<p><strong>ಬಳ್ಳಾರಿ</strong>: ಬಳ್ಳಾರಿಯಲ್ಲಿ ಈ ವರ್ಷದ ಡಿಸೆಂಬರ್ನಲ್ಲಿ ಆಯೋಜಿಸಲು ಉದ್ದೇಶಿಸಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಐದು ತಿಂಗಳಷ್ಟೇ ಬಾಕಿ ಉಳಿದಿದೆ. ಆದರೆ, ಪ್ರಕ್ರಿಯೆಗಳಿಗೆ ಇನ್ನೂ ಚಾಲನೆಯೇ ಸಿಕ್ಕಿಲ್ಲ.</p><p>ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮೇಲಿನ ಭ್ರಷ್ಟಾಚಾರದ ಆರೋಪ, ತನಿಖೆ, ಆರೋಪ ಮಾಡಿದವರ ವಿರುದ್ಧ ಪರಿಷತ್ತಿನ ಅಧ್ಯಕ್ಷರ ಕಾನೂನು ಹೋರಾಟವೂ ಸೇರಿದಂತೆ ಹಲವು ಬಗೆಯ ಗೊಂದಲಗಳು ನೇರವಾಗಿ ಸಮ್ಮೇಳನ ಆಯೋಜನೆ ಮೇಲೆ ಪರಿಣಾಮ ಬೀರುತ್ತಿವೆ.</p><p>ಈ ಕಾನೂನು ಹೋರಾಟಗಳ ಪರಿಣಾಮ ಸಚಿವರು, ಅಧಿಕಾರಿಗಳು ಕಸಾಪ ಪದಾಧಿಕಾರಿಗಳ ಜೊತೆ ಕಾಣಿಸಿ<br>ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸಮನ್ವಯದ ಸಮಸ್ಯೆ ಎದುರಾಗಿದೆ. ಸರ್ಕಾರದ ಸಹಕಾರ ಸಿಗದಂತಾಗಿದೆ. ಹೀಗಾಗಿ, ಸಮ್ಮೇಳನದ ಕಾವು ಇಲ್ಲಿ ಕಾಣಿಸುತ್ತಿಲ್ಲ. </p><p>ಬಳ್ಳಾರಿ ಸಾಹಿತ್ಯ ಸಮ್ಮೇಳನದ ವಿಚಾರವಾಗಿ ಈವರೆಗೆ ಜಾಗ, ದಿನ ನಿಗದಿಯಾಗಿಲ್ಲ. ಇನ್ನು ಸ್ವಾಗತ ಸಮಿತಿ ರಚನೆ ದೂರದ ಮಾತಾಗಿ ಉಳಿದಿದೆ. </p><p>ಸಮ್ಮೇಳನ ನೆನಪಿಗೆ ಹೊತ್ತಿಗೆ ಹೊರತರಲು ಸಿದ್ಧತೆ ಆರಂಭವಾಗಬೇಕು. ವಿಷಯಗಳು ನಿರ್ಧಾರವಾಗಬೇಕು. ಲೇಖಕರಿಂದ ಬರಹ ಆಹ್ವಾನಿಸಬೇಕು. ಪುಸ್ತಕ ಮುದ್ರಣಕ್ಕೆ ಹೋಗಬೇಕು. ಈ ಪ್ರಕ್ರಿಯೆಗೂ ಚಾಲನೆ ಸಿಕ್ಕಿಲ್ಲ. </p><p>ಸಮ್ಮೇಳನ ಆಯೋಜಿಸಲು ಕಾರ್ಯಕರ್ತರ ದೊಡ್ಡ ಪಡೆ ಬೇಕು. ಅವರನ್ನು ಏಕಾಏಕಿ ಹೊಂದಿಸಲು ಸಾಧ್ಯವಿಲ್ಲ. ಕಾಲೇಜು ವಿದ್ಯಾರ್ಥಿಗಳು, ಎನ್ಎಸ್ಎಸ್, ಎನ್ಸಿಸಿ, ಸ್ಕೌಟ್, ಸೇವಾದಳದ ಸದಸ್ಯರನ್ನು ಪ್ರೇರೇಪಿಸ<br>ಬೇಕು. ಇದು ಕೂಡ ಇನ್ನೂ ನಡೆದಿಲ್ಲ. </p><p>ವಿಚಾರ ಗೋಷ್ಠಿಗಳ ವಿಷಯ ಕುರಿತು ಜನರ ಅಭಿಪ್ರಾಯ ಕೇಳಬೇಕು. ಜಿಲ್ಲೆಗೆ ಸಂಬಂಧಿಸಿದ ವಿಷಯ ಸಂಗ್ರಹಿಸಬೇಕು. ಈ ಕೆಲಸಗಳಿಗೂ ಚಾಲನೆ ಸಿಕ್ಕಿಲ್ಲ. ಸಮ್ಮೇಳನದ ಕುರಿತು ಈವರೆಗೆ ಒಂದೂ ಪರಿಣಾಮಕಾರಿ ಸಭೆ ನಡೆದಿಲ್ಲ. </p><p>ಈ ಮಧ್ಯೆ, ಬಳ್ಳಾರಿಯ ‘ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ’ದ 70 ಎಕರೆ ಪ್ರದೇಶ<br>ದಲ್ಲಿ ಸಮ್ಮೇಳನ ಆಯೋಜಿಸುವಂತೆ ವಿವಿ ಕುಲಪತಿ ಮುನಿರಾಜು ಪ್ರಸ್ತಾವ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಈ ಜಾಗದ ಪರಿಶೀಲನೆ ನಡೆಯುತ್ತಿದೆ ಎನ್ನಲಾಗಿದೆ.</p>.<p><strong>ಉಸ್ತುವಾರಿ ಸಚಿವರ ಪ್ರವಾಸ ರದ್ದು </strong></p> <p>ಜುಲೈ 22ರಂದು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಗಾಗಿ ಬಳ್ಳಾರಿ ಉಸ್ತುವಾರಿ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್ ಬಳ್ಳಾರಿಗೆ ಬರಬೇಕಿತ್ತು. ಅಂದೇ ಅವರು ಸ್ಥಳದ ಪರಿಶೀಲನೆಯನ್ನೂ ನಡೆಸುವವರಿದ್ದರು.</p><p>ಆದರೆ, ಜಿಲ್ಲೆಯ ಜನಪ್ರತಿನಿಧಿಗಳ ಅಲಭ್ಯತೆ ಕಾರಣದಿಂದ ಸಚಿವರ ಪ್ರವಾಸ ಮೊಟಕುಗೊಂಡಿದೆ. ಹೀಗಾಗಿ ಜಾಗ ನಿಗದಿ ವಿಳಂಬವಾಗುವ ಸಾಧ್ಯತೆಗಳಿವೆ.</p>.<div><blockquote>ತಿಂಗಳ ಅಂತ್ಯಕ್ಕೆ ಬಳ್ಳಾರಿಗೆ ಪ್ರವಾಸ ಕೈಗೊಳ್ಳಲಿದ್ದು, ಸಮ್ಮೇಳನಕ್ಕೆ ಸೂಕ್ತ ಜಾಗ ಅಂತಿಮಗೊಳಿಸಿ, ಕೆಲಸ ಕಾರ್ಯಗಳಿಗೂ ಚಾಲನೆ ನೀಡಲಾಗುವುದು</blockquote><span class="attribution">ಜಮೀರ್ ಅಹಮದ್ ಖಾನ್</span></div>.<div><blockquote>ಜಾಗ ನಿಗದಿಗಾಗಿ ಜಿಲ್ಲಾಧಿಕಾರಿ ಜತೆ ಸಂಪರ್ಕದಲ್ಲಿದ್ದೇವೆ. ಸೋಮವಾರದ ಬಳಿಕ ಜಾಗ ಪರಿಶೀಲಿಸಲು ಜಿಲ್ಲಾಧಿಕಾರಿ ಒಪ್ಪಿದ್ದಾರೆ</blockquote><span class="attribution">ನಿಷ್ಠಿ ರುದ್ರಪ್ಪ,</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ಬಳ್ಳಾರಿಯಲ್ಲಿ ಈ ವರ್ಷದ ಡಿಸೆಂಬರ್ನಲ್ಲಿ ಆಯೋಜಿಸಲು ಉದ್ದೇಶಿಸಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಐದು ತಿಂಗಳಷ್ಟೇ ಬಾಕಿ ಉಳಿದಿದೆ. ಆದರೆ, ಪ್ರಕ್ರಿಯೆಗಳಿಗೆ ಇನ್ನೂ ಚಾಲನೆಯೇ ಸಿಕ್ಕಿಲ್ಲ.</p><p>ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮೇಲಿನ ಭ್ರಷ್ಟಾಚಾರದ ಆರೋಪ, ತನಿಖೆ, ಆರೋಪ ಮಾಡಿದವರ ವಿರುದ್ಧ ಪರಿಷತ್ತಿನ ಅಧ್ಯಕ್ಷರ ಕಾನೂನು ಹೋರಾಟವೂ ಸೇರಿದಂತೆ ಹಲವು ಬಗೆಯ ಗೊಂದಲಗಳು ನೇರವಾಗಿ ಸಮ್ಮೇಳನ ಆಯೋಜನೆ ಮೇಲೆ ಪರಿಣಾಮ ಬೀರುತ್ತಿವೆ.</p><p>ಈ ಕಾನೂನು ಹೋರಾಟಗಳ ಪರಿಣಾಮ ಸಚಿವರು, ಅಧಿಕಾರಿಗಳು ಕಸಾಪ ಪದಾಧಿಕಾರಿಗಳ ಜೊತೆ ಕಾಣಿಸಿ<br>ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸಮನ್ವಯದ ಸಮಸ್ಯೆ ಎದುರಾಗಿದೆ. ಸರ್ಕಾರದ ಸಹಕಾರ ಸಿಗದಂತಾಗಿದೆ. ಹೀಗಾಗಿ, ಸಮ್ಮೇಳನದ ಕಾವು ಇಲ್ಲಿ ಕಾಣಿಸುತ್ತಿಲ್ಲ. </p><p>ಬಳ್ಳಾರಿ ಸಾಹಿತ್ಯ ಸಮ್ಮೇಳನದ ವಿಚಾರವಾಗಿ ಈವರೆಗೆ ಜಾಗ, ದಿನ ನಿಗದಿಯಾಗಿಲ್ಲ. ಇನ್ನು ಸ್ವಾಗತ ಸಮಿತಿ ರಚನೆ ದೂರದ ಮಾತಾಗಿ ಉಳಿದಿದೆ. </p><p>ಸಮ್ಮೇಳನ ನೆನಪಿಗೆ ಹೊತ್ತಿಗೆ ಹೊರತರಲು ಸಿದ್ಧತೆ ಆರಂಭವಾಗಬೇಕು. ವಿಷಯಗಳು ನಿರ್ಧಾರವಾಗಬೇಕು. ಲೇಖಕರಿಂದ ಬರಹ ಆಹ್ವಾನಿಸಬೇಕು. ಪುಸ್ತಕ ಮುದ್ರಣಕ್ಕೆ ಹೋಗಬೇಕು. ಈ ಪ್ರಕ್ರಿಯೆಗೂ ಚಾಲನೆ ಸಿಕ್ಕಿಲ್ಲ. </p><p>ಸಮ್ಮೇಳನ ಆಯೋಜಿಸಲು ಕಾರ್ಯಕರ್ತರ ದೊಡ್ಡ ಪಡೆ ಬೇಕು. ಅವರನ್ನು ಏಕಾಏಕಿ ಹೊಂದಿಸಲು ಸಾಧ್ಯವಿಲ್ಲ. ಕಾಲೇಜು ವಿದ್ಯಾರ್ಥಿಗಳು, ಎನ್ಎಸ್ಎಸ್, ಎನ್ಸಿಸಿ, ಸ್ಕೌಟ್, ಸೇವಾದಳದ ಸದಸ್ಯರನ್ನು ಪ್ರೇರೇಪಿಸ<br>ಬೇಕು. ಇದು ಕೂಡ ಇನ್ನೂ ನಡೆದಿಲ್ಲ. </p><p>ವಿಚಾರ ಗೋಷ್ಠಿಗಳ ವಿಷಯ ಕುರಿತು ಜನರ ಅಭಿಪ್ರಾಯ ಕೇಳಬೇಕು. ಜಿಲ್ಲೆಗೆ ಸಂಬಂಧಿಸಿದ ವಿಷಯ ಸಂಗ್ರಹಿಸಬೇಕು. ಈ ಕೆಲಸಗಳಿಗೂ ಚಾಲನೆ ಸಿಕ್ಕಿಲ್ಲ. ಸಮ್ಮೇಳನದ ಕುರಿತು ಈವರೆಗೆ ಒಂದೂ ಪರಿಣಾಮಕಾರಿ ಸಭೆ ನಡೆದಿಲ್ಲ. </p><p>ಈ ಮಧ್ಯೆ, ಬಳ್ಳಾರಿಯ ‘ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ’ದ 70 ಎಕರೆ ಪ್ರದೇಶ<br>ದಲ್ಲಿ ಸಮ್ಮೇಳನ ಆಯೋಜಿಸುವಂತೆ ವಿವಿ ಕುಲಪತಿ ಮುನಿರಾಜು ಪ್ರಸ್ತಾವ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಈ ಜಾಗದ ಪರಿಶೀಲನೆ ನಡೆಯುತ್ತಿದೆ ಎನ್ನಲಾಗಿದೆ.</p>.<p><strong>ಉಸ್ತುವಾರಿ ಸಚಿವರ ಪ್ರವಾಸ ರದ್ದು </strong></p> <p>ಜುಲೈ 22ರಂದು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಗಾಗಿ ಬಳ್ಳಾರಿ ಉಸ್ತುವಾರಿ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್ ಬಳ್ಳಾರಿಗೆ ಬರಬೇಕಿತ್ತು. ಅಂದೇ ಅವರು ಸ್ಥಳದ ಪರಿಶೀಲನೆಯನ್ನೂ ನಡೆಸುವವರಿದ್ದರು.</p><p>ಆದರೆ, ಜಿಲ್ಲೆಯ ಜನಪ್ರತಿನಿಧಿಗಳ ಅಲಭ್ಯತೆ ಕಾರಣದಿಂದ ಸಚಿವರ ಪ್ರವಾಸ ಮೊಟಕುಗೊಂಡಿದೆ. ಹೀಗಾಗಿ ಜಾಗ ನಿಗದಿ ವಿಳಂಬವಾಗುವ ಸಾಧ್ಯತೆಗಳಿವೆ.</p>.<div><blockquote>ತಿಂಗಳ ಅಂತ್ಯಕ್ಕೆ ಬಳ್ಳಾರಿಗೆ ಪ್ರವಾಸ ಕೈಗೊಳ್ಳಲಿದ್ದು, ಸಮ್ಮೇಳನಕ್ಕೆ ಸೂಕ್ತ ಜಾಗ ಅಂತಿಮಗೊಳಿಸಿ, ಕೆಲಸ ಕಾರ್ಯಗಳಿಗೂ ಚಾಲನೆ ನೀಡಲಾಗುವುದು</blockquote><span class="attribution">ಜಮೀರ್ ಅಹಮದ್ ಖಾನ್</span></div>.<div><blockquote>ಜಾಗ ನಿಗದಿಗಾಗಿ ಜಿಲ್ಲಾಧಿಕಾರಿ ಜತೆ ಸಂಪರ್ಕದಲ್ಲಿದ್ದೇವೆ. ಸೋಮವಾರದ ಬಳಿಕ ಜಾಗ ಪರಿಶೀಲಿಸಲು ಜಿಲ್ಲಾಧಿಕಾರಿ ಒಪ್ಪಿದ್ದಾರೆ</blockquote><span class="attribution">ನಿಷ್ಠಿ ರುದ್ರಪ್ಪ,</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>