<p><strong>ಹೊಸಪೇಟೆ (ವಿಜಯನಗರ): </strong>ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ವಿಜಯನಗರ ಕಬಡ್ಡಿ ಲೀಗ್ ಅಂತಿಮ ಪಂದ್ಯದಲ್ಲಿ ಸುರಪುರ ಹಾಗೂ ಹರಪನಹಳ್ಳಿ ತಂಡಗಳು ಕ್ರಮವಾಗಿ ಮಹಿಳೆಯರು, ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿವೆ.</p>.<p>ಮಹಿಳೆಯರ ವಿಭಾಗದ ಅಂತಿಮ ಹಣಾಹಣಿಯಲ್ಲಿ ಯಾದಗಿರಿ ತಂಡವನ್ನು ಸೋಲಿಸಿ ಸುರಪುರ ಪ್ರಶಸ್ತಿ ಜಯಿಸಿತು. ಹಗರಿಬೊಮ್ಮನಹಳ್ಳಿ ದಬಾಂಗ್ ಮೂರನೇ ಸ್ಥಾನ ಪಡೆಯಿತು.</p>.<p>ಇನ್ನು, ಪುರುಷರ ವಿಭಾಗದಲ್ಲಿ ಹರಪನಹಳ್ಳಿ ತಂಡವು ಜೆ.ಎನ್.ಬಿ. ಹೊಸಪೇಟೆ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಬಳ್ಳಾರಿ ಯೋಧ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.<br />ವಿಜೇತರಿಗೆ ₹1.8 ಲಕ್ಷ, ರನ್ನರ್ ಅಪ್ ತಂಡಕ್ಕೆ ₹81 ಸಾವಿರ ಹಾಗೂ ಮೂರನೇ ಸ್ಥಾನ ಪಡೆದ ತಂಡಕ್ಕೆ ₹54 ಸಾವಿರ ನಗದು, ಟ್ರೋಫಿ ನೀಡಿ ಗೌರವಿಸಲಾಯಿತು. ಮೂರು ದಿನಗಳ ಪಂದ್ಯಾವಳಿಯಲ್ಲಿ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಒಟ್ಟು 80 ತಂಡಗಳು ಪಾಲ್ಗೊಂಡಿದ್ದವು.</p>.<p>ಸಿದ್ದಾರ್ಥ ಸಿಂಗ್, ಎಸ್. ರವಿ, ದುರುಗೋಜಿ ರಾವ್, ಜಿ. ಶಿವಕುಮಾರ, ಸಂದೀಪ್ ಸಿಂಗ್, ವೆಂಕಟೇಶ್, ಮಧುರಚೆನ್ನಶಾಸ್ತ್ರಿ, ಎಂ.ಕೆ. ಸಿರಗುಪ್ಪೆ, ಶಿವಣ್ಣ, ಕಿಚಡಿ ವಸಂತ, ತಾರಿಹಳ್ಳಿ ಜಂಬುನಾಥ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ): </strong>ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ವಿಜಯನಗರ ಕಬಡ್ಡಿ ಲೀಗ್ ಅಂತಿಮ ಪಂದ್ಯದಲ್ಲಿ ಸುರಪುರ ಹಾಗೂ ಹರಪನಹಳ್ಳಿ ತಂಡಗಳು ಕ್ರಮವಾಗಿ ಮಹಿಳೆಯರು, ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿವೆ.</p>.<p>ಮಹಿಳೆಯರ ವಿಭಾಗದ ಅಂತಿಮ ಹಣಾಹಣಿಯಲ್ಲಿ ಯಾದಗಿರಿ ತಂಡವನ್ನು ಸೋಲಿಸಿ ಸುರಪುರ ಪ್ರಶಸ್ತಿ ಜಯಿಸಿತು. ಹಗರಿಬೊಮ್ಮನಹಳ್ಳಿ ದಬಾಂಗ್ ಮೂರನೇ ಸ್ಥಾನ ಪಡೆಯಿತು.</p>.<p>ಇನ್ನು, ಪುರುಷರ ವಿಭಾಗದಲ್ಲಿ ಹರಪನಹಳ್ಳಿ ತಂಡವು ಜೆ.ಎನ್.ಬಿ. ಹೊಸಪೇಟೆ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಬಳ್ಳಾರಿ ಯೋಧ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.<br />ವಿಜೇತರಿಗೆ ₹1.8 ಲಕ್ಷ, ರನ್ನರ್ ಅಪ್ ತಂಡಕ್ಕೆ ₹81 ಸಾವಿರ ಹಾಗೂ ಮೂರನೇ ಸ್ಥಾನ ಪಡೆದ ತಂಡಕ್ಕೆ ₹54 ಸಾವಿರ ನಗದು, ಟ್ರೋಫಿ ನೀಡಿ ಗೌರವಿಸಲಾಯಿತು. ಮೂರು ದಿನಗಳ ಪಂದ್ಯಾವಳಿಯಲ್ಲಿ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಒಟ್ಟು 80 ತಂಡಗಳು ಪಾಲ್ಗೊಂಡಿದ್ದವು.</p>.<p>ಸಿದ್ದಾರ್ಥ ಸಿಂಗ್, ಎಸ್. ರವಿ, ದುರುಗೋಜಿ ರಾವ್, ಜಿ. ಶಿವಕುಮಾರ, ಸಂದೀಪ್ ಸಿಂಗ್, ವೆಂಕಟೇಶ್, ಮಧುರಚೆನ್ನಶಾಸ್ತ್ರಿ, ಎಂ.ಕೆ. ಸಿರಗುಪ್ಪೆ, ಶಿವಣ್ಣ, ಕಿಚಡಿ ವಸಂತ, ತಾರಿಹಳ್ಳಿ ಜಂಬುನಾಥ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>