ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಹೇಮಾವತಿ ನೇತೃತ್ವದ ತಂಡವು ದಾಬಸ್ ಪೇಟೆಯ ಮೂಲವ್ಯಾಧಿ ಚಿಕಿತ್ಸಾಲಯ, ಪೆಮ್ಮನಹಳ್ಳಿಯ ತಿರುಮಲ, ನರಸೀಪುರದ ಮಾರುತಿ ಹಾಗೂ ನಿಡವಂದದ ಶ್ರೀಮಾರುತಿ, ಶ್ರೀನಂದಿ ಮತ್ತು ಶ್ರೀಸಿದ್ಧಗಂಗಾ ಕ್ಲಿನಿಕ್ಗಳ ಪರಿಶೀಲನೆಗೆ ತೆರಳಿತು. ಅಧಿಕಾರಿಗಳು ಬರುವ ಮುನ್ಸೂಚನೆ ದೊರಕಿದ್ದರಿಂದ ಈ ಕ್ಲಿನಿಕ್ಗಳು ತೆರೆದಿರಲಿಲ್ಲ. ಅಧಿಕಾರಿಗಳು ಬಾಗಿಲಿನ ಬೀಗಕ್ಕೆ ಸೀಲ್ ಹಾಕಿ, ನೋಟಿಸ್ ಅಂಟಿಸಿದರು.