ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ದೇಶದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೇ ತನ್ನ ಮೂಲ ಅಜೆಂಡಾವನ್ನು ನೆರವೇರಿಸಿಕೊಳ್ಳಲು ಹೊರಟಿದೆ. ಸಂವಿಧಾನದಿಂದ ಹಿಡಿದು ಈ ದೇಶದ ಜನಸಾಮಾನ್ಯರ ಬೆನ್ನುಮೂಳೆ ಮುರಿಯುವಂತಹ ಸಾಹಸಕ್ಕೆ ಕೈಹಾಕಿದೆ. ದೇಶದ ಬೆನ್ನೆಲುಬಾದ ರೈತರು ಬೀದಿಗೆ ಬಂದಿದ್ದಾರೆ. ನೋಟು ಅಮಾನೀಕರಣ ಮಾಡಿದ ನಂತರ ಕಪ್ಪುಹಣ ದೇಶಕ್ಕೆ ವಾಪಸಾಗಲಿದೆ ಎಂದು ದೇಶದ ಜನರು ಬಯಸಿದ್ದರು. ಅದು ನೆರವೇರುವ ಬದಲಿಗೆ ಅಕ್ರಮವಾಗಿ ಸಂಪಾದನೆ ಮಾಡಿಕೊಂಡಿರುವ ಕಪ್ಪುಹಣವನ್ನು ಭದ್ರಪಡಿಸಿಕೊಳ್ಳಲಿಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಟೀಕಿಸಿದರು.