<p><strong>ಕೊಟ್ಟೂರು:</strong> ‘ಶರಣರು ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದವರು. ಹಾಗೂ ನುಡಿದಂತೆ ನಡೆದರು’ ಎಂದು ತಹಶೀಲ್ದಾರ್ ಜಿ.ಕೆ ಅಮರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿರುವ ಮೌಢ್ಯವನ್ನು ನಿವಾರಿಸಲು ಶ್ರಮಿಸಿದ ಶರಣರ ನಡೆ ನುಡಿಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಸಾಮರಸ್ಯದ ಸಮಾಜ ನಿರ್ಮಾಣವಾಗಲು ಸಾಧ್ಯ’ ಎಂದರು.</p>.<p>ಡಿಎಸ್ಎಸ್ ಜಿಲ್ಲಾ ಘಟಕದ ಸಂಚಾಲಕರಾದ ಬದ್ಧಿ ಮರಿಸ್ವಾಮಿ ಮಾತನಾಡಿ, ಶರಣರು ಯಾವುದೇ ಕಾಯಕ ಮಾಡಲಿ ಅದರಲ್ಲಿ ಶ್ರೇಷ್ಠತೆ ಕಂಡಕೊಂಡಿದ್ದರು. ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದರು. ವಕೀಲ ಟಿ. ಹನುಮಂತಪ್ಪ ಮಾತನಾಡಿದರು.</p>.<p>ಶಿರಸ್ತೇದಾರರಾದ ಎಚ್.ಎಂ. ಕೊಟ್ರಮ್ಮ, ಚಂದ್ರ ನಾಯ್ಕ, ಕಂದಾಯ ನಿರೀಕ್ಷಕ ಡಿ. ಶಿವಕುಮಾರ್, ಹರೀಶ್, ಮಂಜಮ್ಮ, ವೀರೇಶ್ ತುಪ್ಪದ, ಮಂಜುನಾಥ್, ಮಣಿಕಂಠ, ಕನ್ನಾಕಟ್ಟೆ ಶಿವರಾಜ್, ಸಿ.ಮ. ಗುರುಬಸವರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಟ್ಟೂರು:</strong> ‘ಶರಣರು ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದವರು. ಹಾಗೂ ನುಡಿದಂತೆ ನಡೆದರು’ ಎಂದು ತಹಶೀಲ್ದಾರ್ ಜಿ.ಕೆ ಅಮರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿರುವ ಮೌಢ್ಯವನ್ನು ನಿವಾರಿಸಲು ಶ್ರಮಿಸಿದ ಶರಣರ ನಡೆ ನುಡಿಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಸಾಮರಸ್ಯದ ಸಮಾಜ ನಿರ್ಮಾಣವಾಗಲು ಸಾಧ್ಯ’ ಎಂದರು.</p>.<p>ಡಿಎಸ್ಎಸ್ ಜಿಲ್ಲಾ ಘಟಕದ ಸಂಚಾಲಕರಾದ ಬದ್ಧಿ ಮರಿಸ್ವಾಮಿ ಮಾತನಾಡಿ, ಶರಣರು ಯಾವುದೇ ಕಾಯಕ ಮಾಡಲಿ ಅದರಲ್ಲಿ ಶ್ರೇಷ್ಠತೆ ಕಂಡಕೊಂಡಿದ್ದರು. ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದರು. ವಕೀಲ ಟಿ. ಹನುಮಂತಪ್ಪ ಮಾತನಾಡಿದರು.</p>.<p>ಶಿರಸ್ತೇದಾರರಾದ ಎಚ್.ಎಂ. ಕೊಟ್ರಮ್ಮ, ಚಂದ್ರ ನಾಯ್ಕ, ಕಂದಾಯ ನಿರೀಕ್ಷಕ ಡಿ. ಶಿವಕುಮಾರ್, ಹರೀಶ್, ಮಂಜಮ್ಮ, ವೀರೇಶ್ ತುಪ್ಪದ, ಮಂಜುನಾಥ್, ಮಣಿಕಂಠ, ಕನ್ನಾಕಟ್ಟೆ ಶಿವರಾಜ್, ಸಿ.ಮ. ಗುರುಬಸವರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>