<p><strong>ಕೂಡ್ಲಿಗಿ:</strong> ಸ್ನೇಹಚೈಲ್ಡ್ ಲೈನ್ ಸಹಾಯವಾಣಿ ಸಂಸ್ಥೆಯ ಕಾರ್ಯಾಚರಣೆಯಿಂದಾಗಿ ಪಟ್ಟಣದ ಹೊರವಲಯದಲ್ಲಿ ಟೆಂಟ್ನಲ್ಲಿ ವಾಸವಾಗಿದ್ದ ಅಲೆಮಾರಿ ಜನಾಂಗದ 3 ಮಕ್ಕಳು ಗುರುವಾರ ಶಾಲೆಗೆ ಸೇರಿವೆ.<br /> <br /> ಪಟ್ಟಣದ ಹೊರವಲಯದಲ್ಲಿ ಬಳ್ಳಾರಿ ರಸ್ತೆಯ್ಲ್ಲಲಿ ರಸ್ತೆಯ ಪಕ್ಕ ಕಳೆದ 15-20 ದಿನಗಳಿಂದ ಅಲೆಮಾರಿ ಜನಾಂಗದವರು ಟೆಂಟ್ ಹಾಕಿಕೊಂಡು ವಾಸವಾಗಿದ್ದು, 2 ಕುಟುಂಬಗಳು ನೆಲೆಯೂರಿವೆ. ಎತ್ತುಗಳಿಗೆ ನಾಲು ಬಡಿಯುವ ವೃತ್ತಿಯ ಈ ಜನಾಂಗ ದಾವಣಗೆರೆಯಿಂದ ಬಂದಿದೆ.<br /> <br /> ಕೂಡ್ಲಿಗಿಯಲ್ಲಿ ಇನ್ನೂ 4 ವರ್ಷ ಇರುವುದಾಗಿ ಜನಾಂಗದ ರಾಜಾಸಾಬ್ ತಿಳಿಸಿದರು. ಮಕ್ಕಳನ್ನು ದಾವಣಗೆರೆಯಲ್ಲಿ ಶಾಲೆಗೆ ಕಳಿಸಲಾಗುತ್ತಿತ್ತು, ತಾವು ಅಲೆಮಾರಿಗಳಾಗಿದ್ದುರಿಂದಲೂ ಹಾಗೂ ಆರ್ಥಿಕ ತೊಂದರೆ ಇರುವುದರಿಂದಲೂ ಮಕ್ಕಳನ್ನು ಶಾಲೆಗೆ ಕಳಿಸಲಾಗುತ್ತಿಲ್ಲ ಎಂದು ಪಾಲಕರು ತಿಳಿಸಿದರು.<br /> <br /> ಸ್ಥಳಕ್ಕೆ ಭೇಟಿ ನೀಡಿದ ಸ್ನೇಹ ಚೈಲ್ಡ್ಲೈನ್ ಸಂಸ್ಥೆಯ ಸದಸ್ಯರು ಪಾಲಕರ ಮನವೊಲಿಸಿ, ತಿಳಿವಳಿಕೆ ಹೇಳಿ ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾದರು.<br /> <br /> ಅಲ್ಲದೆ ಸರ್ಕಾರದ ಸೌಲಭ್ಯಗಳು, ಶಿಕ್ಷಣದಿಂದ ದೊರೆಯುವ ಅರಿವು, ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಮಕ್ಕಳಾದ ಆಶಾಬಾನು (8), ಹುಸೇನ್ಸಾಬ್ (7), ರಿಜ್ವಾನ್ (6)ರನ್ನು ಪಟ್ಟಣದ ಶುಭೋದಯ ಬಾಲಕಾರ್ಮಿಕ ಶಾಲೆಗೆ ದಾಖಲಾತಿ ಮಾಡಲಾಯಿತು.<br /> <br /> ಈ ಸಂದರ್ಭದ್ಲ್ಲಲಿ ಸ್ನೇಹ ಚೈಲ್ಡ್ಲೈನ್ ಸಂಸ್ಥೆಯ ಎರಿಸ್ವಾಮಿ, ಸಹಾಯಕ ಮ್ಲ್ಲಲಿಕಾರ್ಜುನ, ವೆಂಕಟೇಶ್, ಸಮುದಾಯ ಸಂಘಟಕ ಶ್ರಿನಿವಾಸ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡ್ಲಿಗಿ:</strong> ಸ್ನೇಹಚೈಲ್ಡ್ ಲೈನ್ ಸಹಾಯವಾಣಿ ಸಂಸ್ಥೆಯ ಕಾರ್ಯಾಚರಣೆಯಿಂದಾಗಿ ಪಟ್ಟಣದ ಹೊರವಲಯದಲ್ಲಿ ಟೆಂಟ್ನಲ್ಲಿ ವಾಸವಾಗಿದ್ದ ಅಲೆಮಾರಿ ಜನಾಂಗದ 3 ಮಕ್ಕಳು ಗುರುವಾರ ಶಾಲೆಗೆ ಸೇರಿವೆ.