<p><strong>ಕೊಟ್ಟೂರು</strong>: ಇಂದಿನ ಡಿಜಿಟಲ್ ಯುಗದಲ್ಲಿ ಓದುವ ಹವ್ಯಾಸ ಇಳಿಮುಖವಾಗುತ್ತಿರುವ ಸಮಯದಲ್ಲಿ ಓದುವ ಅಭಿರುಚಿ ಹೆಚ್ಚಿಸಲು ಕೊಟ್ಟೂರು ತಾಲ್ಲೂಕಿನ ಹ್ಯಾಳ್ಯಾ ಬಸ್ ನಿಲ್ದಾಣದಲ್ಲಿ ಸ್ಥಾಪಿಸಿರುವ ಪುಸ್ತಕ ಗೂಡು ಇತರೆ ಗ್ರಂಥಾಲಯಗಳಿಗೆ ಮಾದರಿಯಾಗಿದೆ. ಓದುಗರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ.</p>.<p>ಹ್ಯಾಳ್ಯಾ ಗ್ರಾಮ ಪಂಚಾಯಿತಿ ವತಿಯಿಂದ 2024 ರಲ್ಲಿ ₹30 ಸಾವಿರ ವೆಚ್ಚದಲ್ಲಿ ಅಧ್ಯಕ್ಷೆ ಡಿ.ಹಾಲಮ್ಮ ನಿಜೇಶ್ ಕುಮಾರ್, ಪಿಡಿಒ ಸಿ.ಎಚ್.ಎಂ.ಗಂಗಾಧರಯ್ಯ ಮುಂದಾಳತ್ವದಲ್ಲಿ ಸ್ಧಾಪನೆಗೊಂಡ ಈ ಪುಸ್ತಕ ಗೂಡಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆನಂದ್ ಕುಮಾರ್ ಚಾಲನೆ ನೀಡಿದ್ದರು.</p>.<p>ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಹಾಗೂ ಗ್ರಾಮಸ್ಥರಿಗೆ ಜ್ಞಾನ ದಾಹ ತಣಿಸಲು ಈ ಗೂಡಿನಲ್ಲಿ 900 ಪುಸ್ತಕಗಳನ್ನು ಜೋಡಿಸಿದ್ದು ಓದುಗರಿಗೆ ಕುಳಿತುಕೊಳ್ಳಲು ಆಸನ, ಫ್ಯಾನ್ ವ್ಯವಸ್ಥೆ ಕಲ್ಪಿಸಿರುವುದು ಗಮನಾರ್ಹ. ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದರಿಂದ ಪುಸ್ತಕಗಳ ಸುರಕ್ಷತೆಗೆ ಸಹಕಾರಿಯಾಗಿದೆ.</p>.<p>ಪುಸ್ತಕ ಗೂಡಿನಲ್ಲಿ ಕುವೆಂಪು, ವಿ.ಕೃ.ಗೋಕಾಕ್, ಬೇಂದ್ರೆ, ಪೂರ್ಣ ಚಂದ್ರ ತೇಜಸ್ವಿ, ಚಂದ್ರಶೇಖರ್ ಕಂಬಾರ್, ಕುಂ.ವೀ, ಈಚನೂರ್ ಶಾಂತ, ವ್ಯಾಸರಾಯ ಬಲ್ಲಾಳ ಮುಂತಾದ ಲೇಖಕರ, ಕವಿಗಳ ಕಥಾ ಸಂಕಲನ, ಕವನ ಸಂಕಲನ ಹಾಗೂ ಕಾದಂಬರಿ, ನಾಟಕಗಳ ಕೃತಿಗಳನ್ನು ನಾವಿಲ್ಲಿ ಕಾಣಬಹುದು.</p>.<p>‘ಓದುವ ಹವ್ಯಾಸ ಇದ್ದರೆ ಸೋಮಾರಿತನಕ್ಕೆ ಜಾಗವಿಲ್ಲ’, ‘ ಪುಸ್ತಕವಿಲ್ಲದ ಮನೆ ಆತ್ಮವಿಲ್ಲದ ದೇಹವಿದ್ದಂತೆ’, ‘ ಪುಸ್ತಕವನ್ನು ತಲೆತಗ್ಗಿಸಿ ಓದಿದರೆ ಅದು ನಿನ್ನನ್ನು ತಲೆಯೆತ್ತುವಂತೆ ಮಾಡುತ್ತದೆ’ ಎಂಬ ಗೋಡೆ ಬರಹಗಳು ನೋಡುಗರ ಮನ ಸೆಳೆಯುತ್ತಿವೆ.</p>.<p>24/7 ತೆರದ ಪುಸ್ತಕ ಗೂಡಿನಲ್ಲಿ ಇಂದಿಗೂ ಒಂದೂ ಪುಸ್ತಕವೂ ಕಳವಾಗದಿರುವುದು ಗ್ರಾಮಸ್ಧರ ಪುಸ್ತಕ ಪ್ರೇಮಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮದ ಮುಖಂಡ ನಾಣಿಕೇರಿ ಕೊಟ್ರೇಶ್ ಹೆಮ್ಮೆಯಿಂದ ಹೇಳುತ್ತಾರೆ.</p>.<p>’ನಮ್ಮೂರಿನ ಜನ ಸಮಯವನ್ನು ವ್ಯರ್ಥಗೊಳಿಸದೇ ಓದುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗೆ ಕಥೆ ಪುಸ್ತಕಗಳು, ವಿದ್ಯಾರ್ಥಿಗಳಿಗೆ ಅಗತ್ಯವಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಯತ ಕಾಲಿಕೆಗಳು ಇಲ್ಲಿವೆ. ಹಾಗಾಗಿ ಪುಸ್ತಕ ಗೂಡು ಓದುವ ಹವ್ಯಾಸವನ್ನು ನಮ್ಮೆಲ್ಲರಿಗೂ ರೂಢಿಸಿದೆ’ ಎಂದು ಟಿ.ಮಹಾಂತೇಶ್ ಹೇಳುತ್ತಾರೆ.</p>.<p>’ಪುಸ್ತಕ ಜೋಳಿಗೆ ಎಂಬ ಕಾರ್ಯಕ್ರಮದಡಿ ಜನರಿಂದ ಪುಸ್ತಕಗಳನ್ನು ದಾನವಾಗಿ ಪಡೆಯುವುದರ ಜೊತೆಯಲ್ಲಿ ಗ್ರಂಥಾಲಯ ಇಲಾಖೆ ರವಾನಿಸುವ ಪುಸ್ತಕಗಳು ಸಹ ಈ ಗೂಡಿಗೆ ಸೇರ್ಪಡೆಯಾಗಿವೆ. ಡಿಜಿಟಲೀಕರಣಗೊಂಡಿರುವ ಎಲ್ಲಾ ಭಾಷಾ ಪುಸ್ತಕಗಳನ್ನು ಕಂಪ್ಯೂಟರ್ ಮೂಲಕ ವಿದ್ಯಾರ್ಥಿಗಳು ಓದುತ್ತಿರುವುದು ಸಹ ಗಮನಾರ್ಹ ಸಂಗತಿ’ ಎಂದು ಗ್ರಂಥಪಾಲಕ ಬಿ.ಲೋಕೇಶ್ ಹೇಳುತ್ತಾರೆ.</p>.<p>’ವಿದ್ಯಾರ್ಥಿಗಳನ್ನು ಸೆಳೆಯಲು ‘ ಅಮ್ಮನಿಗಾಗಿ ಒಂದು ಪತ್ರ’ , ‘‘ಚಿಣ್ಣರ ಚಿತ್ರಕಲೆ’ ಎಂಬ ವಿನೂತನ ಕಾರ್ಯಕ್ರಮಗಳು ಹಾಗೂ ವಿಶೇಷ ಚೇತನರಿಗೆ ನೆರವಾಗುವ ಆಟದ ಸಾಮಾಗ್ರಿಗಳು, ಚೆಸ್, ಕೇರಂ ಮುಂತಾದ ಕ್ರೀಡೋಪಕರಣಗಳ ಮೂಲಕ ವಿದ್ಯಾರ್ಥಿಗಳನ್ನು ಓದುವ ಹವ್ಯಾಸ ರೂಡಿಸಲು ಗ್ರಾಮ ಪಂಚಾಯಿತಿ ಹಾಗೂ ಗ್ರಂಥಪಾಲಕರ ಪರಿಶ್ರಮವು ಅಡಗಿದೆ’ ಎಂದು ಕೆ.ಹರ್ಷವರ್ಧನ್ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಟ್ಟೂರು</strong>: ಇಂದಿನ ಡಿಜಿಟಲ್ ಯುಗದಲ್ಲಿ ಓದುವ ಹವ್ಯಾಸ ಇಳಿಮುಖವಾಗುತ್ತಿರುವ ಸಮಯದಲ್ಲಿ ಓದುವ ಅಭಿರುಚಿ ಹೆಚ್ಚಿಸಲು ಕೊಟ್ಟೂರು ತಾಲ್ಲೂಕಿನ ಹ್ಯಾಳ್ಯಾ ಬಸ್ ನಿಲ್ದಾಣದಲ್ಲಿ ಸ್ಥಾಪಿಸಿರುವ ಪುಸ್ತಕ ಗೂಡು ಇತರೆ ಗ್ರಂಥಾಲಯಗಳಿಗೆ ಮಾದರಿಯಾಗಿದೆ. ಓದುಗರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ.</p>.<p>ಹ್ಯಾಳ್ಯಾ ಗ್ರಾಮ ಪಂಚಾಯಿತಿ ವತಿಯಿಂದ 2024 ರಲ್ಲಿ ₹30 ಸಾವಿರ ವೆಚ್ಚದಲ್ಲಿ ಅಧ್ಯಕ್ಷೆ ಡಿ.ಹಾಲಮ್ಮ ನಿಜೇಶ್ ಕುಮಾರ್, ಪಿಡಿಒ ಸಿ.ಎಚ್.ಎಂ.ಗಂಗಾಧರಯ್ಯ ಮುಂದಾಳತ್ವದಲ್ಲಿ ಸ್ಧಾಪನೆಗೊಂಡ ಈ ಪುಸ್ತಕ ಗೂಡಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆನಂದ್ ಕುಮಾರ್ ಚಾಲನೆ ನೀಡಿದ್ದರು.</p>.<p>ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಹಾಗೂ ಗ್ರಾಮಸ್ಥರಿಗೆ ಜ್ಞಾನ ದಾಹ ತಣಿಸಲು ಈ ಗೂಡಿನಲ್ಲಿ 900 ಪುಸ್ತಕಗಳನ್ನು ಜೋಡಿಸಿದ್ದು ಓದುಗರಿಗೆ ಕುಳಿತುಕೊಳ್ಳಲು ಆಸನ, ಫ್ಯಾನ್ ವ್ಯವಸ್ಥೆ ಕಲ್ಪಿಸಿರುವುದು ಗಮನಾರ್ಹ. ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದರಿಂದ ಪುಸ್ತಕಗಳ ಸುರಕ್ಷತೆಗೆ ಸಹಕಾರಿಯಾಗಿದೆ.</p>.<p>ಪುಸ್ತಕ ಗೂಡಿನಲ್ಲಿ ಕುವೆಂಪು, ವಿ.ಕೃ.ಗೋಕಾಕ್, ಬೇಂದ್ರೆ, ಪೂರ್ಣ ಚಂದ್ರ ತೇಜಸ್ವಿ, ಚಂದ್ರಶೇಖರ್ ಕಂಬಾರ್, ಕುಂ.ವೀ, ಈಚನೂರ್ ಶಾಂತ, ವ್ಯಾಸರಾಯ ಬಲ್ಲಾಳ ಮುಂತಾದ ಲೇಖಕರ, ಕವಿಗಳ ಕಥಾ ಸಂಕಲನ, ಕವನ ಸಂಕಲನ ಹಾಗೂ ಕಾದಂಬರಿ, ನಾಟಕಗಳ ಕೃತಿಗಳನ್ನು ನಾವಿಲ್ಲಿ ಕಾಣಬಹುದು.</p>.<p>‘ಓದುವ ಹವ್ಯಾಸ ಇದ್ದರೆ ಸೋಮಾರಿತನಕ್ಕೆ ಜಾಗವಿಲ್ಲ’, ‘ ಪುಸ್ತಕವಿಲ್ಲದ ಮನೆ ಆತ್ಮವಿಲ್ಲದ ದೇಹವಿದ್ದಂತೆ’, ‘ ಪುಸ್ತಕವನ್ನು ತಲೆತಗ್ಗಿಸಿ ಓದಿದರೆ ಅದು ನಿನ್ನನ್ನು ತಲೆಯೆತ್ತುವಂತೆ ಮಾಡುತ್ತದೆ’ ಎಂಬ ಗೋಡೆ ಬರಹಗಳು ನೋಡುಗರ ಮನ ಸೆಳೆಯುತ್ತಿವೆ.