<p><strong>ಕುರುಗೋಡು</strong>: ಕೊರೆಯುವ ಚಳಿಗೆ ತಾಲ್ಲೂಕಿನ ಜನರು ತತ್ತರಿಸಿಹೋಗಿದ್ದಾರೆ. ಸಂಜೆ ಆರು ಗಂಟೆಯಿಂದಲೇ ಶೀತಗಾಳಿ ಚಳಿ ಆರಂಭಗೊಂಡು ಬೆಳಿಗ್ಗೆ ಎಂಟು ಗಂಟೆಯಾದರೂ ಕಡಿಮೆಯಾಗುತ್ತಿಲ್ಲ.</p>.<p>ಕೃಷಿ ಚಟುವಟಿಕೆಯಲ್ಲಿ ತೊಡಗಲು ರೈತರು ಮತ್ತು ಕೃಷಿ ಕಾರ್ಮಿಕರು ಬೆಳಿಗ್ಗೆ ಶೀತಗಾಳಿ ಮತ್ತು ಕೊರೆಯುವ ಚಳಿಯಲ್ಲಿಯೇ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ಕಟಾವಿನ ಹಂತದಲ್ಲಿರುವ ಮೆಣಸಿನಕಾಯಿ ಬೆಳೆ ತಂಪು ವಾತಾವರಣದಿಂದ ಮುದುಡತೊಡಗಿದೆ.</p>.<p>ಶಾಲಾ ಕಾಲೇಜುಗಳಲ್ಲಿ ಶನಿವಾರ ಬೆಳಗಿನಜಾವ ತರಗತಿಗಳು ಜರುಗಲಿದ್ದು, ಚಳಿಯ ಪರಿಣಾಮ ಹಾಜರಾಗಿ ಕಡಿಮೆಯಾಗುತ್ತಿರುವುದು ಕಂಡುಬರುತ್ತದೆ. ಬೆಳಗಿನಜಾವ ಪತ್ರಿಕೆ ಮತ್ತು ಹಾಲು ಇತರೇ ವಸ್ತುಗಳನ್ನು ಹಂಚುವವರ ಗೋಳು ಕೇಳತೀರದಾಗಿದೆ.</p>.<p>ಕಳೆದ ವಾರದಿಂದ ಶೀತಗಾಳಿ ಮತ್ತು ಚಳಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕ ಮಕ್ಕಳು ಮತ್ತು ದೊಡ್ಡವರಲ್ಲಿ ಶೀಲ, ಕೆಮ್ಮು, ಕಫ ದಂತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಳಿಯಿಂದ ರಕ್ಷಿಸಿಕೊಳ್ಳಲು ಕೆಲವು ಜನರು ರಸ್ತೆಗಳ ಪಕ್ಕದಲ್ಲಿ ಬೆಂಕಿಹಾಕಿಕೊಂಡು ಚಳಿಕಾಯಿಸುತ್ತಿರುವ ದೃಶ್ಯ ಕಂಡುಬಂದಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಗೋಡು</strong>: ಕೊರೆಯುವ ಚಳಿಗೆ ತಾಲ್ಲೂಕಿನ ಜನರು ತತ್ತರಿಸಿಹೋಗಿದ್ದಾರೆ. ಸಂಜೆ ಆರು ಗಂಟೆಯಿಂದಲೇ ಶೀತಗಾಳಿ ಚಳಿ ಆರಂಭಗೊಂಡು ಬೆಳಿಗ್ಗೆ ಎಂಟು ಗಂಟೆಯಾದರೂ ಕಡಿಮೆಯಾಗುತ್ತಿಲ್ಲ.</p>.<p>ಕೃಷಿ ಚಟುವಟಿಕೆಯಲ್ಲಿ ತೊಡಗಲು ರೈತರು ಮತ್ತು ಕೃಷಿ ಕಾರ್ಮಿಕರು ಬೆಳಿಗ್ಗೆ ಶೀತಗಾಳಿ ಮತ್ತು ಕೊರೆಯುವ ಚಳಿಯಲ್ಲಿಯೇ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ಕಟಾವಿನ ಹಂತದಲ್ಲಿರುವ ಮೆಣಸಿನಕಾಯಿ ಬೆಳೆ ತಂಪು ವಾತಾವರಣದಿಂದ ಮುದುಡತೊಡಗಿದೆ.</p>.<p>ಶಾಲಾ ಕಾಲೇಜುಗಳಲ್ಲಿ ಶನಿವಾರ ಬೆಳಗಿನಜಾವ ತರಗತಿಗಳು ಜರುಗಲಿದ್ದು, ಚಳಿಯ ಪರಿಣಾಮ ಹಾಜರಾಗಿ ಕಡಿಮೆಯಾಗುತ್ತಿರುವುದು ಕಂಡುಬರುತ್ತದೆ. ಬೆಳಗಿನಜಾವ ಪತ್ರಿಕೆ ಮತ್ತು ಹಾಲು ಇತರೇ ವಸ್ತುಗಳನ್ನು ಹಂಚುವವರ ಗೋಳು ಕೇಳತೀರದಾಗಿದೆ.</p>.<p>ಕಳೆದ ವಾರದಿಂದ ಶೀತಗಾಳಿ ಮತ್ತು ಚಳಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕ ಮಕ್ಕಳು ಮತ್ತು ದೊಡ್ಡವರಲ್ಲಿ ಶೀಲ, ಕೆಮ್ಮು, ಕಫ ದಂತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಳಿಯಿಂದ ರಕ್ಷಿಸಿಕೊಳ್ಳಲು ಕೆಲವು ಜನರು ರಸ್ತೆಗಳ ಪಕ್ಕದಲ್ಲಿ ಬೆಂಕಿಹಾಕಿಕೊಂಡು ಚಳಿಕಾಯಿಸುತ್ತಿರುವ ದೃಶ್ಯ ಕಂಡುಬಂದಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>