<p><strong>ದೇವನಹಳ್ಳಿ:</strong> ಮೂಢನಂಬಿಕೆ, ಜಾತಿಭೇದ, ಕಂದಾಚಾರ ಮತ್ತು ಅಸಮಾನತೆ ವಿರುದ್ಧ ವಚನ ಮೂಲಕ ಧೈರ್ಯವಾಗಿ ಪ್ರಶ್ನೆ ಎತ್ತಿ ಸಮಾಜದಲ್ಲಿ ಚೇತನ ಮೂಡಿಸಿದ 12ನೇ ಶತಮಾನದ ಶರಣ ಅಂಬಿಗರ ಚೌಡಯ್ಯ ಅವರ ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿದೆ ಎಂದು ತಹಶೀಲ್ದಾರ್ ಎಂ. ಅನಿಲ್ ಹೇಳಿದರು.</p>.<p>ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ನಡೆದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದರು.</p>.<p>ಅಂಬಿಗರ ಚೌಡಯ್ಯ ಅವರು ಕೇವಲ ದೋಣಿ ಚಲಿಸುವ ಅಂಬಿಗನಲ್ಲ, ಭವಸಾಗರ ದಾಟಿಸುವ ತತ್ವಜ್ಞಾನಿ. ‘ಚಾಟಿ ಏಟಿನ ಶರಣ’ ಎಂದೇ ಖ್ಯಾತರಾದ ಅವರು ಅಧಿಕಾರ, ಅಹಂಕಾರ ಮತ್ತು ಅಜ್ಞಾನವನ್ನು ಪ್ರಶ್ನಿಸಿ ಸಮಾನತೆಯ ಸಮಾಜದ ಕನಸು ಕಂಡವರು ಎಂದರು.</p>.<p>ಅನುಭವವೇ ಧರ್ಮ, ಸತ್ಯವೇ ಮಾರ್ಗ ಎಂಬ ನಿಲುವಿನೊಂದಿಗೆ ಬದುಕಿದ ಅವರು ಸಮಾಜದ ಅಂಕುಡೊಂಕುಗಳನ್ನು ವಚನಗಳ ಮೂಲಕ ತೀಕ್ಷ್ಣವಾಗಿ ಬಯಲು ಮಾಡಿದರು ಎಂದರು.</p>.<p>ಅಂಬಿಗರ ಚೌಡಯ್ಯ ಯುವಕ ಸಂಘದ ಅಧ್ಯಕ್ಷ ಸತೀಶ್ ಮಾತನಾಡಿ, ಶ್ರಮದ ಗೌರವ, ಆತ್ಮಗೌರವ ಮತ್ತು ಮಾನವೀಯತೆಯ ಸಂದೇಶಗಳನ್ನು ನೀಡಿದ ಚೌಡಯ್ಯ ಅವರ ವಿಚಾರಗಳು ಸಮುದಾಯದ ಏಳಿಗೆಗೆ ದಿಕ್ಕು ತೋರಿಸುತ್ತವೆ ಎಂದರು.</p>.<p>ಗಂಗಾಮತಸ್ಥ ಬೆಸ್ತರಸಂಘದ ಅಧ್ಯಕ್ಷ ರಾಮಾಂಜಿನಪ್ಪ, ಬಸವಣ್ಣನವರ ಅನುಭವ ಮಂಟಪದ ಸಮಾನ ಭೂಮಿಕೆಯ ಚಿಂತನೆಗೆ ಚೌಡಯ್ಯ ಅವರ ಕೊಡುಗೆ ಮಹತ್ವದ್ದಾಗಿದೆ. ಲಭ್ಯವಿರುವ 171 ವಚನಗಳು ಆತ್ಮಚಿಂತನೆ, ಶಿವಭಕ್ತಿ ಮತ್ತು ಸಾಮಾಜಿಕ ನ್ಯಾಯದ ಸಂದೇಶ ನೀಡುತ್ತವೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ:</strong> ಮೂಢನಂಬಿಕೆ, ಜಾತಿಭೇದ, ಕಂದಾಚಾರ ಮತ್ತು ಅಸಮಾನತೆ ವಿರುದ್ಧ ವಚನ ಮೂಲಕ ಧೈರ್ಯವಾಗಿ ಪ್ರಶ್ನೆ ಎತ್ತಿ ಸಮಾಜದಲ್ಲಿ ಚೇತನ ಮೂಡಿಸಿದ 12ನೇ ಶತಮಾನದ ಶರಣ ಅಂಬಿಗರ ಚೌಡಯ್ಯ ಅವರ ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿದೆ ಎಂದು ತಹಶೀಲ್ದಾರ್ ಎಂ. ಅನಿಲ್ ಹೇಳಿದರು.</p>.<p>ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ನಡೆದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದರು.</p>.<p>ಅಂಬಿಗರ ಚೌಡಯ್ಯ ಅವರು ಕೇವಲ ದೋಣಿ ಚಲಿಸುವ ಅಂಬಿಗನಲ್ಲ, ಭವಸಾಗರ ದಾಟಿಸುವ ತತ್ವಜ್ಞಾನಿ. ‘ಚಾಟಿ ಏಟಿನ ಶರಣ’ ಎಂದೇ ಖ್ಯಾತರಾದ ಅವರು ಅಧಿಕಾರ, ಅಹಂಕಾರ ಮತ್ತು ಅಜ್ಞಾನವನ್ನು ಪ್ರಶ್ನಿಸಿ ಸಮಾನತೆಯ ಸಮಾಜದ ಕನಸು ಕಂಡವರು ಎಂದರು.</p>.<p>ಅನುಭವವೇ ಧರ್ಮ, ಸತ್ಯವೇ ಮಾರ್ಗ ಎಂಬ ನಿಲುವಿನೊಂದಿಗೆ ಬದುಕಿದ ಅವರು ಸಮಾಜದ ಅಂಕುಡೊಂಕುಗಳನ್ನು ವಚನಗಳ ಮೂಲಕ ತೀಕ್ಷ್ಣವಾಗಿ ಬಯಲು ಮಾಡಿದರು ಎಂದರು.</p>.<p>ಅಂಬಿಗರ ಚೌಡಯ್ಯ ಯುವಕ ಸಂಘದ ಅಧ್ಯಕ್ಷ ಸತೀಶ್ ಮಾತನಾಡಿ, ಶ್ರಮದ ಗೌರವ, ಆತ್ಮಗೌರವ ಮತ್ತು ಮಾನವೀಯತೆಯ ಸಂದೇಶಗಳನ್ನು ನೀಡಿದ ಚೌಡಯ್ಯ ಅವರ ವಿಚಾರಗಳು ಸಮುದಾಯದ ಏಳಿಗೆಗೆ ದಿಕ್ಕು ತೋರಿಸುತ್ತವೆ ಎಂದರು.</p>.<p>ಗಂಗಾಮತಸ್ಥ ಬೆಸ್ತರಸಂಘದ ಅಧ್ಯಕ್ಷ ರಾಮಾಂಜಿನಪ್ಪ, ಬಸವಣ್ಣನವರ ಅನುಭವ ಮಂಟಪದ ಸಮಾನ ಭೂಮಿಕೆಯ ಚಿಂತನೆಗೆ ಚೌಡಯ್ಯ ಅವರ ಕೊಡುಗೆ ಮಹತ್ವದ್ದಾಗಿದೆ. ಲಭ್ಯವಿರುವ 171 ವಚನಗಳು ಆತ್ಮಚಿಂತನೆ, ಶಿವಭಕ್ತಿ ಮತ್ತು ಸಾಮಾಜಿಕ ನ್ಯಾಯದ ಸಂದೇಶ ನೀಡುತ್ತವೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>