<p>ಕುರುಗೋಡು: ‘ಆರ್ಥಿಕವಾಗಿ ಸಬಲರಾಗಿದ್ದರೂ ಮಾನಸಿಕವಾಗಿ ದುರ್ಬಲರಾಗಿರುವ ಮನುಷ್ಯ ಪಾಪ ಕರ್ಮಗಳ ಫಲವಾಗಿ ಅಸುಖಿಯಾಗಿ ಬದುಕುತ್ತಿದ್ದಾನೆ’ ಎಂದು ಸೂಳೆಕಲ್ಲು ಬೃಹನ್ಮಠದ ಪದ್ಮಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಮುಷ್ಟಗಟ್ಟೆ ರಸ್ತೆಯಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರುಗುತ್ತಿರುವ 6ನೇ ವರ್ಷದ ಗುಡುದೂರು ದೊಡ್ಡಬಸವೇಶ್ವರ ಪುರಾಣ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಜರುಗಿದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಒತ್ತಡದ ಬದುಕು ನಮ್ಮ ಜೀವನವನ್ನು ಯಾಂತ್ರೀಕರಣಗೊಳಿಸಿದೆ. ಜಂಜಾಟದಿಂದ ಮುಕ್ತಿ ಪಡೆದು ನೆಮ್ಮದಿ ಜೀವನ ಸಾಗಿಸಲು ಪುರಾಣ ಪುಣ್ಯಕಥೆಗಳ ಶ್ರವಣ ಮಾಡಬೇಕು’ ಎಂದರು.</p>.<p>ಇದೇ ಸಂದರ್ಭದಲ್ಲಿ 56 ಮಹಿಳೆಯರಿಗೆ ಉಡಿತುಂಬಿದರು. ಕೊಟ್ಟೂರು ದೇಶಿಕರು ಭಕ್ತಿಗೀತೆಗಳನ್ನು ಹಾಡಿ ಗಮನ ಸೆಳೆದರು.</p>.<p>ಷಡಾಕ್ಷರಿ ಸ್ವಾಮಿ ಪುರಾಣ ಪ್ರವಚನ ನೀಡಿದರು. ಪ್ರಭುಲಿಂಗನ ಗೌಡ ಪುರಾಣ ವಾಚಿಸಿದರು. ಕೊಂಚಿಗೇರಿ ಶಿವಯ್ಯ ಸಂಗೀತ ಸೇವೆ ಸಲ್ಲಿಸಿದರು. ಶೇಖರಯ್ಯ ಸ್ವಾಮಿ ತಬಲಾ ಸಾಥ್ ನೀಡಿದರು. ಭೀಮನ ಗೌಡ ಮತ್ತು ಜಡೆಯಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುರುಗೋಡು: ‘ಆರ್ಥಿಕವಾಗಿ ಸಬಲರಾಗಿದ್ದರೂ ಮಾನಸಿಕವಾಗಿ ದುರ್ಬಲರಾಗಿರುವ ಮನುಷ್ಯ ಪಾಪ ಕರ್ಮಗಳ ಫಲವಾಗಿ ಅಸುಖಿಯಾಗಿ ಬದುಕುತ್ತಿದ್ದಾನೆ’ ಎಂದು ಸೂಳೆಕಲ್ಲು ಬೃಹನ್ಮಠದ ಪದ್ಮಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಮುಷ್ಟಗಟ್ಟೆ ರಸ್ತೆಯಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರುಗುತ್ತಿರುವ 6ನೇ ವರ್ಷದ ಗುಡುದೂರು ದೊಡ್ಡಬಸವೇಶ್ವರ ಪುರಾಣ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಜರುಗಿದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಒತ್ತಡದ ಬದುಕು ನಮ್ಮ ಜೀವನವನ್ನು ಯಾಂತ್ರೀಕರಣಗೊಳಿಸಿದೆ. ಜಂಜಾಟದಿಂದ ಮುಕ್ತಿ ಪಡೆದು ನೆಮ್ಮದಿ ಜೀವನ ಸಾಗಿಸಲು ಪುರಾಣ ಪುಣ್ಯಕಥೆಗಳ ಶ್ರವಣ ಮಾಡಬೇಕು’ ಎಂದರು.</p>.<p>ಇದೇ ಸಂದರ್ಭದಲ್ಲಿ 56 ಮಹಿಳೆಯರಿಗೆ ಉಡಿತುಂಬಿದರು. ಕೊಟ್ಟೂರು ದೇಶಿಕರು ಭಕ್ತಿಗೀತೆಗಳನ್ನು ಹಾಡಿ ಗಮನ ಸೆಳೆದರು.</p>.<p>ಷಡಾಕ್ಷರಿ ಸ್ವಾಮಿ ಪುರಾಣ ಪ್ರವಚನ ನೀಡಿದರು. ಪ್ರಭುಲಿಂಗನ ಗೌಡ ಪುರಾಣ ವಾಚಿಸಿದರು. ಕೊಂಚಿಗೇರಿ ಶಿವಯ್ಯ ಸಂಗೀತ ಸೇವೆ ಸಲ್ಲಿಸಿದರು. ಶೇಖರಯ್ಯ ಸ್ವಾಮಿ ತಬಲಾ ಸಾಥ್ ನೀಡಿದರು. ಭೀಮನ ಗೌಡ ಮತ್ತು ಜಡೆಯಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>