ಸುರಂಗ ಮಾರ್ಗದಿಂದ ಹೋಗಿ ಬರಲು ಪ್ರತ್ಯೇಕ ಪಥಗಳಿವೆ. ಮೇಲ್ಭಾಗದಿಂದ ರೈಲು ಸಂಚರಿಸುತ್ತದೆ. ಸುರಂಗ ನಿರ್ಮಿಸಿದ ನಂತರ ವಾಹನ ಸಂಚಾರ ಸುಗಮಗೊಂಡಿದೆ. ಆದರೆ, ನಿರ್ವಹಣೆ ಕೊರತೆ ಎದ್ದು ಕಾಣಿಸುತ್ತಿದೆ. ವರ್ಷದ ಹಿಂದೆ ಸುರಂಗದಲ್ಲಿನ ವಿದ್ಯುದ್ದೀಪಗಳು ಕೆಟ್ಟು ಹೋಗಿದ್ದವು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿದಾಗ ವಿದ್ಯುದ್ದೀಪಗಳನ್ನು ಸರಿಪಡಿಸಲಾಗಿತ್ತು. ಪುನಃ ಅವುಗಳು ಹಾಳಾಗಿವೆ.