</p>.<p>24/7 ತೆರದ ಪುಸ್ತಕ ಗೂಡಿನಲ್ಲಿ ಇಂದಿಗೂ ಒಂದೂ ಪುಸ್ತಕವೂ ಕಳವಾಗದಿರುವುದು ಗ್ರಾಮಸ್ಧರ ಪುಸ್ತಕ ಪ್ರೇಮಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮದ ಮುಖಂಡ ನಾಣಿಕೇರಿ ಕೊಟ್ರೇಶ್ ಹೆಮ್ಮೆಯಿಂದ ಹೇಳುತ್ತಾರೆ.</p>.<p>’ನಮ್ಮೂರಿನ ಜನ ಸಮಯವನ್ನು ವ್ಯರ್ಥಗೊಳಿಸದೇ ಓದುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗೆ ಕಥೆ ಪುಸ್ತಕಗಳು, ವಿದ್ಯಾರ್ಥಿಗಳಿಗೆ ಅಗತ್ಯವಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಯತ ಕಾಲಿಕೆಗಳು ಇಲ್ಲಿವೆ. ಹಾಗಾಗಿ ಪುಸ್ತಕ ಗೂಡು ಓದುವ ಹವ್ಯಾಸವನ್ನು ನಮ್ಮೆಲ್ಲರಿಗೂ ರೂಢಿಸಿದೆ’ ಎಂದು ಟಿ.ಮಹಾಂತೇಶ್ ಹೇಳುತ್ತಾರೆ.</p>.<p>’ಪುಸ್ತಕ ಜೋಳಿಗೆ ಎಂಬ ಕಾರ್ಯಕ್ರಮದಡಿ ಜನರಿಂದ ಪುಸ್ತಕಗಳನ್ನು ದಾನವಾಗಿ ಪಡೆಯುವುದರ ಜೊತೆಯಲ್ಲಿ ಗ್ರಂಥಾಲಯ ಇಲಾಖೆ ರವಾನಿಸುವ ಪುಸ್ತಕಗಳು ಸಹ ಈ ಗೂಡಿಗೆ ಸೇರ್ಪಡೆಯಾಗಿವೆ. ಡಿಜಿಟಲೀಕರಣಗೊಂಡಿರುವ ಎಲ್ಲಾ ಭಾಷಾ ಪುಸ್ತಕಗಳನ್ನು ಕಂಪ್ಯೂಟರ್ ಮೂಲಕ ವಿದ್ಯಾರ್ಥಿಗಳು ಓದುತ್ತಿರುವುದು ಸಹ ಗಮನಾರ್ಹ ಸಂಗತಿ’ ಎಂದು ಗ್ರಂಥಪಾಲಕ ಬಿ.ಲೋಕೇಶ್ ಹೇಳುತ್ತಾರೆ.</p>.<p>’ವಿದ್ಯಾರ್ಥಿಗಳನ್ನು ಸೆಳೆಯಲು ‘ ಅಮ್ಮನಿಗಾಗಿ ಒಂದು ಪತ್ರ’ , ‘‘ಚಿಣ್ಣರ ಚಿತ್ರಕಲೆ’ ಎಂಬ ವಿನೂತನ ಕಾರ್ಯಕ್ರಮಗಳು ಹಾಗೂ ವಿಶೇಷ ಚೇತನರಿಗೆ ನೆರವಾಗುವ ಆಟದ ಸಾಮಾಗ್ರಿಗಳು, ಚೆಸ್, ಕೇರಂ ಮುಂತಾದ ಕ್ರೀಡೋಪಕರಣಗಳ ಮೂಲಕ ವಿದ್ಯಾರ್ಥಿಗಳನ್ನು ಓದುವ ಹವ್ಯಾಸ ರೂಡಿಸಲು ಗ್ರಾಮ ಪಂಚಾಯಿತಿ ಹಾಗೂ ಗ್ರಂಥಪಾಲಕರ ಪರಿಶ್ರಮವು ಅಡಗಿದೆ’ ಎಂದು ಕೆ.ಹರ್ಷವರ್ಧನ್ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>