ವೀರೇಶ (42) ಮೃತ ರೈತ. ಪತ್ನಿಯ ಹೆಸರಿನಲ್ಲಿರುವ 2 ಎಕರೆ ಜಮೀನಿದ್ದು, 5 ಎಕರೆ ಹೊಲವನ್ನು ಗುತ್ತಿಗೆಗೆ ಹಿಡಿದು ಭತ್ತ ಬೆಳೆದಿದ್ದರು. ಪ್ರತಿ ಎಕರೆಗೆ 40 ಸಾವಿರ ಖರ್ಚು ಮಾಡಿದ್ದರು. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನಲ್ಲಿ ಪತ್ನಿ ಹೆಸರಲ್ಲಿ ₹ 1ಲಕ್ಷ ಸಾಲ ಪಡೆದಿದ್ದಾರೆ. ಕ್ರಿಮಿನಾಶಕ, ರಸಗೊಬ್ಬ ಮತ್ತು ಕೃಷಿ ಖರ್ಚಿಗೆ ₹ 3 ಲಕ್ಷ ಕೈಸಾಲ ಮಾಡಿಕೊಂಡಿದ್ದು, ಒಟ್ಟು 4 ಲಕ್ಷ ಸಾಲವಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.