<p><strong>ವಿಜಯಪುರ: </strong>ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ತಕ್ಷಣವೇ ರಾಜ್ಯದ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ. ಮಾಧುಸ್ವಾಮಿ ಭವಿಷ್ಯ ನುಡಿದರು.</p>.<p>ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.</p>.<p>ರಾಜ್ಯದಲ್ಲಿ 20 ಸ್ಥಾನಗಳು ಬಿಜೆಪಿಗೆ ಲಭಿಸಿದರೆ ಸಾಕಷ್ಟು ಮಂದಿ ಶಾಸಕರು ಬಿಜೆಪಿಗೆ ಬರುತ್ತಾರೆ. ಕಾಂಗ್ರೆಸ್, ಜೆಡಿಎಸ್ ಲೋಕಸಭಾ ಚುನಾವಣೆಗಾಗಿ ಮಾತ್ರವೇ ಒಂದಾಗಿವೆ. ಈ ರಾಜ್ಯದ ಜನರ ದೃಷ್ಟಿಯಿಂದ ಮೈತ್ರಿ ಆಗಿಲ್ಲ. ಅಧಿಕಾರದ ಆಸೆಯಿಂದ ಒಂದಾಗಿದ್ದಾರೆ ಎಂದು ದೂರಿದರು.</p>.<p>ಲೋಕಸಭಾ ಚುನಾವಣೆ ಮುಗಿದಿದೆ. ಸಿದ್ದರಾಮಯ್ಯ ಅವರೂ ಜೆಡಿಎಸ್ ನೊಂದಿಗೆ ರಾಜಿಯಾಗಲ್ಲ. ಹೈಕಮಾಂಡ್ನಿಂದ ಆದೇಶ ಬಂದಿರುವ ಕಾರಣ ಅವರೊಂದಿಗೆ ಕೈ ಜೋಡಿಸಿದ್ದಾರೆ ಎಂದರು.</p>.<p>‘ಈಗ ಅವರಿಗೆಲ್ಲ ಜೆಡಿಎಸ್ನವರ ನಡುವಳಿಕೆಯಿಂದ ಕಷ್ಟವಾಗಿದೆ. ಸರ್ಕಾರ ಬೀಳುತ್ತದೆ. ಹಣ್ಣು ತಾನಾಗಿಯೇ ಬಂದು ನಮ್ಮ ಅಂಗಳಕ್ಕೆ ಬೀಳುತ್ತದೆ’ ಎಂದರು.</p>.<p>‘ನಾವೇನು ಅದಕ್ಕೆ ಹೊಡೆದು ಗಾಯ ಮಾಡಿ ಬೀಳಿಸಿಕೊಳ್ಳಬೇಕಾಗಿಲ್ಲ. ಸಿದ್ದರಾಮಯ್ಯ ಕೂಡಾ ಈಗ ತಟಸ್ಥರಾಗಿಲ್ಲ, ಅವರು ತಟಸ್ಥರಾಗಿದ್ದಿದ್ದರೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಭಾಷಣ ಯಾಕ್ ಮಾಡ್ತಿದ್ರು. ದೇವೇಗೌಡರನ್ನು ತುಮಕೂರಿಗೆ ತಂದು ಬಿಟ್ಟಿದ್ದು ಪರಮೇಶ್ವರ ಅವರಿಗೂ ಇಷ್ಟವಿಲ್ಲ’ ಎಂದು ತಿಳಿಸಿದರು.</p>.<p>‘ಕುಮಾರಸ್ವಾಮಿ ಆದ ನಂತರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತ ಮಠದಲ್ಲಿ ಒಪ್ಪಂದ ಆಗಿದೆ. ಅವರಲ್ಲೇ ಮೂರು ಮಂದಿ ಮುಖ್ಯಮಂತ್ರಿ ಸ್ಥಾನದ ರೇಸ್ನಲ್ಲಿದ್ದಾರೆ. ಯಾರಿಗೆ ಒಲಿಯುತ್ತೆ ಕಾದು ನೋಡಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ತಕ್ಷಣವೇ ರಾಜ್ಯದ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ. ಮಾಧುಸ್ವಾಮಿ ಭವಿಷ್ಯ ನುಡಿದರು.