<p>ಹಗರಿಬೊಮ್ಮನಹಳ್ಳಿ: ‘ಹಿರಿಯರ ತ್ಯಾಗ ಮತ್ತು ಬಲಿದಾನದಿಂದ ಸ್ವಾತಂತ್ರ್ಯ ದೊರಕಿದೆ, ನಾವು ಅವರಿಗೆ ಸದಾ ಋಣಿಯಾಗಿರಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ಹೇಳಿದರು.</p>.<p>ಪಟ್ಟಣದಲ್ಲಿ ಶಿಕ್ಷಣ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ರಾಷ್ಟ್ರಧ್ವಜದೊಂದಿಗೆ ಮ್ಯಾರಾಥಾನ್ ನಡಿಗೆ’ಯ ನೇತೃತ್ವ ವಹಿಸಿ ಅವರು ಮಾತನಾಡಿದರು.</p>.<p>ಸ್ವಾತಂತ್ರ್ಯ ಹೋರಾಟಗಾರರನ್ನು ಸದಾ ಸ್ಮರಿಸಬೇಕು, ಅವರು ತಮ್ಮ ಬದುಕನ್ನು ಅರ್ಪಿಸಿ ಪರಕೀಯರ ದಾಸ್ಯದಿಂದ ಮುಕ್ತಿಗೊಳಿಸಿದ್ದಾರೆ. ಈಗ ಎಲ್ಲರೂ ಕ್ಷೇಮದಿಂದ ಸ್ವತಂತ್ರ ಭಾರತದಲ್ಲಿರುವುದಕ್ಕೆ ಅವರ ಕೆಚ್ಚೆದೆಯ ಹೋರಾಟ ಕಾರಣ ಎಂದರು.</p>.<p>ನಿವೃತ್ತ ಸೈನಿಕ ಎನ್.ಗುರುಬಸವರಾಜ ಮಾತನಾಡಿ, ರಾಷ್ಟ್ರಭಕ್ತಿ ಎನ್ನುವುದು ಎಲ್ಲರ ಮನಸ್ಸಿನಲ್ಲಿ ಮೇಳೈಸಬೇಕು, ಕೇವಲ ಮಾತನಾಡಿದರೆ ಸಾಲದು, ಅದರಂತೆ ನಡೆದುಕೊಳ್ಳಬೇಕು ಎಂದರು.</p>.<p>ಬಿಇಒ ಕಚೇರಿಯಿಂದ ಆರಂಭಗೊಂಡ ಮ್ಯಾರಾಥಾನ್ ನಡಿಗೆ ಬಸವೇಶ್ವರ ಬಜಾರ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕೂಡ್ಲಿಗಿ ರಸ್ತೆ, ಎಂ.ವೈ.ಘೋರ್ಪಡೆ ಶಾಲೆ ರಸ್ತೆ, ಸೋನಿಯಾಗಾಂಧಿನಗರ, ಶಿಕ್ಷಕರ ಕಾಲೊನಿ, ನೇತಾಜಿ ರಸ್ತೆ, ಕೊಟ್ಟೂರು ವೃತ್ತದ ಮೂಲಕ ಮರಳಿ ಬಿಇಒ ಕಚೇರಿಗೆ ತೆರಳಿತು.</p>.<p>ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷ ಎಚ್.ಸೋಮಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕ ಕೃಷ್ಣನಾಯ್ಕ, ಶಿಕ್ಷಣ ಸಂಯೋಜಕರಾದ ಗುರುಬಸವರಾಜ, ಶಿವಲಿಂಗಸ್ವಾಮಿ, ಶಿಕ್ಷಕರಾದ ರವಿಚಂದ್ರ ನಾಯ್ಕ, ಮುಸ್ತಾಕ್ ಅಹ್ಮದ್, ಸಿದ್ದಲಿಂಗಸ್ವಾಮಿ, ಟಿ.ಸೋಮಶೇಖರ್, ಹುಸೇನ್ ಸಾಹೇಬ್, ಎಚ್.