ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ವ್ಹೀಲಿಂಗ್ ಬೈಕ್‌ಗೆ ಬೆಂಕಿ ಇಟ್ಟ ಚಾಲಕ

Last Updated 8 ಆಗಸ್ಟ್ 2021, 4:41 IST
ಅಕ್ಷರ ಗಾತ್ರ

ದೇವನಹಳ್ಳಿ:ದ್ವಿಚಕ್ರವಾಹನವೊಂದರಲ್ಲಿ ದೇವನಹಳ್ಳಿ ರಾಣಿ ಸರ್ಕಲ್‌ನಿಂದ ಆವತಿಯವರೆಗೂ ವ್ಹೀಲಿಂಗ್ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರವಾಹನ ಸವಾರನ ವರ್ತನೆಯಿಂದ ಬೇಸತ್ತಿದ್ದ ಕಾರು ಚಾಲಕರೊಬ್ಬರು, ಸವಾರನನ್ನು ಅಡ್ಡಗಟ್ಟಿ ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ದ್ವಿಚಕ್ರವಾಹನಕ್ಕೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಹೋಬಳಿಯ ಆವತಿಯ ಕೆನರಾ ಬ್ಯಾಂಕಿನ ಸಮೀಪದಲ್ಲಿ ದ್ವಿಚಕ್ರವಾಹನಕ್ಕೆ ಬೆಂಕಿ ಹಚ್ಚಿದ್ದು ಸಂಪೂರ್ಣವಾಗಿ ಸುಟ್ಟುಹೋಗಿದೆ.

ಆಂಧ್ರ‍ಪ್ರದೇಶದ ಕಡಪ ಮೂಲದ ರತ್ನಮಯ್ಯ ಅವರಿಗೆ ಸೇರಿದ ಬೈಕ್‌ ಇದಾಗಿದೆ ಎಂದು ಗುರ್ತಿಸಲಾಗಿದೆ.ಬೈಕ್‌ ಸವಾರ ಹಾಗೂ ಕಾರು ಚಾಲಕ ಪರಾರಿಯಾಗಿದ್ದಾರೆ.

‘ಈ ಪ್ರಕರಣ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ’ ಎಂದು ವಿಜಯಪುರ ಠಾಣೆಯ ಪಿಎಸ್‌ಐ ನಂದೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT