ನಗರದಲ್ಲಿ ಶನಿವಾರ ಕೆಪಿಸಿಸಿ ಉಪಾಧ್ಯಕ್ಷ ಎನ್.ಸೂರಾರ್ಯನಾರಾಯಣ ರೆಡ್ಡಿ ಅವರ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಘಟನೆಗೆ ಅಷ್ಟೊಂದು ಮಹತ್ವ ಕೊಡುವ ಅವಶ್ಯಕತೆ ಇರಲಿಲ್ಲ. ಆದರೆ, ಕಾಣದ ಕೈಯೊಂದು ನಮ್ಮ ಮಧ್ಯೆ ಕೆಲಸ ಮಾಡಿದ್ದರಿಂದ ಆ ವಿಚಾರ ದೊಡ್ಡದಾಗಿದೆ. ಘಟನೆ ಸಂಬಂಧ ಶಾಸಕ ಎಲ್ಬಿಪಿ ಭೀಮಾನಾಯ್ಕ ಅವರ ಪಾತ್ರದ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಅದಕ್ಕೆ ಕಾನೂನು ತೊಡಕುಗಳಿವೆ’ ಎಂದರು.