ದೇವನಹಳ್ಳಿ: ಪಟ್ಟಣದ ಐತಿಹಾಸಿಕ ಕೋಟೆ ಶ್ರೀವೇಣುಗೋಪಾಲಸ್ವಾಮಿ ಬ್ರಹ್ಮ ರಥೋತ್ಸವ ಸಂಭ್ರಮಾಚರಣೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ವಾರ್ಷಿಕ ಬ್ರಹ್ಮರಥೋತ್ಸವಕ್ಕಾಗಿ ಕಳೆದ ಒಂದು ವಾರದಿಂದ ಸೂರ್ಯ ಮಂಡಲೋತ್ಸವ, ಶೇಷವಾಹನೋತ್ಸವ, ಮೃತ್ತಿಕ ಸಂಗ್ರಹಣ, ಆಂಕುರಾರ್ಪಣ, ಅರವಟಿಗೆ ಸೇವೆ, ಧ್ವಜಾರೋಹಣ, ಪೀಠೋತ್ಸವ, ಹನುಮಂತ ವಾಹನೋತ್ಸವ, ಸಿಂಹ ವಾಹನೋತ್ಸವ, ಬಳೆ ತೊಡಿಸುವ ಶಾಸ್ತ್ರ, ಉಯ್ಯಾಲೋತ್ಸವ, ಕಲ್ಯಾಣೋತ್ಸವ ಮತ್ತು ಗರುಡೋತ್ಸವ ನಡೆದ ನಂತರ ಗಜೇಂದ್ರ ಮೋಕ್ಷ ಸೇರಿದಂತೆ ಪ್ರತಿನಿತ್ಯ ದ್ವಿಕಾಲ ಸೇವೆ, ಪೂಜಾ ವಿಧಿವಿಧಾನಗಳು ನಡೆದವು.