<p><strong>ತೋರಣಗಲ್ಲು: </strong>ಪಂಜಾ ಪ್ರತಿಷ್ಠಾಪನೆಯನ್ನು ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮಾಡುವಂತಿಲ್ಲ. ಸಾರ್ವಜನಿಕರು ಮೊಹರಂ ಆಚರಣೆ ವೇಳೆ ಕಡ್ಡಾಯವಾಗಿ ಕೋವಿಡ್-19 ನಿಯಮಗಳನ್ನು ಪಾಲಿಸಬೇಕು ಎಂದು ಕುಡುತಿನಿ ಠಾಣೆಯ ಪಿಎಸ್ಐ ಮೊಹಮ್ಮದ್ ರಫಿ ಹೇಳಿದರು.</p>.<p>ಸಮೀಪದ ಕುಡುತಿನಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೊಹರಂ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.</p>.<p>ಸಾರ್ವಜನಿಕರು ಅಲಾಯಿಕುಣಿ ತೆಗೆಯುವಂತಿಲ್ಲ. ಕುಣಿಯಲ್ಲಿ ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಚ್ಚಿ ಕುಣಿಯುಂತಿಲ್ಲ. ಅಲ್ಲದೆ ತಾಶಾ, ಡೋಲುಗಳನ್ನು ಬಾರಿಸುವಂತಿಲ್ಲ. ಮಸೀದಿಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು. ಮಸೀದಿ ಮೆಲ್ವಿಚಾರಕರು ಪೂಜಾ ಸಮಯದಲ್ಲಿ ಕೋವಿಡ್ ನಿಯಮಗಳ ಬಗ್ಗೆ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.</p>.<p>ಮೂರನೇ ಅಲೆಯು ಗಡಿ ರಾಜ್ಯಗಳಲ್ಲಿ ತೀವ್ರಗತಿಯಲ್ಲಿ ಹರಡುವುದರಿಂದ ಪಟ್ಟಣದ ಜನರು ಸುರಕ್ಷತೆಯೊಂದಿಗೆ ಕೋವಿಡ್ ನಿಯಮಗಳ ಮೊಹರಂ ಅನ್ನು ಸರಳವಾಗಿ ಆಚರಿಸಬೇಕು ಎಂದು ಹೇಳಿದರು.</p>.<p>ಕುಡುತಿನಿ, ಹೊಸದರೋಜಿ, ಹಳೆದರೋಜಿ, ಮಾದಾಪುರ, ಏಳುಬೆಂಚಿ, ತಿಮ್ಮಾಲಾಪುರ, ವೇಣಿವೀರಾಪುರ ಮಾವಿನಹಳ್ಳಿ ಸೇರಿದಂತೆ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ಜನರು ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು.</p>.<p>ಅಪರಾಧ ವಿಭಾಗದ ಪಿಎಸ್ಐ ಸುರೇಶ್, ಪಂಚಾಯ್ತಿ ಸದಸ್ಯರಾದ ಜಿ.ಎಸ್. ವೆಂಕಟರಮಣ ಬಾಬು, ಮಂಜುನಾಥ್, ಕೆ.ಪಂಪಾಪತಿ, ದುಗ್ಗೇಪ್ಪ, ಮುಖಂಡರಾದ ಚಂದ್ರಾಯಿ ದೊಡ್ಡಬಸಪ್ಪ, ದೊಡ್ಡಪ್ಪ, ಮಾದಾಪುರ ಮಾರಪ್ಪ, ಮಲಿಯಪ್ಪ, ಏಳುಬೆಂಚಿ ಅಂಬಣ್ಣ, ಜಂಗ್ಲಿಸಾಬ್, ತಿಮ್ಮಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೋರಣಗಲ್ಲು: </strong>ಪಂಜಾ ಪ್ರತಿಷ್ಠಾಪನೆಯನ್ನು ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮಾಡುವಂತಿಲ್ಲ. ಸಾರ್ವಜನಿಕರು ಮೊಹರಂ ಆಚರಣೆ ವೇಳೆ ಕಡ್ಡಾಯವಾಗಿ ಕೋವಿಡ್-19 ನಿಯಮಗಳನ್ನು ಪಾಲಿಸಬೇಕು ಎಂದು ಕುಡುತಿನಿ ಠಾಣೆಯ ಪಿಎಸ್ಐ ಮೊಹಮ್ಮದ್ ರಫಿ ಹೇಳಿದರು.</p>.<p>ಸಮೀಪದ ಕುಡುತಿನಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೊಹರಂ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.</p>.<p>ಸಾರ್ವಜನಿಕರು ಅಲಾಯಿಕುಣಿ ತೆಗೆಯುವಂತಿಲ್ಲ. ಕುಣಿಯಲ್ಲಿ ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಚ್ಚಿ ಕುಣಿಯುಂತಿಲ್ಲ. ಅಲ್ಲದೆ ತಾಶಾ, ಡೋಲುಗಳನ್ನು ಬಾರಿಸುವಂತಿಲ್ಲ. ಮಸೀದಿಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು. ಮಸೀದಿ ಮೆಲ್ವಿಚಾರಕರು ಪೂಜಾ ಸಮಯದಲ್ಲಿ ಕೋವಿಡ್ ನಿಯಮಗಳ ಬಗ್ಗೆ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.</p>.<p>ಮೂರನೇ ಅಲೆಯು ಗಡಿ ರಾಜ್ಯಗಳಲ್ಲಿ ತೀವ್ರಗತಿಯಲ್ಲಿ ಹರಡುವುದರಿಂದ ಪಟ್ಟಣದ ಜನರು ಸುರಕ್ಷತೆಯೊಂದಿಗೆ ಕೋವಿಡ್ ನಿಯಮಗಳ ಮೊಹರಂ ಅನ್ನು ಸರಳವಾಗಿ ಆಚರಿಸಬೇಕು ಎಂದು ಹೇಳಿದರು.</p>.<p>ಕುಡುತಿನಿ, ಹೊಸದರೋಜಿ, ಹಳೆದರೋಜಿ, ಮಾದಾಪುರ, ಏಳುಬೆಂಚಿ, ತಿಮ್ಮಾಲಾಪುರ, ವೇಣಿವೀರಾಪುರ ಮಾವಿನಹಳ್ಳಿ ಸೇರಿದಂತೆ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ಜನರು ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು.</p>.<p>ಅಪರಾಧ ವಿಭಾಗದ ಪಿಎಸ್ಐ ಸುರೇಶ್, ಪಂಚಾಯ್ತಿ ಸದಸ್ಯರಾದ ಜಿ.ಎಸ್. ವೆಂಕಟರಮಣ ಬಾಬು, ಮಂಜುನಾಥ್, ಕೆ.ಪಂಪಾಪತಿ, ದುಗ್ಗೇಪ್ಪ, ಮುಖಂಡರಾದ ಚಂದ್ರಾಯಿ ದೊಡ್ಡಬಸಪ್ಪ, ದೊಡ್ಡಪ್ಪ, ಮಾದಾಪುರ ಮಾರಪ್ಪ, ಮಲಿಯಪ್ಪ, ಏಳುಬೆಂಚಿ ಅಂಬಣ್ಣ, ಜಂಗ್ಲಿಸಾಬ್, ತಿಮ್ಮಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>