ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುದದ್ವಾರದಲ್ಲಿ 1 ಕೆ.ಜಿ ಚಿನ್ನ ಸಾಗಿಸುತ್ತಿದ್ದ ಬಹರೇನ್‌ ಪ್ರಯಾಣಿಕ ಸೆರೆ

Last Updated 9 ಮಾರ್ಚ್ 2023, 8:25 IST
ಅಕ್ಷರ ಗಾತ್ರ

ದೇವನಹಳ್ಳಿ: ಗುದದ್ವಾರದಲ್ಲಿ ಒಂದು ಕೆ.ಜಿ ಗೂ ಅಧಿಕ ಚಿನ್ನವನ್ನು ಅಕ್ರಮ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನೊಬ್ಬ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸಿಕ್ಕಿಬಿದ್ದಿದ್ದಾನೆ.

ಬೇಹರೇನ್ ನಿಂದ ಆಗಮಿಸಿದ ಪ್ರಯಾಣಿಕ ನಾಲ್ಕು ಕ್ಯಾಪ್ಸುಲ್ ಗಳಲ್ಲಿ ಪೆಸ್ಟ್ ರೂಪದ ಚಿನ್ನವನ್ನು ಗುದದಲ್ಲಿ ಇರಿಸಿದ್ದ.
ಖಚಿತ ಮಾಹಿತಿಯ ಆಧಾರದ ಮೇಲೆ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬೇಹರೇನ್ ನಿಂದ ಬಂದ ಎಲ್ಲ ಪ್ರಯಾಣಿಕರನ್ನು ಶೋಧನೆ ಮಾಡಿದಾಗ ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ.

ಬಂಧಿತನಿಂದ ಒಟ್ಟು 1,171 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ₹65.03 ಲಕ್ಷ ಎಂದು‌ ಅಂದಾಜಿಸಲಾಗಿದೆ.
ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT