<p><strong>ಹಗರಿಬೊಮ್ಮನಹಳ್ಳಿ:</strong> ಕುರಿ ಚರ್ಮದಿಂದ ತಯಾರಿಸುವ ಕಂಬಳಿಗೆ ಉಲನ್ ದಾರದಿಂದ ಅಲಂಕಾರಗೊಳಿಸಿ, ಅದಕ್ಕೆ ಹೊಸ ರೂಪ ಕೊಡುವ ಕಲೆ ಮೂಲಕ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಮಾತಾಗಿದ್ದಾರೆ ತಾಲ್ಲೂಕಿನ ಹಂಪಾಪಟ್ಟಣದ ಕರಿಗಾರ ಗಂಗಮ್ಮ.</p>.<p>ಕೃಷಿ, ಗಂಗಮ್ಮ ಅವರ ಮೂಲ ಕಸುಬು. ಬಿಡುವಿದ್ದಾಗ ಕಂಬಳಿ ಅಲಂಕಾರ ಮಾಡಿ, ಅದರಿಂದ ಬರುವ ಹಣ ಜೀವನ ನಿರ್ವಹಣೆಗೆ ಬಳಸಿಕೊಳ್ಳುತ್ತಾರೆ.</p>.<p>ದಿನಕ್ಕೆ ಮೂರು ಕಂಬಳಿ ಅಲಂಕಾರ ಮಾಡುವ ಗಂಗಮ್ಮನವರು ದಿನಕ್ಕೆ ₹300ರಿಂದ ₹350 ದುಡಿಮೆ ಮಾಡುತ್ತಾರೆ. ಕೆಲವರು ಹಣದ ಬದಲಾಗಿ ಜೋಳ, ಅಕ್ಕಿ ಕೂಡ ಕೊಡುತ್ತಾರೆ. ಯಾರು ಏನೇ ಕೊಟ್ಟರೂ ಅದನ್ನು ವಿನಮ್ರದಿಂದ ತೆಗೆದುಕೊಳ್ಳುತ್ತಾರೆ.</p>.<p>ಕಾಲು ಗೆಜ್ಜೆಗೂ ಅಲಂಕಾರ ಮಾಡುವ ಕಲೆಯೂ ಇವರಿಗೆ ರೂಢಿಗತ. ಕೆಲಸ ಹೆಚ್ಚಾದಾಗ ಬೇರೆಯವರನ್ನು ಕೆಲಸಕ್ಕೆ ಇಟ್ಟುಕೊಂಡು ದಿನಕ್ಕೆ ₹150 ಕೊಡುತ್ತಾರೆ. ಪತಿ ದಿ. ಕರಿಗಾರ ಚಿನ್ನಪ್ಪ ಅವರಿಂದ ಕಲಿತಿರುವ ಕಲೆ, ಅವರು ಗತಿಸಿ ಹೋದ ನಂತರ ಅವರ ನೆರವಿಗೆ ಬಂದಿದೆ.</p>.<p>‘ಕರಿಗಾರ ಗಂಗಮ್ಮ ಅವರ ಕಲೆ ಗುರುತಿಸಿ, ಅದಕ್ಕೆ ಅಗತ್ಯ ನೆರವು ನೀಡುವ ಕೆಲಸ ಆಗಬೇಕು. ಸಾಂಪ್ರದಾಯಿಕ ಕಲೆ ಮುಂದಿನ ಪೀಳಿಗೆಗೂ ಗೊತ್ತಾಗಬೇಕು’ ಎಂದು ಲೇಖಕ ಅಂಬಳಿ ಕೇಶವಮೂರ್ತಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ:</strong> ಕುರಿ ಚರ್ಮದಿಂದ ತಯಾರಿಸುವ ಕಂಬಳಿಗೆ ಉಲನ್ ದಾರದಿಂದ ಅಲಂಕಾರಗೊಳಿಸಿ, ಅದಕ್ಕೆ ಹೊಸ ರೂಪ ಕೊಡುವ ಕಲೆ ಮೂಲಕ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಮಾತಾಗಿದ್ದಾರೆ ತಾಲ್ಲೂಕಿನ ಹಂಪಾಪಟ್ಟಣದ ಕರಿಗಾರ ಗಂಗಮ್ಮ.</p>.<p>ಕೃಷಿ, ಗಂಗಮ್ಮ ಅವರ ಮೂಲ ಕಸುಬು. ಬಿಡುವಿದ್ದಾಗ ಕಂಬಳಿ ಅಲಂಕಾರ ಮಾಡಿ, ಅದರಿಂದ ಬರುವ ಹಣ ಜೀವನ ನಿರ್ವಹಣೆಗೆ ಬಳಸಿಕೊಳ್ಳುತ್ತಾರೆ.</p>.<p>ದಿನಕ್ಕೆ ಮೂರು ಕಂಬಳಿ ಅಲಂಕಾರ ಮಾಡುವ ಗಂಗಮ್ಮನವರು ದಿನಕ್ಕೆ ₹300ರಿಂದ ₹350 ದುಡಿಮೆ ಮಾಡುತ್ತಾರೆ. ಕೆಲವರು ಹಣದ ಬದಲಾಗಿ ಜೋಳ, ಅಕ್ಕಿ ಕೂಡ ಕೊಡುತ್ತಾರೆ. ಯಾರು ಏನೇ ಕೊಟ್ಟರೂ ಅದನ್ನು ವಿನಮ್ರದಿಂದ ತೆಗೆದುಕೊಳ್ಳುತ್ತಾರೆ.</p>.<p>ಕಾಲು ಗೆಜ್ಜೆಗೂ ಅಲಂಕಾರ ಮಾಡುವ ಕಲೆಯೂ ಇವರಿಗೆ ರೂಢಿಗತ. ಕೆಲಸ ಹೆಚ್ಚಾದಾಗ ಬೇರೆಯವರನ್ನು ಕೆಲಸಕ್ಕೆ ಇಟ್ಟುಕೊಂಡು ದಿನಕ್ಕೆ ₹150 ಕೊಡುತ್ತಾರೆ. ಪತಿ ದಿ. ಕರಿಗಾರ ಚಿನ್ನಪ್ಪ ಅವರಿಂದ ಕಲಿತಿರುವ ಕಲೆ, ಅವರು ಗತಿಸಿ ಹೋದ ನಂತರ ಅವರ ನೆರವಿಗೆ ಬಂದಿದೆ.</p>.<p>‘ಕರಿಗಾರ ಗಂಗಮ್ಮ ಅವರ ಕಲೆ ಗುರುತಿಸಿ, ಅದಕ್ಕೆ ಅಗತ್ಯ ನೆರವು ನೀಡುವ ಕೆಲಸ ಆಗಬೇಕು. ಸಾಂಪ್ರದಾಯಿಕ ಕಲೆ ಮುಂದಿನ ಪೀಳಿಗೆಗೂ ಗೊತ್ತಾಗಬೇಕು’ ಎಂದು ಲೇಖಕ ಅಂಬಳಿ ಕೇಶವಮೂರ್ತಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>