ತಾಲ್ಲೂಕು ಕಚೇರಿಯಲ್ಲಿನ ಪಡಸಾಲೆಯಲ್ಲಿನ ಆಧಾರ್ ನೋಂದಣಿ ಕೇಂದ್ರವು ಉಪಕರಣಗಳ ದುರಸ್ತಿಯಿಂದಾಗಿ ಕಾರ್ಯನಿರ್ವಹಸುತ್ತಿಲ್ಲ. ಜಾತಿ, ಆದಾಯ ಪ್ರಮಾಣ ಪತ್ರ ಒತ್ತಡ ಹಿನ್ನಲೆ ಆಧಾರ್ ನೋಂದಣಿ ಸಿಬ್ಬಂದಿಯನ್ನು ಜಾತಿ,ಆದಾಯ ನೋಂದಣಿಗೆ ವರ್ಗಾಯಿಸಿರುವುದು, ಖಾಸಗಿ ಆಧಾರ್ ಸೆಂಟರ್ಗಳಲ್ಲಿ ದಿನಕ್ಕೆ ಮುವತ್ತು ಆಧಾರ್ ನೋಂದಣಿ ಮಾತ್ರ ಎಂಬ ನಿಯಮದಿಂದಾಗಿ ಜನತೆ ಬೆಳಿಗ್ಗೆ 5ಕ್ಕೆ ಖಾಸಗಿ ಆಧಾರ್ ಕೇಂದ್ರದ ಮುಂದೆ ಸಾಲುಗಟ್ಟಿ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ.