<p><strong>ಸಿರುಗುಪ್ಪ:</strong> ನಗರದ ಬಸ್ ನಿಲ್ದಾಣದ ಪಕ್ಕದಲ್ಲಿನ ‘ಅವಳು–ಮಹಿಳಾ ಪಿಂಕ್ ಶೌಚಾಲಯ’ ಮತ್ತು ಮಗುವಿಗೆ ತಾಯಿ ಹಾಲುಣಿಸುವ ಕೇಂದ್ರ, ವಿಶ್ರಾಂತಿ ಕೊಠಡಿ, ಸ್ನಾನಗೃಹ ಕಟ್ಟಡ ಉದ್ಘಾಟನೆಗೊಂಡರೂ ಬಳಕೆಗೆ ಸಿಗದೇ ನಿತ್ಯವೂ ಮಹಿಳೆಯರು ಮುಜುಗರ ಅನುಭವಿಸುವಂತಾಗಿದೆ.</p>.<p>ಕಳೆದ ಐದು ತಿಂಗಳಿನಿಂದ ಸಾರ್ವಜನಿಕ ಬಸ್ ನಿಲ್ದಾಣದ ಮಹಿಳಾ ಶೌಚಾಲಯ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮಹಿಳೆಯರಿಗಾಗಿ ಶೌಚಾಲಯ ಇಲ್ಲದಂತಾಗಿದೆ. ಮಹಿಳಾ ಪ್ರಯಾಣಿಕರು ‘ಅವಳು’ ಮಹಿಳಾ ಪಿಂಕ್ ಶೌಚಾಲಯಕ್ಕೆ ಹೋಗಿ, ವಾಪಸ್ ಬರುವಂತಾಗಿದೆ.</p>.<p>ಬಸ್ ನಿಲ್ದಾಣ, ಇಂದಿರಾ ಕ್ಯಾಂಟೀನ್, ಮಾರುಕಟ್ಟೆ ಪ್ರದೇಶದ ಮಧ್ಯಭಾಗದಲ್ಲಿದ್ದರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ನೆಲ ಮತ್ತು ಒಂದು ಅಂತಸ್ತಿನ ಕಟ್ಟಡ ಬಳಸದೇ ನಿರುಪಯುಕ್ತವಾಗಿದ್ದು, ನಾಮ ಫಲಕ ನೋಡಿ ಅತ್ತ ಸುಳಿಯುವ ಮಹಿಳೆಯರು ಬೀಗ ಜಡಿದ ಕೊಠಡಿ ನೋಡಿಕೊಂಡು ಹಿಂತಿರುಗುವಂತಾಗಿದೆ.</p>.<p>2021–22ನೇ ಸಾಲಿನ ಅಮೃತ ನಿರ್ಮಲ ಯೋಜನೆಯಡಿ ₹26 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಪಿಂಕ್ ಶೌಚಾಲಯ ಮತ್ತು ಹಾಲುಣಿಸುವ ಕೇಂದ್ರ 2 ವರ್ಷಗಳ ಹಿಂದೆಯೇ ನಿರ್ಮಾಣ ಮಾಡಲಾಗಿದ್ದು, ಜನವರಿ ತಿಂಗಳಲ್ಲಿ ಶಾಸಕ, ನಗರಸಭಾಧ್ಯಕ್ಷರು, ನಗರ ಸಭೆ ಆಯುಕ್ತರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿದ್ದರೂ ಬಳಕೆಗೆ ಸಿಗದಂತಾಗಿದೆ.</p>.<p>ಈ ಕೇಂದ್ರದಲ್ಲಿ ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿ, ಸ್ಯಾನಿಟರಿ ಪ್ಯಾಡ್ ವ್ಯವಸ್ಥೆ, ದೂರದ ಊರಿನಿಂದ ಮಕ್ಕಳೊಂದಿಗೆ ಬರುವವರಿಗಾಗಿ ಹಾಲುಣಿಸುವ ಸೌಲಭ್ಯ, ಜತೆಗೆ ಬಟ್ಟೆ ಬದಲಾಯಿಸಲು ಡ್ರೆಸ್ಸಿಂಗ್ ರೂಂ, ಇಷ್ಟೆಲ್ಲಾ ಸೌಲಭ್ಯ ಒಂದೇ ಸೂರಿನಡಿ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿರುಪಯುಕ್ತವಾಗಿದೆ.