ರಥೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರು, ದೇವಸ್ಥಾನದ ಆವರಣ ರಸ್ತೆ, ಊರಮ್ಮನ ಬಯಲು, ತೊಟ್ಟಿಲು ಮಠ ಮತ್ತು ಗಚ್ಚಿನಮಠದ ಮುಂದೆ ಜಮಾಯಿಸಿದ್ದರು. ರಾತ್ರಿ 11.45ರ ಸುಮಾರಿಗೆ ಹಿರೇಮಠದಲ್ಲಿ ಸ್ವಾಮಿ ಮೂರ್ತಿಯನ್ನು ಅರ್ಚಕರ ಬಳಗ ಸಮಾಳ ವಾದ್ಯಗಳೊಂದಿಗೆ ಹೊರತಂದು ರಥದಲ್ಲಿ ಕೂರಿಸಿದರು. ಆ ಕ್ಷಣದಲ್ಲಿ ಭಕ್ತರು ಜಯಘೋಷ ಹಾಕುತ್ತಾ ಬಾಳೆಹಣ್ಣು ಅರ್ಪಿಸಿ ಭಕ್ತಿ ಸಮರ್ಪಿಸಿದರು.