‘ಇತ್ತೀಚೆಗೆ ‘ಪ್ರಜಾವಾಣಿ’ಯಲ್ಲಿ ಬೆಲ್ಲದ ಗಾಣಗಳ ಕುರಿತ ಬಂದ ವರದಿ ಓದಿದ್ದೆ. ನನಗೂ ಗಾಬರಿಯಾಗಿತ್ತು. ಈ ಕುರಿತು ಕೆಲವರು ದೂರು ಸಹ ಕೊಟ್ಟಿದ್ದರು. ಇಂದು ದಾಳಿ ನಡೆಸಿದಾಗ, ಪೌಡರ್ ರೂಪದ ಸಕ್ಕರೆ, ಹೈಡ್ರೊಪವರ್ ಹೆಸರಿನ ವಿಷಕಾರಕ ರಸಾಯನಿಕ ಬಳಸಿ ಬೆಲ್ಲ ತಯಾರಿಸುತ್ತಿರುವುದು ಗೊತ್ತಾಗಿದೆ. ರಾಮಲಿಂಗ ಫಕೀರಪ್ಪ ಅವರಿಗೆ ಸೇರಿದ ಎರಡು, ಜಗನ್ ಮರಿಸ್ವಾಮಿ, ಮನೋಹರ್, ಕೃಷ್ಣಕಾಂತ್, ಜ್ಞಾನಪ್ಪ, ಒ. ತಾಯಪ್ಪ ಹಾಗೂ ಕೆ. ಆಗಣ್ಣ ಎನ್ನುವವರಿಗೆ ಸೇರಿದ ತಲಾ ಒಂದು ಗಾಣದಲ್ಲಿ ಅಕ್ರಮ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇವರ ವಿರುದ್ಧ ಠಾಣೆಗೆ ದೂರು ಕೊಟ್ಟಿದ್ದು, ಪ್ರಕರಣ ದಾಖಲಾಗಬೇಕಿದೆ’ ಎಂದು ತಹಶೀಲ್ದಾರ್ ಎಚ್. ವಿಶ್ವನಾಥ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.