</p>.<p>‘ನಗರಸಭೆ ಅಧಿಕಾರಿಗಳು ಅನುದಾನದ ಕೊರತೆ ನೆಪ ಹೇಳಿ ಪಿಂಕ್ ಶೌಚಾಲಯಕ್ಕೆ ಬೀಗ ಹಾಕಿದ್ದಾರೆ. ಪಿಂಕ್ ಶೌಚಾಲಯ ಮಹಿಳೆಯರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಇದು ನಾಚಿಕೆಗೇಡಿನ ಸಂಗತಿ’ ಎಂದು ನಿವಾಸಿ ನಾಗಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಧ್ವನಿಗೂಡಿಸಿದರು.</p>.<p>ಈ ಕುರಿತು ಸಿರುಗುಪ್ಪ ನಗರಸಭೆ ಪೌರಾಯುಕ್ತ ಗುರುಪ್ರಸಾದ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ.</p>.<div><blockquote>ಮಹಿಳಾ ಶೌಚಾಲಯ ನಿರ್ಮಾಣ ಹಂತದಲ್ಲಿದ್ದು ಪಿಂಕ್ ಶೌಚಾಲಯ ಕೇಂದ್ರವನ್ನು ಮಹಿಳೆಯರ ಬಳಕೆಗೆ ನೀಡುವಂತೆ ನಗರಸಭೆಗೆ ಹಲವಾರು ಬಾರಿ ವಿನಂತಿಸಲಾಗಿದೆ. ಆದರೆ ಪ್ರಯೋಜನ ಆಗಿಲ್ಲ</blockquote><span class="attribution"> ಕೆ. ತಿರುಮಲೇಶ್ ಡಿಪೊ ವ್ಯವಸ್ಥಾಪಕ ಸಿರುಗುಪ್ಪ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ:</strong> ನಗರದ ಬಸ್ ನಿಲ್ದಾಣದ ಪಕ್ಕದಲ್ಲಿನ ‘ಅವಳು–ಮಹಿಳಾ ಪಿಂಕ್ ಶೌಚಾಲಯ’ ಮತ್ತು ಮಗುವಿಗೆ ತಾಯಿ ಹಾಲುಣಿಸುವ ಕೇಂದ್ರ, ವಿಶ್ರಾಂತಿ ಕೊಠಡಿ, ಸ್ನಾನಗೃಹ ಕಟ್ಟಡ ಉದ್ಘಾಟನೆಗೊಂಡರೂ ಬಳಕೆಗೆ ಸಿಗದೇ ನಿತ್ಯವೂ ಮಹಿಳೆಯರು ಮುಜುಗರ ಅನುಭವಿಸುವಂತಾಗಿದೆ.</p>.<p>ಕಳೆದ ಐದು ತಿಂಗಳಿನಿಂದ ಸಾರ್ವಜನಿಕ ಬಸ್ ನಿಲ್ದಾಣದ ಮಹಿಳಾ ಶೌಚಾಲಯ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮಹಿಳೆಯರಿಗಾಗಿ ಶೌಚಾಲಯ ಇಲ್ಲದಂತಾಗಿದೆ. ಮಹಿಳಾ ಪ್ರಯಾಣಿಕರು ‘ಅವಳು’ ಮಹಿಳಾ ಪಿಂಕ್ ಶೌಚಾಲಯಕ್ಕೆ ಹೋಗಿ, ವಾಪಸ್ ಬರುವಂತಾಗಿದೆ.</p>.<p>ಬಸ್ ನಿಲ್ದಾಣ, ಇಂದಿರಾ ಕ್ಯಾಂಟೀನ್, ಮಾರುಕಟ್ಟೆ ಪ್ರದೇಶದ ಮಧ್ಯಭಾಗದಲ್ಲಿದ್ದರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ನೆಲ ಮತ್ತು ಒಂದು ಅಂತಸ್ತಿನ ಕಟ್ಟಡ ಬಳಸದೇ ನಿರುಪಯುಕ್ತವಾಗಿದ್ದು, ನಾಮ ಫಲಕ ನೋಡಿ ಅತ್ತ ಸುಳಿಯುವ ಮಹಿಳೆಯರು ಬೀಗ ಜಡಿದ ಕೊಠಡಿ ನೋಡಿಕೊಂಡು ಹಿಂತಿರುಗುವಂತಾಗಿದೆ.