‘ವೈದಿಕ, ಪುರೋಹಿತಷಾಹಿಯ ಕಪಿಮುಷ್ಟಿಯಿಂದ ಮುಗ್ಧ ಜನರನ್ನು ಹೊರತರಲು ಅತ್ಯಂತ ಸರಳವಾದ ಧರ್ಮವನ್ನು ಸ್ಥಾಪಿಸಿದ್ದಾರೆ. ಯಾರು ಬೇಕಾದರೂ ಈ ಧರ್ಮವನ್ನು ಸ್ವೀಕರಿಸಿ, ಮುಂದುವರೆಯಬಹುದು. ಅದಕ್ಕೆ ಯಾವುದೇ ಕಟ್ಟಳೆಗಳಿಲ್ಲ. ದೇಹವೇ ದೇಗುಲ, ಕಾಯಕವೇ ಕೈಲಾಸ, ದಾಸೋಹ ತತ್ವಗಳು ಬಸವಣ್ಣನವರು ಕೊಟ್ಟ ಶ್ರೇಷ್ಠ ಕೊಡುಗೆಗಳಾಗಿವೆ. ಪ್ರತಿಯೊಬ್ಬರೂ ಅವುಗಳನ್ನು ಅನುಸರಿಸಿದರೆ ಕಲ್ಯಾಣ ರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳುವುದರಲ್ಲಿ ಎರಡೂ ಮಾತಿಲ್ಲ’ ಎಂದು ಹೇಳಿದರು.