೆತ್ತಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ನಗರದಲ್ಲಿ ಡಿಜಿಟಲ್ ಅರೆಸ್ಟ್ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ₹88 ಲಕ್ಷ ಪಡೆದು ವಂಚಿಸಲಾಗಿದೆ. ಈ ಕುರಿತು ವ್ಯಕ್ತಿಯು ನಗರದ ‘ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ಪೊಲೀಸ್ ಠಾಣೆ’ಗೆ ದೂರು ನೀಡಿದ್ದು, ಜುಲೈ 24ರಂದು ಎಫ್ಐಆರ್ ದಾಖಲಾಗಿದೆ. </p>.<p>ನಿವೃತ್ತ ಸಿವಿಲ್ ಗುತ್ತಿಗೆದಾರರಾಗಿರುವ ಸಂತ್ರಸ್ತ ವ್ಯಕ್ತಿಗೆ ಜುಲೈ 5ರಂದು ಹಲವು ನಂಬರ್ಗಳಿಂದ ಕರೆ, ವಿಡಿಯೊ ಕರೆಗಳು ಬಂದಿವೆ. ಆ ಕಡೆಯಿಂದ ಮಾತನಾಡಿದವರು, ತಾವು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ. </p>.<p>ಜೆಟ್ ಏರ್ವೇಸ್ನ ನರೇಶ್ ಗೊಯೇಲ್ ₹200 ಕೋಟಿ ಅವ್ಯವಹಾರ ಮಾಡಿದ್ದಾರೆ. ಅವರ ನಿವಾಸದಲ್ಲಿ ನಿಮ್ಮ ಎಟಿಎಂ ಕಾರ್ಡ್ ಸಿಕ್ಕಿದೆ. ಆ ಕಾರ್ಡ್ನಿಂದ ₹2 ಕೋಟಿ ವರ್ಗಾವಣೆ ಆಗಿದೆ. ಅದಕ್ಕೆ ನೀವು ₹25 ಲಕ್ಷ ಕಮಿಷನ್ ಪಡೆದಿದ್ದೀರಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡಿಕೊಂಡಿದ್ದೀರಿ. ನಿಮ್ಮನ್ನು ಬಂಧಿಸುತ್ತೇವೆ ಎಂದು ನಕಲಿ ಬಂಧನ ವಾರೆಂಟ್ ಅನ್ನು ವಾಟ್ಸಾಪ್ಗೆ ರವಾನಿಸಿದ್ದಾರೆ. </p>.<p>ಜುಲೈ 7ರಂದು ಮತ್ತೆ ಕರೆ ಮಾಡಿದ್ದ ವಂಚಕರು ನಿಮ್ಮನ್ನು ಮುಂಬೈನ ಸಿಬಿಐ ನ್ಯಾಯಾಧೀಶರ ಎದುರು ಹಾಜರುಪಡಿಸುತ್ತಿದ್ದೇವೆ. ವಿಚಾರಣೆ ನಡೆಯುವವರೆಗೆ ನಾವು ಹೇಳಿದ ಬ್ಯಾಂಕ್ಗಳಲ್ಲಿ ಹಣ ಠೇವಣಿ ಇಡಬೇಕು ಎಂದು ತಿಳಿಸಿದ್ದಾರೆ. ಜುಲೈ 19ರ ವರೆಗೆ ಹಂತ ಹಂತವಾಗಿ ₹88,20,098 ಹಾಕಿಸಿಕೊಂಡಿದ್ದಾರೆ. </p>.<p>ಇದು ವಂಚನೆ ಎಂದು ತಿಳಿದ ವ್ಯಕ್ತಿ ಪೊಲೀಸರಿಗೆ ದೂರಿದ್ದಾರೆ. ಪ್ರಕರಣ ಕೈಗೆತ್ತಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>