<p><strong>ತೆಕ್ಕಲಕೋಟೆ:</strong> ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆವರೆಗೆ ಸುರಿದ ಮಳೆಯಿಂದಾಗಿ ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಮುರಿದ ಹಾಗೂ ಮನೆ ಕುಸಿದ ಘಟನೆಗಳು ನಡೆದಿವೆ.</p>.<p>ತೆಕ್ಕಲಕೋಟೆ ಪಟ್ಟಣದ 5ನೇ ವಾರ್ಡಿನ ಮುಂದಲಮನೆ ಶಾಂತಮ್ಮ, ಹಳೆಕೋಟೆ ಗ್ರಾಮದ ನಾಗಮ್ಮ ಇವರ ವಾಸದ ಮನೆ ಬಿದ್ದಿದೆ. ಸಿರಿಗೇರಿ ಗ್ರಾಮದಲ್ಲಿ ಎರಡು ಮನೆ ಬಿದ್ದಿವೆ. ಈ ಕುರಿತು ಪಿಡಿಒ ಮತ್ತು ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.</p>.<p>ಉಪ್ಪಾರ ಹೊಸಳ್ಳಿ ಗ್ರಾಮದಲ್ಲಿ ಎರಡು ವಿದ್ಯುತ್ ಕಂಬ ಮುರಿದಿದ್ದು ಹಳೇಕೋಟೆ ಗ್ರಾಮದಲ್ಲಿ ಟ್ರಾನ್ಸ್ ಫಾರ್ಮರ್ ಸುಟ್ಟಿದೆ ಎಂದು ಜೆಇ ಯಲ್ಲಪ್ಪ ತಿಳಿಸಿದ್ದಾರೆ.</p>.<p>ಹಾಗಲೂರು, ಅರಳಿಗನೂರು, ಉಪ್ಪಾರ ಹೊಸಳ್ಳಿ ಎಂ.ಸುಗೂರು, ಮುದ್ದಟನೂರು ಗ್ರಾಮಗಳಲ್ಲಿ ಜೋಳ, ಹತ್ತಿ ಸಜ್ಜೆ ಹಾಗೂ ತೆಕ್ಕಲಕೋಟೆ ವ್ಯಾಪ್ತಿಯ ಭತ್ತದ ಗದ್ದೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಶಿವರಾಜ ಎಸ್ ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ:</strong> ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆವರೆಗೆ ಸುರಿದ ಮಳೆಯಿಂದಾಗಿ ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಮುರಿದ ಹಾಗೂ ಮನೆ ಕುಸಿದ ಘಟನೆಗಳು ನಡೆದಿವೆ.</p>.<p>ತೆಕ್ಕಲಕೋಟೆ ಪಟ್ಟಣದ 5ನೇ ವಾರ್ಡಿನ ಮುಂದಲಮನೆ ಶಾಂತಮ್ಮ, ಹಳೆಕೋಟೆ ಗ್ರಾಮದ ನಾಗಮ್ಮ ಇವರ ವಾಸದ ಮನೆ ಬಿದ್ದಿದೆ. ಸಿರಿಗೇರಿ ಗ್ರಾಮದಲ್ಲಿ ಎರಡು ಮನೆ ಬಿದ್ದಿವೆ. ಈ ಕುರಿತು ಪಿಡಿಒ ಮತ್ತು ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.</p>.<p>ಉಪ್ಪಾರ ಹೊಸಳ್ಳಿ ಗ್ರಾಮದಲ್ಲಿ ಎರಡು ವಿದ್ಯುತ್ ಕಂಬ ಮುರಿದಿದ್ದು ಹಳೇಕೋಟೆ ಗ್ರಾಮದಲ್ಲಿ ಟ್ರಾನ್ಸ್ ಫಾರ್ಮರ್ ಸುಟ್ಟಿದೆ ಎಂದು ಜೆಇ ಯಲ್ಲಪ್ಪ ತಿಳಿಸಿದ್ದಾರೆ.</p>.<p>ಹಾಗಲೂರು, ಅರಳಿಗನೂರು, ಉಪ್ಪಾರ ಹೊಸಳ್ಳಿ ಎಂ.ಸುಗೂರು, ಮುದ್ದಟನೂರು ಗ್ರಾಮಗಳಲ್ಲಿ ಜೋಳ, ಹತ್ತಿ ಸಜ್ಜೆ ಹಾಗೂ ತೆಕ್ಕಲಕೋಟೆ ವ್ಯಾಪ್ತಿಯ ಭತ್ತದ ಗದ್ದೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಶಿವರಾಜ ಎಸ್ ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>