<p><strong>ಹರಪನಹಳ್ಳಿ</strong><strong>: ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯ ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 1311 ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ.</strong></p>.<p><strong>ಹಿರಿಯ ಮತ್ತು ಕಿರಿಯ ಸಿವಿಲ್ ನ್ಯಾಯಲಯದಲ್ಲಿ ಒಟ್ಟು 1604 ಪ್ರಕರಣ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 1311 ಪ್ರಕರಣ ಇತ್ಯರ್ಥಗೊಂಡು, 293 ಪ್ರಕರಣ ಬಾಕಿ ಉಳಿದವು. ಹಿರಿಯ ಸಿವಿಲ್ ನ್ಯಾಯಧೀಶೆ ಎಂ.ಭಾರತಿ ಅವರಿದ್ದ ಪೀಠದಲ್ಲಿ, ₹ 45, 56, 190 ಮೌಲ್ಯದ ಒಟ್ಟು 597 ಪ್ರಕರಣ ಇತ್ಯರ್ಥ ಪಡಿಸಲಾಯಿತು. </strong></p>.<p><strong>ಇವುಗಳಲ್ಲಿ ರಸ್ತೆ ಅಪಘಾತ, ಬ್ಯಾಂಕ್ ಸಾಲ, ಅಡಮಾನ, ಸಿವಿಲ್ ಸೇರಿವೆ. ಕಿರಿಯ ಸಿವಿಲ್ ನ್ಯಾಯಧೀಶೆ ಫಕ್ಕೀರವ್ವ ಕೆಳಗೇರಿ ಅವರಿದ್ದ ಪೀಠದಲ್ಲಿ ₹ 40, 84, 072 ಮೌಲ್ಯದ ಒಟ್ಟು 714 ಪ್ರಕರಣ ರಾಜೀಸಂಧಾನ ಮಾಡಲಾಯಿತು. </strong></p>.<p><strong>ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡು ಪರಸ್ಪರ ದೂರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿ ರಾಜೀಸಂದಾನಕ್ಕೆ ಸಮ್ಮತಿಸಿದ್ದು ವಿಶೇಷವಾಗಿತ್ತು. ಈ ವೇಳೆ ಕುಟುಂಬಸ್ಥರು, ವಕೀಲರು ಸಿಹಿ ಹಂಚಿ ಸಂಭ್ರಮಿಸಿದರು. </strong></p>.<p><strong>ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ಉಪಾಧ್ಯಕ್ಷ ಸಿ.ಪೀರ ಅಹ್ಮದ್, ಕಾರ್ಯದರ್ಶಿ ಜಿಎಸ್ಎಂ ಕೊಟ್ರಯ್ಯ, ಜಂಟಿ ಕಾರ್ಯದರ್ಶಿ ಕೇಶವಮೂರ್ತಿ, ಖಜಾಂಚಿ ಹೂಲೆಪ್ಪ, ಹೆಚ್ಚುವರಿ ಸರ್ಕಾರಿ ವಕೀಲರಾದ ಕೆ.ಜಗದಪ್ಪ, ನಂದೀಶ್, ಸರ್ಕಾರಿ ಅಭಿಯೋಜಕಿ ಮೀನಾಕ್ಷಿ, ಎಸ್.ನಿರ್ಮಲ ಇದ್ದರು. </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ</strong><strong>: ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯ ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 1311 ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ.</strong></p>.<p><strong>ಹಿರಿಯ ಮತ್ತು ಕಿರಿಯ ಸಿವಿಲ್ ನ್ಯಾಯಲಯದಲ್ಲಿ ಒಟ್ಟು 1604 ಪ್ರಕರಣ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 1311 ಪ್ರಕರಣ ಇತ್ಯರ್ಥಗೊಂಡು, 293 ಪ್ರಕರಣ ಬಾಕಿ ಉಳಿದವು. ಹಿರಿಯ ಸಿವಿಲ್ ನ್ಯಾಯಧೀಶೆ ಎಂ.ಭಾರತಿ ಅವರಿದ್ದ ಪೀಠದಲ್ಲಿ, ₹ 45, 56, 190 ಮೌಲ್ಯದ ಒಟ್ಟು 597 ಪ್ರಕರಣ ಇತ್ಯರ್ಥ ಪಡಿಸಲಾಯಿತು. </strong></p>.<p><strong>ಇವುಗಳಲ್ಲಿ ರಸ್ತೆ ಅಪಘಾತ, ಬ್ಯಾಂಕ್ ಸಾಲ, ಅಡಮಾನ, ಸಿವಿಲ್ ಸೇರಿವೆ. ಕಿರಿಯ ಸಿವಿಲ್ ನ್ಯಾಯಧೀಶೆ ಫಕ್ಕೀರವ್ವ ಕೆಳಗೇರಿ ಅವರಿದ್ದ ಪೀಠದಲ್ಲಿ ₹ 40, 84, 072 ಮೌಲ್ಯದ ಒಟ್ಟು 714 ಪ್ರಕರಣ ರಾಜೀಸಂಧಾನ ಮಾಡಲಾಯಿತು. </strong></p>.<p><strong>ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡು ಪರಸ್ಪರ ದೂರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿ ರಾಜೀಸಂದಾನಕ್ಕೆ ಸಮ್ಮತಿಸಿದ್ದು ವಿಶೇಷವಾಗಿತ್ತು. ಈ ವೇಳೆ ಕುಟುಂಬಸ್ಥರು, ವಕೀಲರು ಸಿಹಿ ಹಂಚಿ ಸಂಭ್ರಮಿಸಿದರು. </strong></p>.<p><strong>ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ಉಪಾಧ್ಯಕ್ಷ ಸಿ.ಪೀರ ಅಹ್ಮದ್, ಕಾರ್ಯದರ್ಶಿ ಜಿಎಸ್ಎಂ ಕೊಟ್ರಯ್ಯ, ಜಂಟಿ ಕಾರ್ಯದರ್ಶಿ ಕೇಶವಮೂರ್ತಿ, ಖಜಾಂಚಿ ಹೂಲೆಪ್ಪ, ಹೆಚ್ಚುವರಿ ಸರ್ಕಾರಿ ವಕೀಲರಾದ ಕೆ.ಜಗದಪ್ಪ, ನಂದೀಶ್, ಸರ್ಕಾರಿ ಅಭಿಯೋಜಕಿ ಮೀನಾಕ್ಷಿ, ಎಸ್.ನಿರ್ಮಲ ಇದ್ದರು. </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>