ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ರೆಸಾರ್ಟ್‌ ಬಿಲ್‌ ಪಾವತಿಸದೆ ಉದ್ಯಮಿ ಪರಾರಿ

Last Updated 28 ನವೆಂಬರ್ 2021, 6:09 IST
ಅಕ್ಷರ ಗಾತ್ರ

ದೇವನಹಳ್ಳಿ:ಪಟ್ಟಣ ಹೊರವಲಯದಲ್ಲಿರುವ ಬ್ರಿಗೇಡ್ ಅರ್ಚೆಡ್ ಸಿಗ್ನೆಚರ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಉದ್ಯಮಿಯೊಬ್ಬರು ಸುಮಾರು ₹ 3.2 ಲಕ್ಷ ಬಿಲ್ ಬಾಕಿ ಪಾವತಿಸದೆ ಪರಾರಿಯಾಗಿರುವ ಘಟನೆ ನಡೆದಿದೆ.

ಐಷಾರಾಮಿ ರೆಸಾರ್ಟಿನಲ್ಲಿ ತಿಂಗಳುಗಟ್ಟಲೆ ವಾಸವಾಗಿದ್ದ ಕೆ. ರಾಜೇಶ್ ಎಂಬುವರು ಬಿಲ್ ಪಾವತಿಸದೆ ಪರಾರಿಯಾಗಿದ್ದು, ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

2020ರಿಂದಲೂ ಆಗಾಗ್ಗೆ ರಾಜೇಶ್ ಈ ರೆಸಾರ್ಟ್‌ಗೆ ಬಂದು ಹೋಗುತ್ತಿದ್ದರು. ಅವರು ಮೂಲತಃ ಆಂಧ್ರಪ್ರದೇಶದ ಪುಟ್ಟಪರ್ತಿಯ ನಿವಾಸಿ. ಜುಲೈನಿಂದ ರೇಸಾರ್ಟಿಗೆ ಬಂದು ನೆಲೆಸಿದ್ದರು. ಸೆಪ್ಟೆಂಬರ್‌ನಲ್ಲಿ ₹ 8 ಲಕ್ಷ ಬಿಲ್ ಪಾವತಿಸಿದ್ದರು. ನಂತರವೂ ವಾಸವಿದ್ದ ಅವರು ನ. 11ರಂದು ತನ್ನ ಕಾರಿನಲ್ಲಿ ರೆಸಾರ್ಟ್‌ನಿಂದ ಹೊರಹೋದವರು ಹಿಂತಿರುಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದಿನಕ್ಕೆ ಊಟ, ವಸತಿ ಸೇರಿ ಕೊಠಡಿ ಬಾಡಿಗೆ ₹ 6,500 ಮತ್ತು ಶೇ 12ರಷ್ಟು ತೆರಿಗೆ ಪಾವತಿಸಬೇಕಿದೆ. ಆದರೆ, ರೆಸಾರ್ಟ್‌ನಲ್ಲಿ 41 ದಿನ ತಂಗಿದ್ದಕ್ಕೆ ಸಂಬಂಧಿಸಿದ ಬಿಲ್ ಪಾವತಿ ಮಾಡದೆ ಸಿಬ್ಬಂದಿಗೂ ತಿಳಿಸದೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT