<p><strong>ಕೂಡ್ಲಿಗಿ: </strong>ಪತ್ರಿಕೆಯಲ್ಲಿ ಶನಿವಾರ ಪ್ರಕಟಗೊಂಡಿರುವ ‘ಬೀಡಿ ಕಟ್ಟುವವರ ಬವಣೆ’ ವಿಶೇಷ ವರದಿಗೆ ತಕ್ಷಣವೇ ಸ್ಪಂದಿಸಿರುವ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಬೀಡಿ ಕಾರ್ಮಿಕರ ಮಹಿಳಾ ಸಂಘವನ್ನು ರಚಿಸಿ, ಅವರಿಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ. <br /> <br /> ಅಸಂಘಟಿತ ಮಹಿಳಾ ಬೀಡಿ ಕಾರ್ಮಿಕರಿಗೆ ಭವಿಷ್ಯದಲ್ಲಿ ಅನುಕೂಲ ಕಲ್ಪಿಸಲು ಸಂಘವನ್ನು ತಾವೇ ರಚಿಸಿ, ನೋಂದಣಿ ಮಾಡಿಸಿಕೊಡುವುದಾಗಿ ಅವರು ತಿಳಿಸಿದ್ದಾರೆ. ಮನೆ ಇಲ್ಲದೆ ನಿರ್ಗತಿಕರಾಗಿರುವ ನಾಲ್ಕು ಜನ ಫಲಾನುಭವಿ ಕಾರ್ಮಿಕರಿಗೆ ‘ನಮ್ಮ ಮನೆ’ ಯೋಜನೆಯಡಿಯಲ್ಲಿ ಮನೆ ಒದಗಿಸುವುದಾಗಿ ಹೇಳಿದ್ದಾರೆ. <br /> <br /> ಪಡಿತರ ಚೀಟಿ ಇಲ್ಲದ ಕಾರ್ಮಿಕರಿಗೆ ಪಡಿತರ ಚೀಟಿ ಒದಗಿಸಿ, ಪಡಿತರ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಸರ್ಕಾರ ವಿವಿಧ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ಕಾರ್ಮಿಕರ ನಿಧಿಯಿಂದ ಸಾಲ ಸೌಲಭ್ಯಗಳ ಅವಕಾಶವಿದ್ದು, ಶೀಘ್ರದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.<br /> <br /> ಬೀಡಿ ಕಾರ್ಮಿಕರ ಕುಟುಂಬದಲ್ಲಿರುವ ವಿಧವೆಯರು, ವೃದ್ಧರಿಗೆ ಮಾಸಾಶನ ಒದಗಿಸಿಕೊಡುವುದಾಗಿ ಅವರು ದೂರವಾಣಿಯ ಮೂಲಕ ಮಹಿಳಾ ಬೀಡಿ ಕಾರ್ಮಿಕರಿಗೆ ತಿಳಿಸಿದ್ದಾರೆ.<br /> <br /> ಶಾಸಕರ ಪರವಾಗಿ ಆವರ ಆಪ್ತ ಸಹಾಯಕ ಡಾ.ವೆಂಕಟಗಿರಿ ದಳವಾಯಿ, ಮಹಿಳಾ ಬೀಡಿ ಕಾರ್ಮಿಕರಿರುವ ಪ್ರದೇಶಕ್ಕೆ ತೆರಳಿ, ಶಾಸಕರ ಭರವಸೆಗಳನ್ನು ತಿಳಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಬಿಜೆಪಿ ಧುರೀಣ ನಜೀರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡ್ಲಿಗಿ: </strong>ಪತ್ರಿಕೆಯಲ್ಲಿ ಶನಿವಾರ ಪ್ರಕಟಗೊಂಡಿರುವ ‘ಬೀಡಿ ಕಟ್ಟುವವರ ಬವಣೆ’ ವಿಶೇಷ ವರದಿಗೆ ತಕ್ಷಣವೇ ಸ್ಪಂದಿಸಿರುವ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಬೀಡಿ ಕಾರ್ಮಿಕರ ಮಹಿಳಾ ಸಂಘವನ್ನು ರಚಿಸಿ, ಅವರಿಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ. <br /> <br /> ಅಸಂಘಟಿತ ಮಹಿಳಾ ಬೀಡಿ ಕಾರ್ಮಿಕರಿಗೆ ಭವಿಷ್ಯದಲ್ಲಿ ಅನುಕೂಲ ಕಲ್ಪಿಸಲು ಸಂಘವನ್ನು ತಾವೇ ರಚಿಸಿ, ನೋಂದಣಿ ಮಾಡಿಸಿಕೊಡುವುದಾಗಿ ಅವರು ತಿಳಿಸಿದ್ದಾರೆ. ಮನೆ ಇಲ್ಲದೆ ನಿರ್ಗತಿಕರಾಗಿರುವ ನಾಲ್ಕು ಜನ ಫಲಾನುಭವಿ ಕಾರ್ಮಿಕರಿಗೆ ‘ನಮ್ಮ ಮನೆ’ ಯೋಜನೆಯಡಿಯಲ್ಲಿ ಮನೆ ಒದಗಿಸುವುದಾಗಿ ಹೇಳಿದ್ದಾರೆ. <br /> <br /> ಪಡಿತರ ಚೀಟಿ ಇಲ್ಲದ ಕಾರ್ಮಿಕರಿಗೆ ಪಡಿತರ ಚೀಟಿ ಒದಗಿಸಿ, ಪಡಿತರ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಸರ್ಕಾರ ವಿವಿಧ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ಕಾರ್ಮಿಕರ ನಿಧಿಯಿಂದ ಸಾಲ ಸೌಲಭ್ಯಗಳ ಅವಕಾಶವಿದ್ದು, ಶೀಘ್ರದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.<br /> <br /> ಬೀಡಿ ಕಾರ್ಮಿಕರ ಕುಟುಂಬದಲ್ಲಿರುವ ವಿಧವೆಯರು, ವೃದ್ಧರಿಗೆ ಮಾಸಾಶನ ಒದಗಿಸಿಕೊಡುವುದಾಗಿ ಅವರು ದೂರವಾಣಿಯ ಮೂಲಕ ಮಹಿಳಾ ಬೀಡಿ ಕಾರ್ಮಿಕರಿಗೆ ತಿಳಿಸಿದ್ದಾರೆ.<br /> <br /> ಶಾಸಕರ ಪರವಾಗಿ ಆವರ ಆಪ್ತ ಸಹಾಯಕ ಡಾ.ವೆಂಕಟಗಿರಿ ದಳವಾಯಿ, ಮಹಿಳಾ ಬೀಡಿ ಕಾರ್ಮಿಕರಿರುವ ಪ್ರದೇಶಕ್ಕೆ ತೆರಳಿ, ಶಾಸಕರ ಭರವಸೆಗಳನ್ನು ತಿಳಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಬಿಜೆಪಿ ಧುರೀಣ ನಜೀರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>