ಗ್ರಾಮದ ಮಸೀದಿಯ ಮುಂಭಾಗದಲ್ಲಿ ತೋಡಲಾಗಿದ್ದ ಅಲೆ ಕುಣಿಯಲ್ಲಿ ಕೆಂಡವಾಗಿಸಲು ಶನಿವಾರ ಮರದ ದಿಮ್ಮಿಗಳನ್ನು ತಂದು ಹಾಕಲಾಗಿತ್ತು. ಕಟ್ಟಿಗೆ ರಾಶಿಯ ಒಂದು ಬೊಡ್ಡೆಯಲ್ಲಿ ಕಿರೀಟ ಧರಿಸಿದ ಗಣೇಶನ ಮೂರ್ತಿ ಹಾಗೂ ಸೊಂಡಿಲಿನಂತೆ ಕಾಣುವ ರೂಪ ಮೂಡಿರುವುದನ್ನು ಮುಸ್ಲಿಂ ಸಮುದಾಯದ ಯುವಕರು ಗುರುತಿಸಿ, ಹಿರಿಯರಿಗೆ ತಿಳಿಸಿದ್ದಾರೆ. ಈ ಸುದ್ದಿ ಹರಡುತ್ತಿದ್ದಂತೆ ಗ್ರಾಮದ ಜನರು ತಂಡ ತಂಡವಾಗಿ ಬಂದು ವೀಕ್ಷಿಸಿದ್ದಾರೆ.