<br /> <br /> ಪಟ್ಟಣದ ಹೊರವಲಯದಲ್ಲಿ ಬಳ್ಳಾರಿ ರಸ್ತೆಯ್ಲ್ಲಲಿ ರಸ್ತೆಯ ಪಕ್ಕ ಕಳೆದ 15-20 ದಿನಗಳಿಂದ ಅಲೆಮಾರಿ ಜನಾಂಗದವರು ಟೆಂಟ್ ಹಾಕಿಕೊಂಡು ವಾಸವಾಗಿದ್ದು, 2 ಕುಟುಂಬಗಳು ನೆಲೆಯೂರಿವೆ. ಎತ್ತುಗಳಿಗೆ ನಾಲು ಬಡಿಯುವ ವೃತ್ತಿಯ ಈ ಜನಾಂಗ ದಾವಣಗೆರೆಯಿಂದ ಬಂದಿದೆ.<br /> <br /> ಕೂಡ್ಲಿಗಿಯಲ್ಲಿ ಇನ್ನೂ 4 ವರ್ಷ ಇರುವುದಾಗಿ ಜನಾಂಗದ ರಾಜಾಸಾಬ್ ತಿಳಿಸಿದರು. ಮಕ್ಕಳನ್ನು ದಾವಣಗೆರೆಯಲ್ಲಿ ಶಾಲೆಗೆ ಕಳಿಸಲಾಗುತ್ತಿತ್ತು, ತಾವು ಅಲೆಮಾರಿಗಳಾಗಿದ್ದುರಿಂದಲೂ ಹಾಗೂ ಆರ್ಥಿಕ ತೊಂದರೆ ಇರುವುದರಿಂದಲೂ ಮಕ್ಕಳನ್ನು ಶಾಲೆಗೆ ಕಳಿಸಲಾಗುತ್ತಿಲ್ಲ ಎಂದು ಪಾಲಕರು ತಿಳಿಸಿದರು.<br /> <br /> ಸ್ಥಳಕ್ಕೆ ಭೇಟಿ ನೀಡಿದ ಸ್ನೇಹ ಚೈಲ್ಡ್ಲೈನ್ ಸಂಸ್ಥೆಯ ಸದಸ್ಯರು ಪಾಲಕರ ಮನವೊಲಿಸಿ, ತಿಳಿವಳಿಕೆ ಹೇಳಿ ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾದರು.<br /> <br /> ಅಲ್ಲದೆ ಸರ್ಕಾರದ ಸೌಲಭ್ಯಗಳು, ಶಿಕ್ಷಣದಿಂದ ದೊರೆಯುವ ಅರಿವು, ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಮಕ್ಕಳಾದ ಆಶಾಬಾನು (8), ಹುಸೇನ್ಸಾಬ್ (7), ರಿಜ್ವಾನ್ (6)ರನ್ನು ಪಟ್ಟಣದ ಶುಭೋದಯ ಬಾಲಕಾರ್ಮಿಕ ಶಾಲೆಗೆ ದಾಖಲಾತಿ ಮಾಡಲಾಯಿತು.<br /> <br /> ಈ ಸಂದರ್ಭದ್ಲ್ಲಲಿ ಸ್ನೇಹ ಚೈಲ್ಡ್ಲೈನ್ ಸಂಸ್ಥೆಯ ಎರಿಸ್ವಾಮಿ, ಸಹಾಯಕ ಮ್ಲ್ಲಲಿಕಾರ್ಜುನ, ವೆಂಕಟೇಶ್, ಸಮುದಾಯ ಸಂಘಟಕ ಶ್ರಿನಿವಾಸ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>