ಕುದೂರು: ಮಾಗಡಿ - ತಾಳೇಕೆರೆ ಮುಖ್ಯ ರಸ್ತೆಯ ಪ್ರಸಾದ್ ನಗರ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.
ಕುಣಿಗಲ್ ತಾಲ್ಲೂಕಿನ ಕುಂದೂರು ಗ್ರಾಮದ ಜಿ. ಲಿಖಿತ್ (27) ಮೃತರು.
ಮೇ 7ರಂದು ಮಾಗಡಿ - ತಾಳೇಕೆರೆ ಮುಖ್ಯ ರಸ್ತೆಯಲ್ಲಿ ಲಿಖಿತ್ ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಆಯತಪ್ಪಿ ಬಿದಿದ್ದರು. ಇದರಿಂದ ತಲೆ, ಕೈ–ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿತ್ತು.