ಕೊಟ್ರಪ್ಪ, ಸೋಮನಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಗರಿಬೊಮ್ಮನಹಳ್ಳಿ: ‘ಹಿರಿಯರ ತ್ಯಾಗ ಮತ್ತು ಬಲಿದಾನದಿಂದ ಸ್ವಾತಂತ್ರ್ಯ ದೊರಕಿದೆ, ನಾವು ಅವರಿಗೆ ಸದಾ ಋಣಿಯಾಗಿರಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ಹೇಳಿದರು.</p>.<p>ಪಟ್ಟಣದಲ್ಲಿ ಶಿಕ್ಷಣ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ರಾಷ್ಟ್ರಧ್ವಜದೊಂದಿಗೆ ಮ್ಯಾರಾಥಾನ್ ನಡಿಗೆ’ಯ ನೇತೃತ್ವ ವಹಿಸಿ ಅವರು ಮಾತನಾಡಿದರು.</p>.<p>ಸ್ವಾತಂತ್ರ್ಯ ಹೋರಾಟಗಾರರನ್ನು ಸದಾ ಸ್ಮರಿಸಬೇಕು, ಅವರು ತಮ್ಮ ಬದುಕನ್ನು ಅರ್ಪಿಸಿ ಪರಕೀಯರ ದಾಸ್ಯದಿಂದ ಮುಕ್ತಿಗೊಳಿಸಿದ್ದಾರೆ. ಈಗ ಎಲ್ಲರೂ ಕ್ಷೇಮದಿಂದ ಸ್ವತಂತ್ರ ಭಾರತದಲ್ಲಿರುವುದಕ್ಕೆ ಅವರ ಕೆಚ್ಚೆದೆಯ ಹೋರಾಟ ಕಾರಣ ಎಂದರು.</p>.<p>ನಿವೃತ್ತ ಸೈನಿಕ ಎನ್.ಗುರುಬಸವರಾಜ ಮಾತನಾಡಿ, ರಾಷ್ಟ್ರಭಕ್ತಿ ಎನ್ನುವುದು ಎಲ್ಲರ ಮನಸ್ಸಿನಲ್ಲಿ ಮೇಳೈಸಬೇಕು, ಕೇವಲ ಮಾತನಾಡಿದರೆ ಸಾಲದು, ಅದರಂತೆ ನಡೆದುಕೊಳ್ಳಬೇಕು ಎಂದರು.</p>.<p>ಬಿಇಒ ಕಚೇರಿಯಿಂದ ಆರಂಭಗೊಂಡ ಮ್ಯಾರಾಥಾನ್ ನಡಿಗೆ ಬಸವೇಶ್ವರ ಬಜಾರ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕೂಡ್ಲಿಗಿ ರಸ್ತೆ, ಎಂ.ವೈ.ಘೋರ್ಪಡೆ ಶಾಲೆ ರಸ್ತೆ, ಸೋನಿಯಾಗಾಂಧಿನಗರ, ಶಿಕ್ಷಕರ ಕಾಲೊನಿ, ನೇತಾಜಿ ರಸ್ತೆ, ಕೊಟ್ಟೂರು ವೃತ್ತದ ಮೂಲಕ ಮರಳಿ ಬಿಇಒ ಕಚೇರಿಗೆ ತೆರಳಿತು.</p>.<p>ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷ ಎಚ್.ಸೋಮಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕ ಕೃಷ್ಣನಾಯ್ಕ, ಶಿಕ್ಷಣ ಸಂಯೋಜಕರಾದ ಗುರುಬಸವರಾಜ, ಶಿವಲಿಂಗಸ್ವಾಮಿ, ಶಿಕ್ಷಕರಾದ ರವಿಚಂದ್ರ ನಾಯ್ಕ, ಮುಸ್ತಾಕ್ ಅಹ್ಮದ್, ಸಿದ್ದಲಿಂಗಸ್ವಾಮಿ, ಟಿ.ಸೋಮಶೇಖರ್, ಹುಸೇನ್ ಸಾಹೇಬ್, ಎಚ್.ಕೊಟ್ರಪ್ಪ, ಸೋಮನಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>