ಚಿತ್ರದುರ್ಗದಿಂದ ಕೂಡಲಸಂಗಮಕ್ಕೆ ಅವರ ಪಾರ್ಥೀವ ಶರೀರವನ್ನು ಗಾಜಿನ ವಾಹನದಲ್ಲಿ ಕೊಂಡೊಯ್ಯಲಾಯಿತು. ತಮ್ಮ ಊರಿನ ಮೂಲಕ ಹೋಗುತ್ತಿರುವ ವಿಷಯ ಗೊತ್ತಾಗಿ ಸ್ಥಳೀಯ ಲಿಂಗಾಯತ ಸಮಾಜ ಹಾಗೂ ಬಸವ ಬಳಗದವರು ಹೆದ್ದಾರಿಯ ಸುರಂಗ ಮಾರ್ಗದ ಬಳಿ ಸೇರಿದ್ದರು. ಮಾತೆಯವರ ಪಾರ್ಥೀವ ಶರೀರ ಬರುತ್ತಿದ್ದಂತೆ ಹೂಮಳೆಗರೆದರು. ನಂತರ ದರ್ಶನ ಪಡೆದರು. ‘ಮಾತೆಯವರಿಗೆ ಜಯವಾಗಲಿ’ ಎಂದು ಘೋಷಣೆಗಳನ್ನು ಹಾಕಿದರು. ಕೆಲವು ಭಕ್ತರು ಭಾವುಕರಾಗಿ ಕಣ್ಣೀರು ಹಾಕಿದರು.