</p>.<p>ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.</p>.<p>ರಾಜ್ಯದಲ್ಲಿ 20 ಸ್ಥಾನಗಳು ಬಿಜೆಪಿಗೆ ಲಭಿಸಿದರೆ ಸಾಕಷ್ಟು ಮಂದಿ ಶಾಸಕರು ಬಿಜೆಪಿಗೆ ಬರುತ್ತಾರೆ. ಕಾಂಗ್ರೆಸ್, ಜೆಡಿಎಸ್ ಲೋಕಸಭಾ ಚುನಾವಣೆಗಾಗಿ ಮಾತ್ರವೇ ಒಂದಾಗಿವೆ. ಈ ರಾಜ್ಯದ ಜನರ ದೃಷ್ಟಿಯಿಂದ ಮೈತ್ರಿ ಆಗಿಲ್ಲ. ಅಧಿಕಾರದ ಆಸೆಯಿಂದ ಒಂದಾಗಿದ್ದಾರೆ ಎಂದು ದೂರಿದರು.</p>.<p>ಲೋಕಸಭಾ ಚುನಾವಣೆ ಮುಗಿದಿದೆ. ಸಿದ್ದರಾಮಯ್ಯ ಅವರೂ ಜೆಡಿಎಸ್ ನೊಂದಿಗೆ ರಾಜಿಯಾಗಲ್ಲ. ಹೈಕಮಾಂಡ್ನಿಂದ ಆದೇಶ ಬಂದಿರುವ ಕಾರಣ ಅವರೊಂದಿಗೆ ಕೈ ಜೋಡಿಸಿದ್ದಾರೆ ಎಂದರು.</p>.<p>‘ಈಗ ಅವರಿಗೆಲ್ಲ ಜೆಡಿಎಸ್ನವರ ನಡುವಳಿಕೆಯಿಂದ ಕಷ್ಟವಾಗಿದೆ. ಸರ್ಕಾರ ಬೀಳುತ್ತದೆ. ಹಣ್ಣು ತಾನಾಗಿಯೇ ಬಂದು ನಮ್ಮ ಅಂಗಳಕ್ಕೆ ಬೀಳುತ್ತದೆ’ ಎಂದರು.</p>.<p>‘ನಾವೇನು ಅದಕ್ಕೆ ಹೊಡೆದು ಗಾಯ ಮಾಡಿ ಬೀಳಿಸಿಕೊಳ್ಳಬೇಕಾಗಿಲ್ಲ. ಸಿದ್ದರಾಮಯ್ಯ ಕೂಡಾ ಈಗ ತಟಸ್ಥರಾಗಿಲ್ಲ, ಅವರು ತಟಸ್ಥರಾಗಿದ್ದಿದ್ದರೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಭಾಷಣ ಯಾಕ್ ಮಾಡ್ತಿದ್ರು. ದೇವೇಗೌಡರನ್ನು ತುಮಕೂರಿಗೆ ತಂದು ಬಿಟ್ಟಿದ್ದು ಪರಮೇಶ್ವರ ಅವರಿಗೂ ಇಷ್ಟವಿಲ್ಲ’ ಎಂದು ತಿಳಿಸಿದರು.</p>.<p>‘ಕುಮಾರಸ್ವಾಮಿ ಆದ ನಂತರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತ ಮಠದಲ್ಲಿ ಒಪ್ಪಂದ ಆಗಿದೆ. ಅವರಲ್ಲೇ ಮೂರು ಮಂದಿ ಮುಖ್ಯಮಂತ್ರಿ ಸ್ಥಾನದ ರೇಸ್ನಲ್ಲಿದ್ದಾರೆ. ಯಾರಿಗೆ ಒಲಿಯುತ್ತೆ ಕಾದು ನೋಡಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>