ತೋರಣಗಲ್ಲು (ಬಳ್ಳಾರಿ ಜಿಲ್ಲೆ): ಸಮೀಪದ ಕುರೆಕುಪ್ಪ ಗ್ರಾಮದ ಮಹಿಳೆ ಮಲಿಯಮ್ಮ (55) ಹಾವು ಕಚ್ವಿ ಸೋಮವಾರ ಮೃತಪಟ್ಟಿದ್ದಾರೆ.
ಹೊಸದರೋಜಿ ಕೆರೆಯ ಬಳಿಯಲ್ಲಿನ ತಮ್ಮ ಜಮೀನಿನಲ್ಲಿ ಹತ್ತಿ ಬಿಡಿಸುವ ವೇಳೆ ಹಾವು ಕಚ್ಚಿದ ಪರಿಣಾಮ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಗೆ ಕರೆದೊಯ್ಯಲಾಯಿತು. ಮಾರ್ಗಮಧ್ಯದಲ್ಲಿ ಅವರು ಮೃತಪಟ್ಟರು.
ಮೃತಳ ಮಗ ಹನುಮಂತ ನೀಡಿದ ದೂರು ಆಧರಿಸಿ ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.