</p>.<p>2021–22ನೇ ಸಾಲಿನ ಅಮೃತ ನಿರ್ಮಲ ಯೋಜನೆಯಡಿ ₹26 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಪಿಂಕ್ ಶೌಚಾಲಯ ಮತ್ತು ಹಾಲುಣಿಸುವ ಕೇಂದ್ರ 2 ವರ್ಷಗಳ ಹಿಂದೆಯೇ ನಿರ್ಮಾಣ ಮಾಡಲಾಗಿದ್ದು, ಜನವರಿ ತಿಂಗಳಲ್ಲಿ ಶಾಸಕ, ನಗರಸಭಾಧ್ಯಕ್ಷರು, ನಗರ ಸಭೆ ಆಯುಕ್ತರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿದ್ದರೂ ಬಳಕೆಗೆ ಸಿಗದಂತಾಗಿದೆ.</p>.<p>ಈ ಕೇಂದ್ರದಲ್ಲಿ ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿ, ಸ್ಯಾನಿಟರಿ ಪ್ಯಾಡ್ ವ್ಯವಸ್ಥೆ, ದೂರದ ಊರಿನಿಂದ ಮಕ್ಕಳೊಂದಿಗೆ ಬರುವವರಿಗಾಗಿ ಹಾಲುಣಿಸುವ ಸೌಲಭ್ಯ, ಜತೆಗೆ ಬಟ್ಟೆ ಬದಲಾಯಿಸಲು ಡ್ರೆಸ್ಸಿಂಗ್ ರೂಂ, ಇಷ್ಟೆಲ್ಲಾ ಸೌಲಭ್ಯ ಒಂದೇ ಸೂರಿನಡಿ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿರುಪಯುಕ್ತವಾಗಿದೆ.</p>.<p>‘ನಗರಸಭೆ ಅಧಿಕಾರಿಗಳು ಅನುದಾನದ ಕೊರತೆ ನೆಪ ಹೇಳಿ ಪಿಂಕ್ ಶೌಚಾಲಯಕ್ಕೆ ಬೀಗ ಹಾಕಿದ್ದಾರೆ. ಪಿಂಕ್ ಶೌಚಾಲಯ ಮಹಿಳೆಯರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಇದು ನಾಚಿಕೆಗೇಡಿನ ಸಂಗತಿ’ ಎಂದು ನಿವಾಸಿ ನಾಗಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಧ್ವನಿಗೂಡಿಸಿದರು.</p>.<p>ಈ ಕುರಿತು ಸಿರುಗುಪ್ಪ ನಗರಸಭೆ ಪೌರಾಯುಕ್ತ ಗುರುಪ್ರಸಾದ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ.</p>.<div><blockquote>ಮಹಿಳಾ ಶೌಚಾಲಯ ನಿರ್ಮಾಣ ಹಂತದಲ್ಲಿದ್ದು ಪಿಂಕ್ ಶೌಚಾಲಯ ಕೇಂದ್ರವನ್ನು ಮಹಿಳೆಯರ ಬಳಕೆಗೆ ನೀಡುವಂತೆ ನಗರಸಭೆಗೆ ಹಲವಾರು ಬಾರಿ ವಿನಂತಿಸಲಾಗಿದೆ. ಆದರೆ ಪ್ರಯೋಜನ ಆಗಿಲ್ಲ</blockquote><span class="attribution"> ಕೆ. ತಿರುಮಲೇಶ್ ಡಿಪೊ ವ್ಯವಸ್ಥಾಪಕ ಸಿರುಗುಪ್ಪ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>